Site icon Vistara News

Young girl suicide | ಪ್ರೀತಿಸಿ ಕೈಕೊಟ್ಟ ಯುವಕ, ಮನ ನೊಂದ ಯುವತಿ ಕೀಟ ನಾಶಕ ಸೇವಿಸಿ ಆತ್ಮಹತ್ಯೆ

Thejaswini suicide

#image_title

ಚಿಕ್ಕೋಡಿ: ಯುವಕನೊಬ್ಬ ಪ್ರೀತಿಸಿ ಕೈಕೊಟ್ಟ ಎಂಬ ನೋವಿನಿಂದ ಯುವತಿಯೊಬ್ಬಳು ಪ್ರಾಣವನ್ನೇ (Young girl suicide) ಕಳೆದುಕೊಂಡಿದ್ದಾಳೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾವಂಶಿ ಗ್ರಾಮದ ನಿವಾಸಿ ತೇಜಸ್ವಿನಿ ಗಂಗಪ್ಪ ಗುಜ್ಜರ್‌ (೨೧) ಆತ್ಮಹತ್ಯೆ ಮಾಡಿಕೊಂಡವರು.

ಅಶೀಪ್ ದೇಸಾಯಿ ದೇಸಾಯಿ ಎಂಬಾತ ಆಕೆಯನ್ನು ಪ್ರೀತಿಸುತ್ತಿದ್ದು, ಮದುವೆಯಾಗುವುದಾಗಿ ನಂಬಿಸಿದ್ದ ಎನ್ನಲಾಗಿದೆ. ಇದೀಗ ಆತ ಕೈಕೊಟ್ಟಿದ್ದಾನೆ ಎಂಬ ಬೇಸರದಲ್ಲಿ ಯುವತಿ ಪ್ರಾಣವನ್ನೇ ತೆಗದುಕೊಂಡಿದ್ದಾಳೆ.

ಆಕೆ ಮನೆಯಲ್ಲಿದ್ದ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾದರೂ ಚಿಕಿತ್ಸೆ ಫಲಿಸದೆ ಸಾವು ಸಂಭವಿಸಿದೆ. ಈಗ ಪ್ರೀತಿಸಿ ವಂಚಿಸಿದ ಅಶೀಪ್ ದೇಸಾಯಿ ವಿರುದ್ದ ತೇಜಸ್ವಿನಿ ಪೋಷಕರು ದೂರು ನೀಡಿದ್ದಾರೆ. ಅಥಣಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ತುತ್ತು ಅನ್ನಕ್ಕಿದೆ ಕೋಟಿ ಮೌಲ್ಯ: ಅರಿತು ಬಳಸೋಣ, ಅದನ್ನು ಎಸೆಯದೆ ಹಂಚಿ ತಿನ್ನೋಣ

Exit mobile version