Site icon Vistara News

Murder Case: ಭೀಮಾ ತೀರದಲ್ಲಿ‌ ಮತ್ತೆ ಹರಿದ ನೆತ್ತರು; ಯುವಕನ ರುಂಡ ಚಂಡಾಡಿದ ಕಿರಾತಕರು!

balabhima sagara

ಕಲಬುರಗಿ: ಭೀಮಾ ತೀರದಲ್ಲಿ‌ ಮತ್ತೆ ನೆತ್ತರು ಹರಿದಿದೆ. ಅಫಜಲಪುರ ತಾಲೂಕಿನ ಸಿಧನೂರ‌ ಗ್ರಾಮದಲ್ಲಿ ಯುವಕನ ಭೀಕರ ಹತ್ಯೆ ಮಾಡಿರುವ ಘಟನೆ (Murder Case) ನಡೆದಿದೆ. ಬಲಭೀಮ ಸಗರ (23) ಮೃತ ಯುವಕ. ಹಳೆ‌ ವೈಷಮ್ಯ‌ದ ಹಿನ್ನೆಲೆ‌ಯಲ್ಲಿ ಕಿರಾತಕರು, ಯುವಕನ ರುಂಡ ಚಂಡಾಡಿದ್ದಾರೆ. ಸ್ಥಳಕ್ಕೆ ರೇವೂರ(ಬಿ) ಪೊಲೀಸರು ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾದಿಕಾರಿ‌ ಶ್ರೀನಿಧಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೃದಯಾಘಾತದಿಂದ ಬಸ್‌ನಲ್ಲೇ ಸಂಶೋಧನಾ ವಿದ್ಯಾರ್ಥಿ ಸಾವು

ವಿಜಯನಗರ: ಬಸ್‌ನಲ್ಲೇ ಹೃದಯಾಘಾತವಾಗಿ ಸಂಶೋಧನಾ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಜೇವರ್ಗಿ ಸಮೀಪ ನಡೆದಿದೆ. ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತ ಪ್ರತಿಶಾಸ್ತ್ರ ವಿಭಾಗದ ಪಿಎಚ್‌ಡಿ ವಿದ್ಯಾರ್ಥಿ ರಾಜಶೇಖರ್ ಬಡಿಗೇರ್ (30) ಮೃತ.

ಹಂಪಿ ಕನ್ನಡ ವಿವಿಯಿಂದ ತನ್ನ ಊರಿಗೆ ತರಳುತ್ತಿದ್ದಾಗ ಜೇವರ್ಗಿ ಸಮೀಪ ಹೃದಯಾಘಾತದಿಂದ ಯುವಕ ಮೃತಪಟ್ಟಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಊರಿಗೆ ತೆರಳಿದ್ದರು. ಶುಕ್ರವಾರ ಬೆಳಗಿನ ಜಾವ 10 ಗಂಟೆ ಹೊತ್ತಿಗೆ ಹೃದಯಾಘಾತದಿಂದ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಬೆಳಗ್ಗೆ ಜೇವರ್ಗಿ ಊರು ಬಂದಾಗ, ಬಸ್‌ ಕಂಡಕ್ಟರ್‌ ಎಬ್ಬಿಸಲು ಹೋದಾಗ ಮೃತಪಟ್ಟಿರುವುದು ತಿಳಿದುಬಂದಿದೆ.

ಇದನ್ನೂ ಓದಿ | Murder Case : ತಲೆ ಮೇಲೆ ಕಲ್ಲು ಎತ್ತಿಹಾಕಿ 8ನೇ ಕ್ಲಾಸ್‌ ಹುಡುಗನ ಬರ್ಬರ ಹತ್ಯೆ

ಮನೆಯಲ್ಲೇ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಕಾರವಾರ: ವ್ಯಕ್ತಿಯೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಶಿರವಾಡದಲ್ಲಿ ನಡೆದಿದೆ. ಮಾರುತಿ ನಾಯ್ಕ (35) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪತ್ನಿ ಕೆಲಸಕ್ಕೆ ತೆರಳಿದ್ದು, ಮಕ್ಕಳು ಹೊರಗೆ ಆಟವಾಡುತ್ತಿದ್ದ ವೇಳೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಅತನನ್ನು ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ನೀಡುವ ವೇಳೆಗೆ ಮಾರುತಿ ನಾಯ್ಕ ಮೃತಪಟ್ಟಿದ್ದರು.

ಮಾರುತಿ ಕೆಲ ದಿನಗಳಿಂದ ಯಾವುದೋ ವಿಚಾರ ಮನಸ್ಸಿಗೆ ಹಚ್ಚಿಕೊಂಡಿದ್ದರು ಎನ್ನಲಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version