Site icon Vistara News

ಸರ ಕೊಡಲಿಲ್ಲ ಎಂದು ಮಹಿಳೆಯನ್ನು ಕೆರೆಯಲ್ಲಿ ಮುಳುಗಿಸಿ ಕೊಂದ ಕ್ರೂರಿ ಕಳ್ಳ

ಕೆರೆಯಲ್ಲಿ ಮುಳುಗಿಸಿ ಕೊಲೆ

ಹಾಸನ: ಮಹಿಳೆಯೊಬ್ಬರನ್ನು ದಾರಿ ಮಧ್ಯೆ ಅಡ್ಡ ಗಟ್ಟಿ ಸರ ಕಿತ್ತುಕೊಳ್ಳಲು ಯತ್ನಿಸಿದ ಕಳ್ಳನೊಬ್ಬ ಆಕೆ ಪ್ರತಿರೋಧ ಒಡ್ಡಿದಾಗ ಕೆರೆಗೆ ತಳ್ಳಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ ಘಟನೆ ನಗರದ ಹೊರ ವಲಯದ ಗವೇನ ಹಳ್ಳಿಯಲ್ಲಿ ನಡೆದಿದೆ. ಕೆರೆಯ ಸಮೀಪ ಪೊದೆಯಲ್ಲಿ ಹೊಂಚು ಹಾಕಿ ಕಾದಿದ್ದ ಕ್ರೂರಿ ಒಂಟಿ ಮಹಿಳೆ ನೀಲಾ (50) ಅವರನ್ನು ಈ ರೀತಿಯಾಗಿ ದಾಳಿ ಮಾಡಿ ಕೊಂದು ಹಾಕಿದ್ದಾನೆ.

ನೀಲಾ ಅವರು ಒಬ್ಬರೇ ನಡೆದುಕೊಂಡು ಹೋಗುತ್ತಿದ್ದಾಗ ಪೊದೆಯಲ್ಲಿ ಅಡಗಿದ್ದ ದುಷ್ಟ ಆಕೆಯನ್ನು ಅಡ್ಡಗಟ್ಟಿ ಕೊರಳಿನ ಸರಕ್ಕೆ ಕೈ ಹಾಕಿದ್ದಾನೆ. ಆಗ ಆಕೆ ಪ್ರಬಲವಾಗಿ ಪ್ರತಿರೋಧ ಒಡ್ಡಿ ಸೆಣಸಾಡಿದರು. ಆಕೆಯ ಕೈಯೇ ಮೇಲಾದಾಗ ಕಳ್ಳ ಆಕೆಯನ್ನು ಕೆರೆಗೆ ತಳ್ಳಲು ಮುಂದಾಗಿದ್ದಾನೆ. ಆಕೆಯ ಚೀರಾಟದ ಸದ್ದು ಕೇಳಿದ ಕೆಲವರು ಸ್ಥಳಕ್ಕೆ ಓಡಿ ಬಂದರು. ಅಷ್ಟು ಹೊತ್ತಿಗೆ ಕಳ್ಳ ಆಕೆಯನ್ನು ಕೆರೆಗೆ ತಳ್ಳಿ ನೀರಲ್ಲಿ ಮುಳುಗಿಸಿಯೇ ಬಿಟ್ಟಿದ್ದಾನೆ. ಜನ ಸೇರಿದಾಗ ತಪ್ಪಿಸಿಕೊಳ್ಳಲು ಆತನೂ ಕೆರೆಯೊಳಗೇ ಓಡಿದ್ದ. ಆದರೆ, ಮುಂದೆ ಆಳವಿದ್ದುದರಿಂದ ಓಡಲಾಗದೆ ವಾಪಸ್‌ ಬಂದ. ಆತ ಆತನನ್ನು ಜನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ | ತುಮಕೂರಿನ ದಲಿತ ಮುಖಂಡನ ಕೊಲೆ; ಗುಬ್ಬಿಯಲ್ಲಿ ಟೀ ಕುಡಿಯುತ್ತಿದ್ದಾಗ ಕೊಚ್ಚಿ ಕೊಂದರು!

ಗವೇನಹಳ್ಳಿಯ ನೀಲಾ ಹಾಗು ಆಕೆಯ ಪತಿ ದಕ್ಷಿಣ ಕನ್ನಡದಲ್ಲಿ ಓದುತ್ತಿರುವ ತಮ್ಮ ಪುತ್ರನನ್ನು ಶುಕ್ರವಾರ (ಜೂನ್‌ 17) ರಂದು ಭೇಟಿಯಾಗಲು ಹೋಗುವ ತಯಾರಿಯಲ್ಲಿದ್ದರು. ಮಗನಿಗಾಗಿ ಆತನಿಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಲು ದಂಪತಿ ಜತೆಯಾಗೇ ಹೋಗಿದ್ದರು. ಮರಳಿ ಬರುವಾಗ ಮಹಿಳೆ ಒಬ್ಬರೇ ನಗರ ಸಾರಿಗೆ ಬಸ್ ನಲ್ಲಿ ಬಂದು ರೈಲ್ವೆ ನಿಲ್ದಾಣದ ಬಳಿ ಇಳಿದಿದ್ದಾರೆ. ಅಲ್ಲಿಂದ ಕಾಲುದಾರಿಯಲ್ಲಿ ಊರಿನತ್ತ ಹೆಜ್ಜೆ ಹಾಕಿ ಇನ್ನೇನು ಐವತ್ತು ಮೀಟರ್ ದೂರ ಬಂದಿದ್ದರೆ ಅವರ ಮನೆ ತಲುಪುತ್ತಿದ್ದರು. ಆದರೆ, ದಾರಿ ಮಧ್ಯೆ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ | ಹೆಣ್ಣಿನಂತೆ ಡ್ರೆಸ್‌ ಮಾಡಿಕೊಂಡು ಓಡಾಡುತ್ತಿದ್ದ ಕ್ರಾಸ್‌ ಡ್ರೆಸ್ಸರ್‌ ಕೊಲೆ, ರಿಕ್ಷಾ ಚಾಲಕನ ಕೃತ್ಯ

Exit mobile version