Site icon Vistara News

ಮೋದಿಯನ್ನು ಮತ್ತೆ ಪ್ರಧಾನಿ ಮಾಡಲು ಬೈಂದೂರು ಅಭ್ಯರ್ಥಿಯನ್ನು ಗೆಲ್ಲಿಸಿ; ಅಮಿತ್‌ ಶಾ ಕರೆ

Vote For Byndoor candidate to make Modi PM again; Amit Shah in Siddapur

ಅಮಿತ್‌ ಶಾ

ಉಡುಪಿ: ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬೈಂದೂರು ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಪರ ಭರ್ಜರಿಯಾಗಿ ಪ್ರಚಾರ ನಡೆಸಿದರು. ಸಿದ್ದಾಪುರದಲ್ಲಿ ಬೃಹತ್‌ ರೋಡ್‌ ಶೋ ನಡೆಸಿದ ಅಮಿತ್‌ ಶಾ, ಗುರುರಾಜ್‌ ಗಂಟಿಹೊಳೆ ಅವರನ್ನು ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿದರು. ಅದರಲ್ಲೂ, “ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಲು ಬೈಂದೂರು ಅಭ್ಯರ್ಥಿಯನ್ನು ಗೆಲ್ಲಿಸಿ” ಎಂದು ಹೇಳಿದರು.

ಸಿದ್ದಾಪುರದಲ್ಲಿ ಅಮಿತ್‌ ಶಾ ರೋಡ್‌ ಶೋ

“ಕರಾವಳಿ ಕರ್ನಾಟಕವನ್ನು ರಕ್ಷಣೆ ಮಾಡುವಂತಹ ಕೆಲಸ ಭಾರತೀಯ ಜನತಾ ಪಾರ್ಟಿ ಮಾಡುತ್ತದೆ. ಕರ್ನಾಟಕ ಕರಾವಳಿಯನ್ನು ರಕ್ಷಣೆ ಮಾಡುವ ಉದ್ದೇಶ ನಿಮಗಿದ್ದರೆ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ. ಅಡಿಕೆಯ ಬೆಲೆ ಇಳಿಕೆಯಾದಾಗ ಬಿಜೆಪಿ ಸರ್ಕಾರ ಅಡಿಕೆ ಬೆಳೆಗಾರರ ನೆರವುಗೆ ಬಂದಿತ್ತು. ಮೀನುಗಾರರಿಗೆ ಹೊಸ ಬಂದರುಗಳನ್ನು ನಿರ್ಮಿಸುವ ಮೂಲಕ ಬಿಜೆಪಿ ನೆರವು ನೀಡಿತು. ಎನ್‌ಐಎ ಬಳಸಿಕೊಂಡು ನಮ್ಮ ಸರ್ಕಾರ ದೇಶದ್ರೋಹಿಗಳನ್ನು ಮಟ್ಟಹಾಕಿದೆ” ಎಂದು ತಿಳಿಸಿದರು.

ಇದನ್ನೂ ಓದಿ: Karnataka Election 2023: ಮಡಿಕೇರಿಯಲ್ಲಿ ಅಮಿತ್‌ ಶಾ ರೋಡ್‌ ಶೋ ಅರ್ಧಕ್ಕೆ ಮೊಟಕು; ಇದಕ್ಕೇನು ಕಾರಣ?

“ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಕೊಲೆ ಮಾಡಿದ ಕೊಲೆ ಪಾತಕರನ್ನ ಹುಡುಕಿ ಹುಡುಕಿ ಜೈಲಿಗೆ ತಳ್ಳಲಾಗಿದೆ. ದೇಶದ್ರೋಹಿಗಳನ್ನು ಜೈಲಿಗಟ್ಟಲಾಗಿದೆ. ಬೈಂದೂರು ಅಭ್ಯರ್ಥಿ ಗೆಲುವಿನ ಲೀಡ್ 25,000ಕ್ಕಿಂತ ಜಾಸ್ತಿ ಆಗಬೇಕು. 50 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದರೆ ನಾನು ವಿಜಯೋತ್ಸವ ಆಚರಣೆಗೆ ಮತ್ತೆ ಬರುತ್ತೇನೆ” ಎಂದು ಹೇಳಿದರು.

Exit mobile version