Site icon Vistara News

Kolkata Doctor Murder Case: ಹೆಣ್ಣಿನ ಮೇಲೆ ಆಸೆಯಾದರೆ ನಮ್ಮ ಬಳಿ ಬನ್ನಿ; ಕಾಮುಕರಿಗೆ ಯುವತಿಯ ಮುಕ್ತ ಆಹ್ವಾನ!

Kolkata Doctor Murder Case


ಕೋಲ್ಕತ್ತಾ : ಕೋಲ್ಕತಾದ ಆರ್ ಜಿಕೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ 31 ವರ್ಷದ ತರಬೇತಿ ವೈದ್ಯರ ಕ್ರೂರ ಅತ್ಯಾಚಾರ (Kolkata Doctor Murder Case) ಮತ್ತು ಕೊಲೆ ರಾಷ್ಟ್ರವನ್ನು ಬೆಚ್ಚಿ ಬೀಳಿಸಿದೆ. ಈ ಕುರಿತು ವ್ಯಾಪಕ ಪ್ರತಿಭಟನೆಗಳು ನಡೆಸಿ, ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ತ್ವರಿತವಾಗಿ ವಿಚಾರಣೆಗೆ ಒಳಪಡಿಸಬೇಕೆಂದು ಒತ್ತಾಯಿಸಲಾಗಿದೆ. ಇಂತಹ ಆಕ್ರೋಶದ ಮಧ್ಯೆ, ಒಂದು ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೊದಲ್ಲಿ ಕೋಲ್ಕತ್ತಾದ ಸೋನಾಗಚಿ ಕೆಂಪುದೀಪ ಪ್ರದೇಶದ ಮಹಿಳೆಯೊಬ್ಬರು ಕಾಮುಕರಲ್ಲಿ ವಿನಂತಿಯೊಂದನ್ನು ಮಾಡಿಕೊಂಡಿದ್ದಾಳೆ.

ನಿಮಗೆ ಹೆಣ್ಣಿನ ಮೇಲೆ ಅಷ್ಟೊಂದು ವ್ಯಾಮೋಹವಿದ್ದರೆ ನಮ್ಮ ಬಳಿಗೆ ಬನ್ನಿ. ದಯವಿಟ್ಟು ಮಹಿಳೆಯರ ಜೀವನವನ್ನು ಹಾಳು ಮಾಡಬೇಡಿ. ಅತ್ಯಾಚಾರವನ್ನು ಮಾಡುವ ಮೂಲಕ ಅವರ ಜೀವನವನ್ನು ನಾಶಪಡಿಸಬೇಡಿ ಎಂದು ಅವಳು ವಿಡಿಯೊ ಮೂಲಕ ಕರೆ ನೀಡಿದ್ದಾಳೆ. ಆಕೆಯ ಹೇಳಿಕೆಯ ವಿಡಿಯೊ ಈಗ ವೈರಲ್ ಆಗಿದ್ದು, ಆಕೆಯನ್ನು ಆನ್‍ಲೈನ್ ಸೆನ್ಸೇಷನ್ ಆಗಿಸಿದೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಅವಳನ್ನು ಹೀರೋ ಎಂದು ಹೊಗಳಿದ್ದಾರೆ ಮತ್ತು ‘ಅತ್ಯಾಚಾರಿಗಳು’ ಅವಳಿಂದ ಮಾನವೀಯತೆಯನ್ನು ಕಲಿಯಬೇಕೆಂದು ತಿಳಿಸಿದ್ದಾರೆ.

“ನಾವು ಇಲ್ಲಿ ದೊಡ್ಡ ರೆಡ್ ಲೈಟ್ ಏರಿಯಾವನ್ನು ಹೊಂದಿದ್ದೇವೆ. ಇಲ್ಲಿ ಮಹಿಳೆಯರು 20-50 ರೂ.ಗಳಿಗೆಲ್ಲ ಸಿಗುತ್ತಾರೆ. ನಿಮಗೆ ಕಾಮ ಕೆರಳಿದಾಗ ಅತ್ಯಾಚಾರ ಮಾಡುವ ಬದಲು ಇಲ್ಲಿಗೆ ಬನ್ನಿ. ಆದರೆ ದಯವಿಟ್ಟು, ಕೇವಲ ಜೀವನೋಪಾಯಕ್ಕಾಗಿ ಕಷ್ಟಪಡುತ್ತಿರುವ ಮಹಿಳೆಯರನ್ನು ಗುರಿಯಾಗಿಸಬೇಡಿ. ಈ ಮನಸ್ಥಿತಿಯನ್ನು ಬದಲಾಯಿಸುವ ಸಮಯ ಬಂದಿದೆ” ಎಂದು ಲೈಂಗಿಕ ಕಾರ್ಯಕರ್ತೆ ಹೇಳಿದ್ದಾಳೆ.

ಈ ವಿಡಿಯೊಗೆ ಅನೇಕರು ಕಾಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಹೆಚ್ಚಿನ ಅತ್ಯಾಚಾರಿಗಳು ಪಶ್ಚಾತ್ತಾಪದ ಕೊರತೆ, ಪ್ರಚೋದನೆ, ಅಧಿಕಾರದ ಆಸೆ ಮತ್ತು ಮಹಿಳೆಯರ ದೇಹದ ಮೇಲಿನ ಆಸೆಯಂತಹ ಕೆಲವು ಸಾಮಾನ್ಯ ಗುಣಲಕ್ಷಣಗಳನ್ನು ಹೊಂದಿರುತ್ತಾರೆ” ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರೊಬ್ಬರು, ರಾಕ್ಷಸನು ವೇಶ್ಯೆಗೆ ಇದೆಲ್ಲವನ್ನೂ ಮಾಡಿದರೆ ಅದು ಸರಿಯೇ? ಅವಳು ಮನುಷ್ಯಳಲ್ಲವೇ? ಎಂದು ಬರೆದಿದ್ದಾರೆ.

ಇದನ್ನೂ ಓದಿ:ವಧುವಿನ ಮುಂದೆಯೇ ಆಕೆಯ ಸಹೋದರಿಗೆ ಕಿಸ್‌ ಕೊಟ್ಟ ವರ! ಮದುವೆಗೆ ಬಂದವರು ಕಕ್ಕಾಬಿಕ್ಕಿ!

ರೆಡ್ ಲೈಟ್ ಏರಿಯಾ ಮಹಿಳೆಯರು ಅಮಾನವೀಯರಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮತ್ತೊಬ್ಬ ಬಳಕೆದಾರರು ಹಂಚಿಕೊಂಡಿದ್ದಾರೆ. ಇನ್ನೊಬ್ಬರು ಹೇಳಿದರು, ಈ ಹೇಳಿಕೆ ಲೈಂಗಿಕ ಹಿಂಸಾಚಾರದ ವರ್ತನೆಗಳು, ನಡವಳಿಕೆಗಳು ಮತ್ತು ವ್ಯವಸ್ಥೆಗಳನ್ನು ಶಾಶ್ವತವಾಗಿ ಬದಲಾಯಿಸುವ ಕಠಿಣ ಕೆಲಸವನ್ನು ತಪ್ಪಿಸುವ ಮಾರ್ಗವಾಗಿದೆ. ಈ ವಿಧಾನವು ಹಾನಿಕಾರಕ ಮಾನದಂಡಗಳನ್ನು ಪ್ರಶ್ನಿಸುವ ಮತ್ತು ಪರಿವರ್ತಿಸುವ ಬದಲು ಉದ್ದೇಶಪೂರ್ವಕವಾಗಿ ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.

Exit mobile version