Site icon Vistara News

Bullock Cart Accident: ಚಕ್ಕಡಿ ಚಕ್ರ ಮೈಮೇಲೆ ಹರಿದು ಯುವಕ ಸಾವು

Bullock cart accident

#image_title

ಶಿರಸಿ: ಉತ್ತರ ಕನ್ನಡ ಜಿಲ್ಲೆ ಶಿರಸಿಯ ಸಮೀಪ ಜನತಾ ಕಾಲೋನಿ ಹತ್ತಿರ ದಾಂಡೇಲಿಯ ಉಳವಿ ಜಾತ್ರೆಗೆ ಹೊರಟಿದ್ದ ಚಕ್ಕಡಿ (Bullock cart accident) ಉರಳಿ ಬಿದ್ದು ಯುವಕ ಮೃತಪಟ್ಟಿರುವುದು ಭಾನುವಾರ ಸಂಜೆ ನಡೆದಿದೆ. ಬಂಡಿ ಚಲಾಯಿಸುತ್ತಿದ್ದ ಯುವಕನ ಮೈಮೇಲೆ ಬಂಡಿ ಹರಿದಿದ್ದರಿಂದ ಘಟನೆ ಸಂಭವಿಸಿದೆ.

ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮ ನಿವಾಸಿ ಈರಣ್ಣ ಧೂಪದಾಳ (21) ಮೃತ ಯುವಕ. ನಗರದ ಸಮೀಪ ಜನತಾ ಕಾಲೋನಿ ಹತ್ತಿರ ಘಟನೆ ನಡೆದಿದ್ದು, ಜೊಯಿಡಾ ಮಾರ್ಗವಾಗಿ ದಾಂಡೇಲಿ ಕಡೆಗೆ ಬರುತ್ತಿದ್ದ ವಾಹನದ ಹಾರ್ನ್ ಶಬ್ದಕ್ಕೆ ಚಕ್ಕಡಿಯ ಎತ್ತುಗಳು ಭಯಪಟ್ಟು ಪಕ್ಕದ ಕಮರಿಗೆ ಚಕ್ಕಡಿ ಸಮೇತವಾಗಿ ಎಳೆದುಕೊಂಡು ಹೋಗಿವೆ. ಈ ವೇಳೆ ಚಕ್ಕಡಿ ಚಲಾಯಿಸುತ್ತಿದ್ದ ವ್ಯಕ್ತಿ ಆಯತಪ್ಪಿ ನೆಲಕ್ಕೆ ಬಿದ್ದ ತಕ್ಷಣ ಚಕ್ಕಡಿ ಮೈಮೇಲೆ ಹರಿದ ಪರಿಣಾಮವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇವರು ಸಂಬಂಧಿಕರ ಜತೆ ಉಳವಿ ಜಾತ್ರೆ ಹೊರಟಿದ್ದರು. ನಾಲ್ಕು ಜನ ಬಂಡಿಯಲ್ಲಿದ್ದರು. ಚಕ್ಕಡಿ ಚಲಾಯಿಸುತ್ತಿದ್ದ ವ್ಯಕ್ತಿ ದುರ್ಘಟನೆಯಲ್ಲಿ ಮೃತಪಟ್ಟಿದ್ದಾನೆ. ಮೃತ ದೇಹವನ್ನು ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗ್ರಾಮೀಣ ಠಾಣೆಯ ಪಿಎಸ್ಐ ಕೃಷ್ಣ ಗೌಡ ಹರಿಕೇರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ | Night Robbery Case: ಕಾರಿಗೆ ಡಿಕ್ಕಿ ಹೊಡೆದು ಹಣ ಸುಲಿಗೆಗೆ ಮುಂದಾದ ದುಷ್ಕರ್ಮಿಗಳು ಈಗ ಕಂಬಿ ಹಿಂದೆ ಲಾಕ್‌

Exit mobile version