Site icon Vistara News

ಪ್ರೀತಿಸಿದವನ ಮೇಲೆ ರೇಪ್‌ ದೂರು, ಅಂಗದಾನ ಮಾಡಿಕೊಂಡು ಯುವಕ ಆತ್ಮಹತ್ಯೆ

youth suicide

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಭಗ್ನ ಪ್ರೇಮ ಪ್ರಕರಣ ಹಾಗೂ ಅತ್ಯಾಚಾರದ ದೂರು ಕಾರಣವಾಗಿದೆ ಎಂದು ತಿಳಿದುಬಂದಿದೆ. ಸಾಯುವ ಮುನ್ನ ಯುವಕ ಅಂಗದಾನ ಮಾಡಿದ್ದಾನೆ.

ಹಿತ್ತಲ ಗ್ರಾಮದ ಮದನ್ ಕುಮಾರ್ (24) ಮೃತ ಯುವಕ. ವೈರಿಂಗ್ ಕೆಲಸ ಮಾಡಿಕೊಂಡಿದ್ದ ಮದನ್ ಕುಮಾರ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರೇಮಪ್ರಕರಣ ಆತ್ಮಹತ್ಯೆಗೆ ಕಾರಣ ಎಂದ ಕುಟುಂಬಸ್ಥರು ಹೇಳಿದ್ದಾರೆ.

ಅದೇ ಗ್ರಾಮದ ಯುವತಿಯನ್ನು ಮದನ್ ಕುಮಾರ್ ಪ್ರೀತಿಸುತ್ತಿದ್ದ. ಹಲವು ವರ್ಷಗಳಿಂದ ಇಬ್ಬರ ನಡುವೆ ಪ್ರೀತಿಯಿತ್ತು. ಆದರೆ ಯುವತಿ ಮನೆಯವರಿಂದ ಈತನ ಮೇಲೆ ಕಿರುಕುಳ ನಡೆಯುತ್ತಿತ್ತು. ಅವರು ಮದನ್ ಕುಮಾರ್ ಮೇಲೆ ಅತ್ಯಾಚಾರ ದೂರು ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿತ್ತು. ಯುವತಿ ಮನೆಯವರು 25 ಲಕ್ಷ ರೂ. ನೀಡಲು ಒತ್ತಡ ಹಾಕಿದ್ದರು ಎಂದು ಯುವಕನ ಕುಟುಂಬದವರು ಆರೋಪಿಸಿದ್ದು, ಸಾವಿಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ನಡುವೆ, ಡೆತ್‌ ನೋಟ್‌ ಬರೆದಿಟ್ಟಿರುವ ಯುವಕ, ತನ್ನ ಕಣ್ಣು ಮತ್ತಿತರ ಅಂಗಾಂಗಗಳನ್ನು ದಾನ ಮಾಡುವಂತೆಯೂ ಬರೆದಿಟ್ಟಿದ್ದಾನೆ. ಯುವತಿಯ ತಂದೆ ಮಂಜಪ್ಪ, ಅವರ ಪತ್ನಿ ಮತ್ತು ಮಗಳು ಕೊಲೆ ಬೆದರಿಕೆ ಒಡ್ಡಿದ್ದಾರೆ. ನನ್ನ ಫೋನ್‌ನಲ್ಲಿ ಕೊಲೆ ಬೆದರಿಕೆ ರೆಕಾರ್ಡಿಂಗ್ ಇದೆ. ಅತ್ಯಾಚಾರದ ಸುಳ್ಳು ಆರೋಪ ಹೊರಿಸಿ ಕಿರುಕುಳ ನೀಡಿದ್ದಾರೆ. ಅಪಹರಣ ಮಾಡಿಯೂ ಕೊಲೆಗೆ ಯತ್ನಿಸಿದ್ದರು. ಮಂಜಪ್ಪ, ಗೀತಮ್ಮ, ಗುರುರಾಜ್, ಕಿರಣ್, ಶಿವಪ್ಪ ತನ್ನ ಸಾವಿಗೆ ಕಾರಣ ಎಂದು ಯುವಕ ಬರೆದಿಟ್ಟಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | ವಿಮ್ಸ್‌ ಆಸ್ಪತ್ರೆ ಸಾವಿನ ಹೊಣೆ ಹೊರದ ಸರ್ಕಾರ: ಆಕಸ್ಮಿಕವಲ್ಲ, ಕೊಲೆ ಎಂದ ಸಿದ್ದರಾಮಯ್ಯ

Exit mobile version