Site icon Vistara News

Karnataka Election Results: ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸೇರಿದ ‘ಬಾಂಬೆ ಬಾಯ್ಸ್‌’ಗಳಲ್ಲಿ ಗೆದ್ದವರಾರು? ಸೋತವರಾರು?

Karnataka Election Results

Karnataka Election Results

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಗೆದ್ದೇ ಗೆಲ್ಲುತ್ತೇನೆ ಎಂಬ ಉತ್ಸಾಹದಲ್ಲಿದ್ದ ಘಟಾನುಘಟಿಗಳೇ ಸೋಲನುಭವಿಸಿದ್ದಾರೆ. ಇನ್ನು ಮೊದಲ ಬಾರಿಗೆ ಸ್ಪರ್ಧಿಸಿದವರು ಕೂಡ ಅಚ್ಚರಿಯ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ. ಅದರಲ್ಲೂ, 2019ರಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಸರ್ಕಾರವನ್ನು ಕೆಡವಿ, ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರಲ್ಲಿ ಈ ಬಾರಿ ಹೆಚ್ಚಿನ ಜನ ಸೋಲನುಭವಿಸಿದ್ದಾರೆ. ಇವರು ಬಾಂಬೆ ಬಾಯ್ಸ್‌ ಎಂದೇ ಖ್ಯಾತರಾಗಿದ್ದು, ಇವರಲ್ಲಿ ಗೆದ್ದವರಾರು, ಸೋತವರಾರು ಎಂಬ ಮಾಹಿತಿ ಇಲ್ಲಿದೆ.

ಗೆದ್ದವರು

ಗೋಕಾಕ್- ರಮೇಶ್ ಜಾರಕಿಹೊಳಿ
ಯಲ್ಲಾಪುರ-ಶಿವರಾಮ ಹೆಬ್ಬಾರ್‌
ಕೆ.ಆರ್.ಪುರ- ಬೈರತಿ ಬಸವರಾಜ್
ರಾಜರಾಜೇಶ್ವರಿನಗರ- ಮುನಿರತ್ನ
ಮಹಾಲಕ್ಮೀ ಲೇಔಟ್- ಗೋಪಾಲಯ್ಯ
ಯಶವಂತಪುರ- ಎಸ್‌.ಟಿ. ಸೋಮಶೇಖರ್

ಸೋತವರು

ಅಥಣಿ-ಮಹೇಶ್‌ ಕುಮಠಳ್ಳಿ
ಕಾಗವಾಡ- ಶ್ರೀಮಂತ ಪಾಟೀಲ್
ಮಸ್ಕಿ-ಪ್ರತಾಪ್‌ಗೌಡ ಪಾಟೀಲ್‌
ಹೊಸಕೋಟೆ- ಎಂ.ಟಿ.ಬಿ. ನಾಗರಾಜ್‌
ಕೆ.ಆರ್.ಪೇಟೆ-ಕೆ.ಸಿ. ನಾರಾಯಣಗೌಡ
ಚಿಕ್ಕಬಳ್ಳಾಪುರ-ಡಾ.ಕೆ ಸುಧಾಕರ್

ಇದನ್ನೂ ಓದಿ: Karnataka Election Results: ಯಾವ ವಲಯದಲ್ಲಿ ಯಾವ ಪಕ್ಷಕ್ಕೆ ಹೆಚ್ಚಿನ ಸ್ಥಾನ? ಇಲ್ಲಿದೆ ಸಂಪೂರ್ಣ ಮಾಹಿತಿ

Exit mobile version