Site icon Vistara News

Viral video: ಪ್ರವಾಸಿಗರ ವಾಹನ ಅಡ್ಡಗಟ್ಟಿ ನಿಂತ ಆನೆ; ಗಣಪತಿ ಮಂತ್ರ ಜಪಿಸಿದ ಕೂಡಲೇ ಒಲಿದು ದಾರಿಬಿಟ್ಟನಾ ಗಜರಾಜ!

#image_title

ಚಿಕ್ಕಮಗಳೂರು: ಪ್ರವಾಸಿಗರ ವಾಹನಕ್ಕೆ ಅಡ್ಡಗಟ್ಟಿನಿಂತ ಕಾಡಾನೆಯೊಂದು ಗಣಪತಿ ಸೇರಿದಂತೆ ನಾನಾ ದೇವರ ಮಂತ್ರ ಜಪಿಸಿದ ಕೂಡಲೇ ಒಲಿದು ದಾರಿಬಿಟ್ಟು ಕೊಟ್ಟ ಘಟನೆ ನಡೆದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗುತ್ತಿದೆ.

ಪ್ರವಾಸಕ್ಕೆಂದು ಕಾರಿನಲ್ಲಿ ಐದಾರು ಮಂದಿ ಹೊರಟಿದ್ದರು. ಈ ವೇಳೆ ಮಾರ್ಗ ಮಧ್ಯೆ ಕಾಡಾನೆಯೊಂದು ಅಡ್ಡಗಟ್ಟಿ ನಿಂತಿತ್ತು. ಕೂಗಳತೆ ದೂರದಲ್ಲಿದ್ದ ಕಾಡಾನೆಯನ್ನು ಕಂಡೊಂಡನೆ ವಾಹನವನ್ನು ಹಿಂದಕ್ಕೆ ತೆಗೆದುಕೊಂಡಿದ್ದರು. ಆದರೂ ಬಿಡದ ಕಾಡಾನೆಯು ಕಾರಿನತ್ತ ಓಡೋಡಿ ಬಂದಿತ್ತು. ಕಾರಿನಲ್ಲಿದ್ದವರೆಲ್ಲರೂ ಇನ್ನೇನು ನಾವೆಲ್ಲ ಆನೆ ತುಳಿತಕ್ಕೆ ಸತ್ತು ಹೋಗುತ್ತೇವೆ ಎಂದು ನಡುಗಿದ್ದರು.

ದಾರಿ ಬಿಟ್ಟು ಕೊಟ್ಟ ಕಾಡಾನೆ

ಕಾರಿನಲ್ಲಿದ್ದ ಮಹಿಳೆಯರೆಲ್ಲ ಗಾಬರಿಯಾಗಿ ಆನೆ ಬಂದೇ ಬಿಡ್ತು.. ಕೃಷ್ಣಾ ವಾಸುದೇವಾ.. ಎನ್ನುತ್ತಾ ಜೀವ ಕೈಲಿ ಹಿಡಿದು ಕುಳಿತಿದ್ದರು. ಕಾಡಾನೆ ಸಮೀಪ ಬಂದೊಡನೆ ಆತಂಕಕ್ಕೆ ಒಳಗಾಗಿ ಸಾಮೂಹಿಕವಾಗಿ ಗಣಪತಿ ಮಂತ್ರ ಹೇಳಲು ಶುರು ಮಾಡಿದರು. ಕಾರು ಹಿಂದೆ ಹೋದಂತೆಲ್ಲ ಆನೆ ಕೂಡಾ ಮುಂದೆ ಮುಂದೆ ಬರುತ್ತಿತ್ತು.

ಇದನ್ನೂ ಓದಿ: Child theft in Bengaluru: ಮನೆಯೊಳಗೆ ತಾಯಿ ಜತೆ ಬೆಚ್ಚಗೆ ಮಲಗಿದ್ದ ಮಗುವನ್ನು ಕದ್ದೊಯ್ದ ಕಳ್ಳಿ; ಮತ್ತೆ ಹೆತ್ತವರ ಮಡಿಲು ಸೇರಿದ್ದೇ ರೋಚಕ!

ಈ ವೇಳೆ ವಿಘ್ನ ವಿನಾಶಕನ ಮಂತ್ರವನ್ನು ಜಪಿಸುತ್ತಿದ್ದಂತೆಯೇ ಸಮಾಧಾನಗೊಂಡಂತೆ ಕಂಡ ಕಾಡಾನೆ, ಕಾರಿನಿಂದ ಪಕ್ಕಕ್ಕೆ ಸರಿದಿದೆ. ಮಾತ್ರವಲ್ಲದೆ ಮುಂದೆ ಹೋಗುತ್ತಿದ್ದಂತೆ ಸೊಂಡಿಲು ಎತ್ತಿ ಆಶೀರ್ವಾದ ಮಾಡಿದೆ! ಇದರಿಂದ ಗಜರಾಜನ ಆಶೀರ್ವಾದ ಸಿಕ್ತು ಎಂದು ಪ್ರವಾಸಿಗರು ಖುಷಿ ಆಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version