Site icon Vistara News

Yallapura News: ಕುಡಿದ ನಶೆಯಲ್ಲಿ ಮಲಗಿದ್ದವನ ಜೇಬಿಗೆ ಕೈ ಹಾಕಿ ಹಣ ಎಗರಿಸಿದ ಚಾಲಾಕಿ ಅಜ್ಜಿ

Drunk Man yallapura

#image_title

ಯಲ್ಲಾಪುರ: ಕಂಠ ಮಟ್ಟ ಕುಡಿದು ನಶೆಯಲ್ಲಿ ಮಲಗಿದ್ದವನ ಜೇಬಿಗೆ ಒಬ್ಬ ವೃದ್ಧೆ ಕೈ ಹಾಕಿ ಹಣ ಎಗರಿಸಿದ ಘಟನೆ ಯಲ್ಲಾಪುರ (Yallapura News) ಬಸ್‌ ನಿಲ್ದಾಣದಲ್ಲಿ ನಡೆದಿದೆ‌.

ಈ ಚಾಲಾಕಿ ಅಜ್ಜಿಯ ಕೈ ಚಳಕ ಕಂಡ ಕೆಲ ಪ್ರಯಾಣಿಕರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು‌, ನೆಟ್ಟಿಗರು ಅಜ್ಜಿ ಕೈಚಳಕ ನೋಡಿ‌ ದಂಗಾಗಿ ಹೋಗಿದ್ದಾರೆ. ಯಲ್ಲಾಪುರ ಸರ್ಕಾರಿ ಬಸ್ ಸ್ಟಾಂಡಿನ ನಂದಿನಿ ಹಾಲಿನ ಕೌಂಟರ್ ಬಳಿ ನಶೆಯಲ್ಲಿ ಯುವಕನೊಬ್ಬ ಮಲಗಿದ್ದ. ಅಲ್ಲಗೆ ಸೀದಾ ಬಂದ ಅಜ್ಜಿ, ಆತನ ಜೇಬಿಗೆ ಕೈ ಹಾಕಿ ಹಣಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಹಣ ಸಿಕ್ಕಿದ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ: Viral Video : ತನ್ನನ್ನು ತಾನೇ ಕತ್ತರಿಸಿಕೊಂಡು ತಿಂದ ಮಹಿಳೆ? ವೈರಲ್‌ ಆಯ್ತು ವಿಡಿಯೊ

ಕುಡುಕರೇ ಹುಷಾರ್…

ಕುಡಿದು ಎಲ್ಲೆಂದರಲ್ಲಿ ಮಲಗುವರಿಗೆ ಈ ವಿಡಿಯೊ ಎಚ್ಚರಿಕೆ ನೀಡುವಂತಿದೆ. ಮದ್ಯ ವ್ಯಸನಿಗಳು ಕುಡಿಯೋ ಮೊದಲೇ ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅದೆಷ್ಟೋ ಕುಟಂಬಗಳು ಬೀದಿಗೆ ಬೀಳೋದೇ ಕುಡಿತದ ಚಟದಿಂದ. ಅದರಲ್ಲೂ ಹೀಗೆ ಕುಡಿದ ಅಮಲಿನಲ್ಲಿ ಎಲ್ಲೆಂದರಲ್ಲಿ ಬೀಳೋದ್ರಿಂದ ಇದ್ದ ಹಣ ಕೂಡ ಮಾಯವಾಗೋದು ಗ್ಯಾರಂಟಿ. ಬಸ್ ಸ್ಟಾಂಡ್ ನಲ್ಲಿ ಜೇಬುಗಳ್ಳರಿದ್ದಾರೆ ಎಚ್ಚರಿಕೆ ಎಂಬುದಾಗಿ ಬೋರ್ಡ್‌ ಹಾಕಿರುತ್ತಾರೆ. ಹೀಗಾಗಿ ಎಲ್ಲರೂ ಜಾಗರೂಕರಾಗಿ ಇರುತ್ತಾರೆ. ಆದರೂ ಇಂತಹ ವ್ಯಸನಿಗಳ ಜೇಬಿಗೆ ಕತ್ತರಿ ಹಾಕಲೆಂದೇ ಒಂದು ಟೀಮ್ ರೆಡಿ ಇದೆಯಾ ಎಂಬ‌ ಅನುಮಾನ ಕಾಡುತ್ತಿದೆ.

ಇದನ್ನೂ ಓದಿ: MS Dhoni: ರಾಂಚಿಯಿಂದ ಬೈಕ್​ ಸವಾರಿ ಹೊರಟ ಮಹೇಂದ್ರ ಸಿಂಗ್​ ಧೋನಿ

Exit mobile version