Site icon Vistara News

Murder Case : ಬಹಿರ್ದೆಸೆಗೆ ತೆರಳಿದವನ ಹತ್ಯೆ; ಯುಗಾದಿ ಅಮಾವಾಸ್ಯೆ ದಿನ ಯಾದಗಿರಿಯಲ್ಲಿ ಚಿಮ್ಮಿತ್ತು ರಕ್ತ

Murder Case in yadagiri

ಯಾದಗಿರಿ: ಆ ಗ್ರಾಮದ ಜನರು ವಾರದ ಮೊದಲ ದಿನ ಜತೆಗೆ ಯುಗಾದಿ ಅಮಾವಾಸ್ಯೆ ಎಂದು ಪೂಜೆ ಪುನಸ್ಕಾರದಲ್ಲಿ ತೊಡಗಿದ್ದರು. ನಾಳೆ ಯುಗಾದಿ ಹಬ್ಬವೆಂದು ಮನೆಮಂದಿ ಸಂಭ್ರಮದಲ್ಲಿದ್ದರು. ಆದರೆ ಬೆಳಗಿನ ಜಾವ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಇಡೀ ಗ್ರಾಮವೇ ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕೆ ಕಾರಣ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಏವೂರು ಗ್ರಾಮದಲ್ಲಿ ಸೋಮವಾರ (ಏ.8) ನಸುಕಿನ ಜಾವ ವ್ಯಕ್ತಿಯೊಬ್ಬರ ಬರ್ಬರ (Murder Case) ಹತ್ಯೆಯಾಗಿದೆ. ಏವೂರು ಗ್ರಾಮದ ನಿವಾಸಿ ಬಂದೇನವಾಜ್ (40) ಕೊಲೆಯಾದವರು.

ಬಂದೇನವಾಜ್‌ ಸೋಮವಾರ ಮುಂಜಾನೆ ಬಹಿರ್ದೆಸೆಗೆಂದು ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ಹಿಂದಿನಿಂದ ಬಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಯುಗಾದಿ ಅಮಾವಾಸ್ಯೆ ದಿನವೇ ಬರ್ಬರ ಹತ್ಯೆ ಕಂಡು ಏವೂರು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಬಹಿರ್ದೆಸೆಗೆಂದು ಹೋದ ಬಂದೇನವಾಜ್‌ ಮನೆಗೆ ವಾಪಸ್‌ ಆಗಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ, ಕೊಲೆಯಾಗಿ ಬಿದ್ದಿರುವುದು ಕಂಡು ಬಂದಿದೆ.

ಕೊಲೆಗೆ ನಿಖರ ಕಾರಣ ಏನು? ಹಂತಕರು ಯಾರು ಎಂಬುದು ತಿಳಿದು ಬಂದಿಲ್ಲ. ಸ್ಥಳೀಯಯರ ಮಾಹಿತಿ ಪಡೆದು ಎಸ್‌ಪಿ ಜಿ.ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಿದ್ದಾರೆ. ಕೆಂಭಾವಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಕೊಲೆಗಾರರಿಗಾಗಿ ಹುಡುಕಾಟವನ್ನು ಪೊಲೀಸರು ನಡೆಸಿದ್ದಾರೆ.

ಇದನ್ನೂ ಓದಿ: Murder Case: ಹೆಂಡತಿಯ ದೇಹವನ್ನು 200 ಪೀಸ್‌ ಮಾಡಿದ ವ್ಯಕ್ತಿ ಇಂಟರ್‌ನೆಟ್‌ನಲ್ಲಿ ಹುಡುಕಿದ್ದು ಇದು!

ಸ್ನೇಹ ಅಂತ ಒಳಗೊಳಗೆ ಸ್ಕೆಚ್;‌ ಹಣಕ್ಕಾಗಿ ಗೆಳತಿಯನ್ನೇ ಅಪಹರಿಸಿ ಕೊಂದ ಗೆಳೆಯರು!

ಗಾಂಧಿನಗರ: ಕಾಲೇಜು ದಿನಗಳು (Collge Days) ಜೀವನವಿಡೀ ನೆನಪಿರಲು ಸ್ನೇಹಿತರು ಬಹುಮುಖ್ಯ ಕಾರಣವಾಗುತ್ತಾರೆ. ಕಾಲೇಜು ದಿನಗಳ ತರ್ಲೆ, ಗೆಳೆತನದ ಒಗ್ಗಟ್ಟು, ದುಡ್ಡಿರದಿದ್ದರೂ ಹಂಚಿಕೊಂಡು ತಿನ್ನುವ ಮನೋಭಾವ, ಹುಸಿ ಮುನಿಸು ಮರೆತು ಒಂದಾಗುವ ಕ್ಷಣಗಳು ನೆನಪಿನ ಸ್ಮೃತಿ ಪಟಲದಲ್ಲಿ ಉಳಿಯುತ್ತವೆ. ಆದರೆ, ಮಹಾರಾಷ್ಟ್ರದಲ್ಲಿ (Maharashtra) ಹಣಕ್ಕಾಗಿ ಕಾಲೇಜಿನ ಗೆಳೆಯರೇ ಯುವತಿಯನ್ನು ಅಪಹರಿಸಿ (Kidnap), ಭೀಕರವಾಗಿ ಕೊಲೆ ಮಾಡಿದ್ದು, ಯಾರನ್ನು ನಂಬಬೇಕು, ಯಾರ ಗೆಳೆತನ ಮಾಡಬೇಕು ಎಂಬ ಜಿಜ್ಞಾಸೆ ಮೂಡಿಸುವಂತೆ ಮಾಡಿದೆ.

ಹೌದು, ಪುಣೆಯ ವಾಘೋಲಿಯಲ್ಲಿರುವ ಎಂಜಿನಿಯರಿಂಗ್‌ ಓದುತ್ತಿದ್ದ 22 ವರ್ಷದ ವಿದ್ಯಾರ್ಥಿನಿಯನ್ನು ಆಕೆಯ ಕಾಲೇಜು ಗೆಳೆಯ ಸೇರಿ ಮೂವರು ಅಪಹರಿಸಿದ್ದು, ಅಹ್ಮದ್‌ನಗರದಲ್ಲಿ ಆಕೆಯನ್ನು ಭೀಕರವಾಗಿ ಕೊಲೆ ಮಾಡಿದ್ದಾರೆ. ಪ್ರಕರಣದಕ್ಕೆ ಸಂಬಂಧಿಸಿದಂತೆ ಯುವತಿಯ ಗೆಳೆಯ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್‌ 30ರಂದು ವಿದ್ಯಾರ್ಥಿನಿಯು ಕಾಣೆಯಾಗಿದ್ದಳು. ಇದಾದ ನಂತರ ಆಕೆಯ ಶವವೀಗ ಅಹ್ಮದ್‌ನಗರದಲ್ಲಿ ಪತ್ತೆಯಾಗಿದೆ. ಪೊಲೀಸರು ತನಿಖೆ ನಡೆಸಿದಾಗ ಗೆಳೆಯರೇ ಕೊಂದಿರುವುದು ಬಯಲಾಗಿದೆ.

ಭೇಟಿ ನೆಪದಲ್ಲಿ ಅಪಹರಣ

ಮಾರ್ಚ್‌ 29ರಂದು ಆಕೆಯ ಕಾಲೇಜು ಗೆಳೆಯ ಸೇರಿ ಮೂವರು ಭೇಟಿಯಾಗಿದ್ದಾರೆ. ಆಕೆ ಬೇಡವೆಂದರೂ ಹಾಸ್ಟೆಲ್‌ವರೆಗೆ ಡ್ರಾಪ್‌ ಮಾಡಿದ್ದಾರೆ. ಇದಾದ ಬಳಿಕ ಮಾರ್ಚ್‌ 30ರಂದು ಆಕೆಯನ್ನು ಅಹ್ಮದ್‌ನಗರಕ್ಕೆ ಕರೆದೊಯ್ದಿದ್ದಾರೆ. ಗೆಳೆಯರು ಎಂಬುದಾಗಿ ನಂಬಿದ ಯುವತಿಗೆ ಅಹ್ಮದ್‌ನಗರಕ್ಕೆ ಹೋದ ಮೇಲೆಯೇ ಇವರ ಬಂಡವಾಳ ಬಯಲಾಗಿದೆ. ಯುವತಿಯನ್ನು ಕೂಡಿಹಾಕಿದ ಗೆಳೆಯರು, ಆಕೆಯ ತಂದೆ-ತಾಯಿಗೆ ಕರೆ ಮಾಡಿ 9 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಾರೆ.

ಏಕಾಏಕಿ 9 ಲಕ್ಷ ರೂ.ಗೆ ಬೇಡಿಕೆ ಇಟ್ಟ ಕಾರಣ ಯುವತಿಯ ಪೋಷಕರು ಗಲಿಬಿಲಿಗೊಂಡಿದ್ದಾರೆ. ಇದೇ ಕಾರಣಕ್ಕಾಗಿ ಹಣ ಹೊಂದಿಸುವುದು ತುಸು ವಿಳಂಭವಾಗಿದೆ. ಇನ್ನು ನಮಗೆ ದುಡ್ಡು ಸಿಗಲ್ಲ ಎಂದು ತಿಳಿದ ಯುವಕರು, ಯುವತಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಶವವನ್ನು ಅಹ್ಮದ್‌ನಗರ ಹೊರವಲಯದಲ್ಲಿ ಬಿಸಾಡಿದ್ದಾರೆ. ಆಕೆಯ ಮೊಬೈಲ್‌ನಿಂದ ಸಿಮ್‌ ಕಾರ್ಡ್‌ ತೆಗೆದು ಎಸೆದಿದ್ದಾರೆ. ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version