Site icon Vistara News

Youth drowned | ಶಿಂಷಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ಯುವಕ ನೀರುಪಾಲು

mandya neerupalu

ಮಂಡ್ಯ: ಮದ್ದೂರಿನ ಕೊಲ್ಲಿ ಸರ್ಕಲ್ ಬಳಿಯ ಶಿಂಷಾ ನದಿಯಲ್ಲಿ ಯುವಕನೊಬ್ಬ ಕೊಚ್ಚಿ (youth drowned) ಹೋಗಿದ್ದಾನೆ. ಮದ್ದೂರಿನ ಹೊಳೆ ಬೀದಿಯ ನಿವಾಸಿ ಮೊಹೀನ್ ಪಾಷಾ(18) ಮೃತ ದುರ್ದೈವಿ. ಈತ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ ವೇಳೆ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದಾನೆ.

ಮೊಹೀನ್‌ ಪಾಷಾ ಮತ್ತು ಆತನ ತಂದೆ ಮೀನು ಹಿಡಿಯಲು ಹೋಗಿದ್ದ. ಆಗ ಅವನಿಗೆ ಪರಿಚಿತರೇ ಆಗಿದ್ದ ಇಬ್ಬರು ಸ್ನೇಹಿತರು ನದಿಯಲ್ಲಿ ಈಜಾಡುತ್ತಿದ್ದರು. ಈ ವೇಳೆ ಮೊಹೀನ್‌ ಪಾಷಾ ಕೂಡಾ ಈಜಾಡಲು ನೀರಿಗೆ ಇಳಿದಿದ್ದಾನೆ. ಆಗ ಆತ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ.

ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ತಂಡ ಮೃತ ದೇಹ ಪತ್ತೆ ಕಾರ್ಯಕ್ಕಿಳಿದು ಒಂದು ಗಂಟೆ ಬಳಿಕ ಮೃತ ದೇಹ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ Drowned in pond | ನೀರಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆಗೆ ಹೋದ ವ್ಯಕ್ತಿಯೂ ನೀರುಪಾಲು! ಡಬಲ್‌ ದುರಂತ

Exit mobile version