Site icon Vistara News

Anant Ambani Marriage: ಅನಂತ್ ಅಂಬಾನಿ ಅರಿಶಿನ ಶಾಸ್ತ್ರದ ವಿಡಿಯೋ ವೈರಲ್; ಕುಣಿದು ಕುಪ್ಪಳಿಸಿದ ಹಾರ್ದಿಕ್ ,ರಣವೀರ್ ಸಿಂಗ್!

Anant Ambani Marriage


ಮುಂಬೈ: ಉದ್ಯಮಿ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani Marriage ) ಮತ್ತು ರಾಧಿಕಾ ಮರ್ಚಂಟ್‌ ಇತ್ತೀಚೆಗೆ ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಇವರ ಮದುವೆಗೆ ಹಲವು ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು. ಇದೀಗ ಅನಂತ್ ಅಂಬಾನಿ ಮದುವೆ ಆಚರಣೆಯ ಹೊಸ ವಿಡಿಯೊಂದು ಹೊರಬಿದ್ದಿದೆ ಈ ವಿಡಿಯೊದಲ್ಲಿ ಮದುವೆಯ ಆಚರಣೆಯ ಅಂಗವಾದ ಅರಿಶಿನ ಶಾಸ್ತ್ರದಲ್ಲಿ ಅನಂತ್ ಮತ್ತು ರಾಧಿಕಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆದಿದ್ದಾರೆ, ಇದರಲ್ಲಿ ಎಲ್ಲರಿಗೂ ಅರಿಶಿನವನ್ನು ಹಚ್ಚಲಾಗಿದೆ. ಅರಿಶಿನದೊಂದಿಗೆ ಓಕುಳಿಯಾಡುತ್ತಾ ಎಲ್ಲರೂ ಕುಣಿದು ಕುಪ್ಪಳಿಸಿದ್ದಾರೆ.

ಈ ವಿಡಿಯೊದಲ್ಲಿ, ಅನಂತ್ ಅವರು ತನ್ನ ಸುತ್ತಲಿನ ಎಲ್ಲರ ಮೇಲೆ ಬಕೆಟ್‌ನಲ್ಲಿ ಅರಿಶಿನವನ್ನು ಎಸೆದು ಖುಷಿಪಟ್ಟಿದ್ದಾರೆ.ಹಾಗೇ ತಮ್ಮ ತಾಯಿ ನೀತಾ ಅಂಬಾನಿ ಅವರ ಮೇಲೂ ಅರಶಿನದ ನೀರನ್ನು ಸುರಿದಿದ್ದಾರೆ. ನೀತಾ ಅಂಬಾನಿ ಕೂಡ ನಗು ನಗುತ್ತಾ ಮಗನ ಮದುವೆ ದಿನವನ್ನು ಸಂಭ್ರಮಿಸಿದ್ದಾರೆ. ಅನಂತ್ ತನ್ನ ತಂದೆಯ ಕೆನ್ನೆಗೂ ಅರಿಶಿನವನ್ನು ಹಚ್ಚಿದ್ದಾರೆ ಹಾಗೂ ರಾಧಿಕಾಗೂ ಕೂಡ ಅರಿಶಿನ ಹಚ್ಚಿದ್ದಾರೆ. ರಾಧಿಕಾ ಅವರ ತಂದೆ ವೀರೇನ್ ಮರ್ಚೆಂಟ್ ಕೂಡ ತನ್ನ ಮಗಳ ಮದುವೆ ಆಚರಣೆ ಕಂಡು ಸಂತೋಷಗೊಂಡಿದ್ದಾರೆ.

ಇದನ್ನೂ ಓದಿ: Ghuspaithiya Hindi Movie: ರಮೇಶ್ ರೆಡ್ಡಿ ನಿರ್ಮಾಣದ ʼಘುಸ್ಪೈಥಿಯಾʼ ಹಿಂದಿ ಸಿನಿಮಾ ಆ. 9ರಂದು ತೆರೆಗೆ

ನಟ ರಣವೀರ್ ಸಿಂಗ್ ಮತ್ತು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಕೂಡ ಈ ಅರಿಶಿನದ ಆಚರಣೆಯಲ್ಲಿ ಭಾಗವಹಿಸಿದ್ದರು. ಅವರಿಬ್ಬರೂ ಅರಿಶಿನದಲ್ಲಿ ಒದ್ದೆಯಾಗಿ ರಾತ್ರಿ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರ ಅಭಿಮಾನಿಗಳು ವಿಡಿಯೊಗೆ ಕಾಮೆಂಟ್ ಮಾಡಿದ್ದಾರೆ. “ಹಾರ್ದಿಕ್ ಮತ್ತು ರಣವೀರ್ ಸಿಂಗ್ ತಮ್ಮ ಸ್ವಂತ ಮದುವೆಯಲ್ಲಿ ಆನಂದಿಸಲು ಸಾಧ್ಯವಾಗದ ರೀತಿಯಲ್ಲಿ ಆನಂದಿಸುತ್ತಿದ್ದಾರೆ” ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. “ರಣವೀರ್ ಸಿಂಗ್ ಫುಲ್ ಪೈಸಾ ವಸೂಲ್ ಪ್ರದರ್ಶನ ನೀಡುತ್ತಿದ್ದಾರೆ” ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

“ರಣವೀರ್ ಇಲ್ಲದಿದ್ದರೆ ಈ ಮದುವೆ ನೀರಸ ಮದುವೆಯಾಗುತ್ತಿತ್ತು” ಎಂದು ಇನ್ನೊಬ್ಬರು ಹೇಳಿದ್ದಾರೆ. ಇತರರು ನೀತಾ ಅಂಬಾನಿ ಕೂಡ ಅಲ್ಲಿ ಉಲ್ಲಾಸದಿಂದ ಸಂಭ್ರಮಿಸಿದ್ದನ್ನು ನೋಡಿ ಸಂತೋಷಪಟ್ಟರು. “ನೀತಾ ಅಂಬಾನಿ ಅವರ ಕ್ರೇಜಿ ಲುಕ್ ಅನ್ನು ಹಿಂದೆಂದೂ ನೋಡಿಲ್ಲ” ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಇನ್ನೊಬ್ಬರು ಅವರು ನಿಜವಾಗಿಯೂ ಈ ಆಚರಣೆಗೆ ಚಂದನ್ (ಶ್ರೀಗಂಧ) ಪೇಸ್ಟ್ ಬಳಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಚ್ಛೇದನ ಸಿಕ್ಕಿದ ಖುಷಿಗೆ ʼಡಿವೋರ್ಸ್‌ ಪಾರ್ಟಿʼ ಮಾಡಿ ಕುಣಿದು ಕುಪ್ಪಳಿಸಿದ ಯುವತಿ! ವಿಡಿಯೊ ನೋಡಿ

ಜುಲೈ 12 ರಂದು ಭವ್ಯ ಸಮಾರಂಭದೊಂದಿಗೆ ಅನಂತ್-ರಾಧಿಕಾ ಅವರ ವಿವಾಹ ಮಹೋತ್ಸವ ಪ್ರಾರಂಭವಾಯಿತು, ನಂತರ ಜುಲೈ 13 ರಂದು ಶುಭ ಆಶೀರ್ವಾದ್ ಸಮಾರಂಭ ನಡೆಯಿತು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಸಿದ್ಧ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಜುಲೈ 14 ರಂದು ನಡೆದ ಭವ್ಯ ಆರತಕ್ಷತೆಯಲ್ಲಿ ಮನರಂಜನಾ ಉದ್ಯಮದ ಪ್ರಮುಖ ವ್ಯಕ್ತಿಗಳು ಭಾಗವಹಿಸಿದ್ದರು.

Exit mobile version