Site icon Vistara News

Vistara News Launch | ಮಾಧ್ಯಮ ರಾಷ್ಟ್ರ ಕಟ್ಟುವ ಕಾಯಕ ಮಾಡಲಿ: ಸಿ.ಟಿ ರವಿ

ct ravi

ಬೆಂಗಳೂರು: ಧೈರ್ಯಶಾಲಿಯಾದವನು ಮಾತ್ರ ಅಲೆಗಳನ್ನು ನಿರ್ಲಕ್ಷಿಸಿ ಸಮುದ್ರಕ್ಕಿಳಿಯುತ್ತಾನೆ. ಮಾಧ್ಯಮ ಸಂಸ್ಥೆಯೊಂದನ್ನು ಕಟ್ಟುವುದು ಸಮುದ್ರಕ್ಕೆ ಇಳಿದಂತೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಬಣ್ಣಿಸಿದರು.

ವಿಸ್ತಾರ ನ್ಯೂಸ್‌ ಟಿವಿ ವಾಹಿನಿ ಟಿಆರ್‌ಪಿಯ ಅಲೆಯನ್ನು ದಾಟಿ ದಡ ಸೇರಲಿ ಎಂಬುದು ಹಾರೈಕೆ. ಆಶಯದಲ್ಲಿ ಘೋಷಿಸಿಕೊಂಡಂತೆ ಈ ಮಾಧ್ಯಮ ಜನಪ್ರಿಯತೆಯ ಹಿಂದೆ ಬೀಳದೆ ಜನಪರವಾಗಿರಲಿ. ರಾಷ್ಟ್ರ ಕಟ್ಟುವ ಕಾರ್ಯವನ್ನು ಮಾಡಲಿ ಎಂದು ಹಾರೈಸುತ್ತೇನೆ ಎಂದು ರವಿ ನುಡಿದರು.

ಈ ಸಂದರ್ಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಸ್ವಾಮೀಜಿ, ಶ್ರೀ ಮಾದಾರ ಚೆನ್ನಯ್ಯ ಮಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಪಸ್ಥಿತರಿದ್ದರು.

Exit mobile version