Site icon Vistara News

Assault Case: ಶಿವಮೊಗ್ಗದಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ತಲೆಯಲ್ಲೇ ಸಿಕ್ಕಿಕೊಂಡ ಲಾಂಗ್‌

Crime Scene

ಶಿವಮೊಗ್ಗ: ಯುವಕನ ಮೇಲೆ ದುಷ್ಕರ್ಮಿಗಳು ಲಾಂಗ್‌ನಿಂದ ಮಾರಣಾಂತಿಕ ಹಲ್ಲೆ (Assault Case) ನಡೆಸಿರುವ ಘಟನೆ ನಗರದ ಬಸ್ ನಿಲ್ದಾಣದ ಬಳಿ ಭಾನುವಾರ ರಾತ್ರಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಶಾಂತ್ ಗಾಯಾಳು ಯುವಕ. ಹಲ್ಲೆ ಮಾಡಿದಾಗ ತಲೆಯಲ್ಲಿ ಲಾಂಗ್ ಸಿಕ್ಕಿಹಾಕಿಕೊಂಡಿದ್ದು, ನರಳಾಡುತ್ತಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಾಯಿಯನ್ನು ಚುಡಾಯಿಸಿದವನ ಮನೆಗೆ ನುಗ್ಗಿ ಹೊಡೆದು ಕೊಂದ ಮಗ

ಬೆಳಗಾವಿ: ತಾಯಿಯನ್ನು ಚುಡಾಯಿಸಿದ್ದಕ್ಕೆ (teasing) ಸಿಟ್ಟಾದ ಮಗನೊಬ್ಬ, ಯುವಕನ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿ (Murder Case) ಆಗಿದ್ದಾನೆ. ಬೆಳಗಾವಿ ನಗರದ ತೆಲಗು ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಗಣೇಶ ಕಾಂಬಳೆ (25) ಕೊಲೆಯಾದವನು. ತರುಣ್ ನಾಯ್ಕ ಆರೋಪಿಯಾಗಿದ್ದಾನೆ.

ತರುಣ್‌ ನಾಯ್ಕ ತಾಯಿಯನ್ನು ಗಣೇಶ ಕಾಂಬಳೆ ಚುಡಾಯಿಸಿದ್ದ. ಈ ವಿಷಯ ತಿಳಿದು ಸಿಟ್ಟಾದ ತರುಣ್‌ ಕೈಯಲ್ಲಿ ದೊಣ್ಣೆ ಹಿಡಿದು ಗಣೇಶನ ಮನೆಗೆ ನುಗ್ಗಿದ್ದ. ದೊಣ್ಣೆಯಿಂದ ಗಣೇಶನ ತಲೆಗೆ ಬಡಿದು ತೀವ್ರವಾಗಿ ಹಲ್ಲೆ ಮಾಡಿದ್ದ. ತೀವ್ರ ರಕ್ತಸ್ರಾವದಿಂದ ಗಣೀಶ ಸ್ಥಳದಲ್ಲೇ ಮೃತಪಟ್ಟಿದ್ದ.

ಗಣೇಶ ಮೃತಪಟ್ಟ ನಂತರ ತರುಣ್ ನಾಯ್ಕ ಘಟನಾ ಸ್ಥಳದಿಂದ ಪರಾರಿ ಆಗಿದ್ದ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಗಣೇಶ ಕಾಂಬಳೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು, ಕೊಲೆ ನಡೆದು 12 ಗಂಟೆಯಲ್ಲೆ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ | Self Harming: ಹಣ ಕದ್ದಳೆಂದು ಬಟ್ಟೆ ಬಿಚ್ಚಿಸಿ ಪರಿಶೀಲಿಸಿದ ಶಿಕ್ಷಕಿಯರು; ಮನನೊಂದ ವಿದ್ಯಾರ್ಥಿನಿ ನೇಣಿಗೆ ಶರಣು

ತರುಣ್‌ಗೆ ಸಹಾಯ ಮಾಡಿದ ಓರ್ವ ಬಾಲಾಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ತುರಣ್ ನಾಯ್ಕನ ತಾಯಿಯನ್ನು ಗಣೇಶ ಕಾಡಿಸಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಮನಗೆ‌ ನುಗ್ಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ತಲೆ ಮರೆಸಿಕೊಂಡಿದ್ದ ತರುಣ್ ನಾಯ್ಕ ಬಂಧಿಸಿರುವ ಬೆಳಗಾವಿಯ ಪ್ಯಾಂಪ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version