Site icon Vistara News

ವಿಸ್ತಾರ ನ್ಯೂಸ್‌ ಯುಗಾದಿ ಕಥಾಸ್ಪರ್ಧೆ: ಇತಿಹಾಸ ಬರೆದ ಕಥಾಪ್ರವಾಹ; ಟಾಪ್‌ 25 ಕಥೆಗಾರರ ಪಟ್ಟಿ ಇಲ್ಲಿದೆ!

Yugadi katha spardhe

ಫೆಬ್ರವರಿ ಮೊದಲ ವಾರದಲ್ಲಿ ʼವಿಸ್ತಾರ ನ್ಯೂಸ್‌ ಯುಗಾದಿ ಕಥಾಸ್ಪರ್ಧೆ-2023ʼ ಘೋಷಣೆ ಮಾಡಿದಾಗ, ಮುಂದೆ ಒದಗಬಹುದಾದ ಸಿಹಿ ಆಘಾತದ ಅಂದಾಜು ನಮಗೆ ಇರಲೇ ಇಲ್ಲ. ಎಲ್ಲ ದೃಷ್ಟಿಯಿಂದಲೂ ಇದೊಂದು ಐತಿಹಾಸಿಕ ಕಥಾಸ್ಪರ್ಧೆಯಾಗಿದೆ. ಹಿಂದೆಂದೂ ಈ ಪ್ರಮಾಣದ ಬಹುಮಾನದ ಮೊತ್ತ ಯಾವ ಸ್ಪರ್ಧೆಯಲ್ಲೂ ಇರಲಿಲ್ಲ. ಹಾಗೂ ಟಿವಿ ಮಾಧ್ಯಮವೊಂದು ಆಯೋಜಿಸುತ್ತಿರುವ ಮೊದಲ ಸಣ್ಣಕಥಾ ಸ್ಪರ್ಧೆಯೂ ಇದಾಗಿದೆ.

ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲಾಗಬೇಕು, ಉತ್ತಮ ಕಥೆಗಾರರಿಗೆ ಪ್ರೋತ್ಸಾಹ ದೊರೆಯಬೇಕು, ಕನ್ನಡದ ಸಣ್ಣಕಥೆಗಳು ರಾಷ್ಟ್ರೀಯ ಮಟ್ಟದಲ್ಲೂ ಮಿಂಚಬೇಕು ಎಂಬ ಸದಾಶಯದೊಂದಿಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಸ್ಪರ್ಧೆಯ ಬಹುಮಾನದ ಪ್ರಮಾಣವೂ ಐತಿಹಾಸಿಕ. ಮೊದಲ ಬಹುಮಾನ ಗಳಿಸಿದ ಕಥೆಗೆ 55,000 ರೂ. ಮೀಸಲಾಗಿದೆ. ಎರಡನೇ ಬಹುಮಾನ 25,000 ರೂ., ಮೂರನೇ ಬಹುಮಾನ 10,000 ರೂ. ಹಾಗೂ ಮೆಚ್ಚುಗೆ ಬಹುಮಾನಗಳಾಗಿ 5 ಕತೆಗಳಿಗೆ ತಲಾ 2,000 ರೂ.- ಹೀಗೆ ಒಟ್ಟು 1 ಲಕ್ಷ ರೂಪಾಯಿಗಳನ್ನು ಕಥೆಗಾರರಿಗೆ ನೀಡಲಾಗುತ್ತಿದೆ.

ಸಂಖ್ಯೆ ಮಾತ್ರವಲ್ಲ, ಗುಣಮಟ್ಟದ ದೃಷ್ಟಿಯಿಂದಲೂ ದಾಖಲೆ ಎನಿಸುವಂಥ ಕತೆಗಳನ್ನು ಈ ಸ್ಪರ್ಧೆಯಲ್ಲಿ ಗಮನಿಸಲಾಯಿತು. ಕತೆ ಬರೆದು ಕಳುಹಿಸಲು ಕೇವಲ ಒಂದು ತಿಂಗಳ ಅವಧಿಯಿತ್ತು. ಈ ಒಂದು ತಿಂಗಳಲ್ಲಿ ನಮಗೆ ಬಂದ ಕತೆಗಳ ಸಂಖ್ಯೆ 1180 ! ಬಹುಶಃ ಕನ್ನಡ ಸಾಹಿತ್ಯದಲ್ಲಿ ಇದೊಂದು ದಾಖಲೆ. ಕನ್ನಡದಲ್ಲಿ ಕತೆಗಾರರಿಲ್ಲ ಎಂಬ ದೂರು ನಿಜವಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಹೀಗೆ ಬಂದವುಗಳಲ್ಲಿ ಗಮನ ಸೆಳೆದ ತುಂಬಾ ಅಂಶಗಳಿವೆ.

ಕನ್ನಡದ ಬಗ್ಗೆ ಕಾಳಜಿಯನ್ನು ಹೊಂದಿರುವ, ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕು ಎನ್ನುವ ಕಳಕಳಿ ಹೊಂದಿರುವ ಮೂರು ಸಂಸ್ಥೆಗಳು ಬಹುಮಾನ ಪ್ರಾಯೋಜಿಸಲು ನಮ್ಮ ಜತೆ ಕೈಜೋಡಿಸಿದರು. ಪ್ರಧಾನ ಪ್ರಾಯೋಜಕರಾಗಿ ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೊ ಮತ್ತು ಪ್ರಕಾಶನ, ಸಹ ಪ್ರಾಯೋಜಕರಾಗಿ ಶ್ರೀ ತ್ಯಾಗರಾಜ ಕೋ ಆಪರೇಟಿವ್ ಬ್ಯಾಂಕ್ ಬೆಂಗಳೂರು ಮತ್ತು ವಿ2 ಹೋಲ್ಡಿಂಗ್ ಹೌಸಿಂಗ್ ಡೆವಲಪ್‌ಮೆಂಟ್ ಪ್ರೈ. ಲಿ ನಮ್ಮೊಂದಿಗಿದ್ದಾರೆ.

ಈ ಟಾಪ್‌ ಇಪ್ಪತ್ತೈದು ಕತೆಗಳಲ್ಲಿ ಆಯ್ದ ಎಂಟು ಬಹುಮಾನಿತ ಕತೆಗಳ ಘೋಷಣೆ ಹಾಗೂ ಬಹುಮಾನ ಪ್ರದಾನ ವಿಸ್ತಾರ ನ್ಯೂಸ್‌ ವಾಹಿನಿ ಮೇ ತಿಂಗಳಲ್ಲಿ ಆಯೋಜಿಸಲಿರುವ ಕನ್ನಡ ಸಂಭ್ರಮ ಕಾರ್ಯಕ್ರಮದಲ್ಲಿ ನಡೆಯಲಿದೆ.

ಟಾಪ್‌ 25 ಕತೆಗಾರರ ಪಟ್ಟಿ ಇಲ್ಲಿದೆ:

1. ಡಾ.ಎಚ್.ಸಿ. ಭವ್ಯಾ ನವೀನ್‌
2. ಪ್ರಸಾದ್‌ ಶೆಣೈ ಆರ್.ಕೆ.
3. ಅಂಜನಾ ಹೆಗಡೆ
4. ಭಾಗ್ಯರೇಖಾ ದೇಶಪಾಂಡೆ
5. ಸುಷ್ಮಾ ಸಿಂಧು
6. ಚಂದ್ರಶೇಖರ್‌ ಡಿ.ಆರ್.
7. ಸಂದೀಪ ನಾಯಕ
8. ಪೂರ್ಣಿಮಾ ಭಟ್ಟ ಸಣ್ಣಕೇರಿ
9. ಬಿ.ಎಂ ಹನೀಫ್‌
10. ಸದಾಶಿವ ಸೊರಟೂರು
11. ದಾದಾಪೀರ್‌ ಜೈಮನ್‌
12. ಚೈತ್ರಿಕಾ ಶ್ರೀಧರ ಹೆಗಡೆ
13. ಪೂರ್ಣಿಮಾ ಮಾಳಗಿಮನಿ
14. ಮೇ.ಡಾ. ಕುಶ್ವಂತ್‌ ಕೋಳಿಬೈಲು
15. ಮಂಜುನಾಥ್‌ ಲತಾ
16. ಸೌಮ್ಯ ಪ್ರಭು ಕಲ್ಯಾಣ್‌ಕರ್‌
17. ಮೌನೇಶ್‌ ಬಡಿಗೇರ್‌
18. ಸಂಪತ್‌ ಸಿರಿಮನೆ
19. ಶರಣಬಸವ ಕೆ. ಗುಡದಿನ್ನಿ
20. ಚೀಮನಹಳ್ಳಿ ರಮೇಶಬಾಬು
21. ಬಸವಣ್ಣೆಪ್ಪ ಕಂಬಾರ
22. ಶರತ್‌ ಭಟ್‌ ಸೇರಾಜೆ
23. ದೀಪಾ ಕೆ. (ದೀಪದ ಮಲ್ಲಿ)
24. ಮಂಜು ಚಳ್ಳೂರು
25. ದೀಪಾ ಹಿರೇಗುತ್ತಿ

Exit mobile version