Site icon Vistara News

Cylinder explosion : ಸಿಲಿಂಡರ್‌ ಸ್ಫೋಟವಾಗಿ ಗುಡಿಸಲಿಗೆ ಬೆಂಕಿ, ಚಿಕಿತ್ಸೆಯ ವೆಚ್ಚಕ್ಕೆ ತಂದಿಟ್ಟಿದ್ದ 2 ಲಕ್ಷ ರೂ. ನಗದು ಭಸ್ಮ

fire

#image_title

ಯಾದಗಿರಿ : ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟವಾಗಿ ಗುಡಿಸಲು ಬೆಂಕಿಗೆ ಆಹುತಿಯಾಗಿದ್ದಲ್ಲದೆ, 2 ಲಕ್ಷ ರೂ. ನಗದು ಭಸ್ಮವಾದ ದುರ್ಘಟನೆ ನಡೆದಿದೆ. (Cylinder explosion) ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಹೊರಭಾಗದ ಸಾಯಿನಗರದಲ್ಲಿ ಈ ದುರಂತ ಸಂಭವಿಸಿದೆ. ಆಂಧ್ರಮೂಲದ ಟಿ.ಮಧು ಅವರಿಗೆ ಸೇರಿದ್ದ ಗುಡಿಸಲು ಬೆಂಕಿಗಾಹುತಿಯಾಗಿದೆ.

ಸೀಲಿಂಡರ್ ಸ್ಪೋಟದಿಂದ ಗುಡಿಸಲು ಹೊತ್ತಿ ಉರಿಯಿತು. ಸ್ನಾನ ಮಾಡಲು ನೀರು ಕಾಯಿಸಲು ಇಟ್ಟಾಗ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಮಧು ಎಂಬುವರು ನೀರು ಕಾಯಿಸಲು ಇಟ್ಟು ಹೊರಗಡೆ ಬಂದಿದ್ದಾಗ ಸಿಲಿಂಡರ್‌ ಸ್ಫೋಟಿಸಿದೆ. ಗುಡಿಸಲು ಪಕ್ಕದಲ್ಲಿದ್ದ ವ್ಯಕ್ತಿಯೊಬ್ಬರಿಗೆ ಗಾಯವಾಗಿದೆ. ಲಕ್ಷಾಂತರ ಬೆಲೆ ಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿದೆ.

ಎರಡು ಲಕ್ಷ ನಗದು ಭಸ್ಮ: ಮಗಳ ಆಪರೇಷನ್ ಮಾಡಿಸಲೆಂದು ಮಧು ಅವರು ಎರಡು ಲಕ್ಷ ರೂ. ನಗದನ್ನು ತಂದು ಇಟ್ಟಿದ್ದರು. ಬೆಳಗ್ಗೆ ಮಗಳ ಆಪರೇಷನ್ ಮಾಡಿಸಲು ಕೊಪ್ಪಳದ ಗಂಗಾವತಿಗೆ ಮಧು ಅವರು ತೆರಳಬೇಕಿತ್ತು. ಘಟನೆ ನಡೆದ ಸ್ಥಳಕ್ಕ ಅಗ್ನಿಶಾಮಕದಳ ಧಾವಿಸಿದೆ.

Exit mobile version