Site icon Vistara News

ಶಿಗ್ಗಾಂವಿ: ಮನೆ ಗೋಡೆ ಕುಸಿದು ಯುವಕ ಮೃತ್ಯು, ಬಾಣಂತಿ ಪತ್ನಿ, ಪುಟ್ಟ ಮಗು ಬಚಾವ್‌

haveri death

ಶಿಗ್ಗಾಂವಿ: ಹಾವೇರಿ ಜಿಲ್ಲೆಯ ಶಿಗ್ಗಾಂವಿಯ ಕುನ್ನೂರ ಗ್ರಾಮದಲ್ಲಿ ಭಾರಿ ಮಳೆಗೆ ಮನೆಯೊಂದು ಕುಸಿದು ಬಿದ್ದು ಯುವಕರೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಹೆರಿಗೆಯಾಗಿದ್ದ ಪತ್ನಿ, ಮಗು, ಕುಟುಂಬದವರು ಅಪಾಯದಿಂದ ಪಾರಾಗಿದ್ದಾರೆ.

ಕುಸಿರು ಬಿದ್ದ ಮನೆ

ಕುನ್ನೂರ ಗ್ರಾಮದ ಪ್ಲಾಟ್‌ನಲ್ಲಿ ಈ ದುರಂತ ನಡೆದಿದ್ದು, ಮುಸ್ತಾಕ ಶರೀಫ್‌ ಸಾಬ ಯರಗುಪ್ಪಿ (27)ಮೃತಪಟ್ಟ ದುರ್ದೈವಿ. ತೀವ್ರ ಗಾಯಗೊಂಡ ಇವರನ್ನು ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಮನೆ ಮೊದಲೇ ಶಿಥಿಲವಾಗಿತ್ತು. ಈ ಪ್ರದೇಶದಲ್ಲಿ ನಿರಂತರವಾಗಿ ಬೀಳುತ್ತಿರುವ ಭಾರಿ ಮಳೆಯಿಂದ ಅದು ಇನ್ನಷ್ಟು ಶಿಥಿಲಗೊಂಡಿತ್ತು. ಮನೆಯ ಒಂದು ಭಾಗ ಕುಸಿದು ಬಿದ್ದಿದ್ದು ಅಲ್ಲೇ ಇದ್ದ ಯುವಕ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಈ ಕುಟುಂಬಕ್ಕೆ ಬೇರೆ ಕಡೆ ವಾಸದ ವ್ಯವಸ್ಥೆ ಮಾಡಲಾಗಿದೆ. ಆದರೆ, ಪುಟ್ಟ ಮಗು, ಪತ್ನಿ ಮತ್ತು ಕುಟುಂಬಿಕರು ಮನೆ ಮಗನನ್ನು ಕಳೆದುಕೊಂಡು ತೀವ್ರ ನೋವು ಅನುಭವಿಸುತ್ತಿದ್ದಾರೆ.

ಕುಮದ್ವತಿ ನದಿ ಉಕ್ಕಿರುವುದು

ಕುಮದ್ವತಿ ನದಿ ಆರ್ಭಟ
ರಾಣೆಬೆನ್ನೂರು ತಾಲೂಕಿನ ಹಲವು ಭಾಗಗಳಲ್ಲಿ ಜಿಟಿಜಿಟಿ ಮಳೆ ಸುರಿಯುತ್ತಿದೆ. ಮಣಕೂರು- ಲಿಂಗದಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆ ಪಕ್ಕದ ನೂರಾರು ಎಕರೆ ಜಮೀನಿಗೆ ನೀರು ನುಗ್ಗಿದ್ದು, ಜಮೀನುಗಳು ನದಿಯಂತಾಗಿವೆ. ರಾಣೆಬೆನ್ನೂರ ಶಾಸಕ ಅರುಣಕುಮಾರ ಪೂಜಾರ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ | ಪಕ್ಕದ ಮನೆಗೆ ಮಲಗಲು ಬಂದವರು ಮರ ಬಿದ್ದು ಮೃತ

Exit mobile version