Site icon Vistara News

Murder Case: ʼಸಾಫ್ಟ್ ಟಚ್ʼ ಸ್ಪಾಗೆ ಹೋಗಿದ್ದ ಕ್ರಿಮಿನಲ್‌ನನ್ನು ಪ್ರೇಯಸಿ ಎದುರೇ ತುಂಡು ತುಂಡಾಗಿ ಕತ್ತರಿಸಿದರು!

Murder Case


ಮುಂಬೈ: ಇತ್ತೀಚಿನ ದಿನಗಳಲ್ಲಿ ಮನುಷ್ಯರು ತುಂಬಾ ಕ್ರೂರವಾಗಿ ವರ್ತಿಸುತ್ತಿದ್ದಾರೆ. ಪ್ರಾಣಿಗಳಂತೆ ಮನುಷ್ಯರನ್ನು ಕೂಡ ಜನರು ಪ್ರತಿಕಾರದಿಂದ ತುಂಡುತುಂಡಾಗಿ ಕ್ರೂರವಾಗಿ ಕೊಲೆ ಮಾಡುತ್ತಿದ್ದಾರೆ. ಇಂತಹದೊಂದು ಪ್ರಕರಣ ಇದೀಗ ಮುಂಬೈನ ವರ್ಲಿಯಲ್ಲಿ ನಡೆದಿದ್ದು, ಅಪರಾಧ ಹಿನ್ನೆಲೆಯನ್ನು ಹೊಂದಿರುವ 50 ವರ್ಷದ ವ್ಯಕ್ತಿಯನ್ನು ಸ್ಪಾದಲ್ಲಿ ತುಂಡು ತುಂಡಾಗಿ ಕತ್ತರಿಸಿದ (Murder Case) ಘಟನೆ ಜುಲೈ 24ರಂದು ಮುಂಜಾನೆ ನಡೆದಿದೆ.

ಪೊಲೀಸರ ಪ್ರಕಾರ, ಗುರುಸಿದ್ದಪ್ಪ ವಾಘ್ಮೋರೆ ಅಲಿಯಾಸ್ ಚುಲ್ಬುಲ್ ಪಾಂಡೆ ತನ್ನ ಗೆಳತಿಯೊಂದಿಗೆ ಸಿಯಾನ್ ರೈಲ್ವೆ ನಿಲ್ದಾಣದ ಬಳಿಯ ಅಪರ್ಣಾ ಬಾರ್ & ರೆಸ್ಟೋರೆಂಟ್‍ನಲ್ಲಿ ಡ್ರಿಂಕ್ಸ್ ಮಾಡಿದ ನಂತರ ವರ್ಲಿ ನಾಕಾ ಬಳಿಯ ಸಾಫ್ಟ್ ಟಚ್ ಸ್ಪಾಗೆ ಹೋಗಿದ್ದರು. ಚುಲ್ಬುಲ್ ಪಾಂಡೆ ಸ್ವಲ್ಪ ದಿನದಲ್ಲೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಲಿದ್ದಾರೆ ಎನ್ನಲಾಗಿದೆ.

ವರ್ಲಿ ನಾಕಾದ ಎಲ್.ಆರ್.ಪಾಪನ್ ಮಾರ್ಗದ ಮಂಜ್ರೇಕರ್ ಕಟ್ಟಡದ ನೆಲಮಹಡಿಯಲ್ಲಿರುವ ಸ್ಪಾಗೆ ಹೋಗಿದ್ದಾರೆ. ಆದರೆ ಕಳೆದ ಆರು ತಿಂಗಳಿನಿಂದ ಆ ಸ್ಪಾ ಮುಚ್ಚಲ್ಪಟ್ಟಿತ್ತು, ಆದರೆ ಅದರ ಮಾಲೀಕರಿಗೆ ಹತ್ತಿರವಾಗಿದ್ದ ಚುಲ್ಬುಲ್ ಪಾಂಡೆ ಸ್ನೇಹಿತೆಗೆ ಅದಕ್ಕೆ ಹೋಗಲು ಅವಕಾಶವಿತ್ತು. ಇವರಿಬ್ಬರು ಸ್ಪಾ ಒಳಗೆ ಇದ್ದಾಗ ಚಾಕು ಹೊಂದಿದ್ದ ಮೂವರು ಅಪರಿಚಿತ ವ್ಯಕ್ತಿಗಳು ಬಾಗಿಲು ಮುರಿದು ಒಳಗೆ ಬಂದು ಸೋಫಾದ ಮೇಲೆ ಮಲಗಿದ್ದ ವಾಘ್ಮೋರೆ ಮೇಲೆ ಚಾಕುವಿನಿಂದ ಹಲವಾರು ಬಾರಿ ಚುಚ್ಚಿದ್ದಾರೆ. ಈ ಬಗ್ಗೆ ವಿಲೆ ಪಾರ್ಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದೆ. ಹಾಗಾಗಿ ಸ್ಥಳಕ್ಕೆ ಬಂದ ವಿಲೆ ಪಾರ್ಲೆ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಯ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲು ಆರು ತಂಡಗಳನ್ನು ನಿಯೋಜಿಸಲಾಗಿದೆ. ಪ್ರಮುಖ ಸಾಕ್ಷಿಯಾಗಿರುವ ಮಹಿಳೆಯ ಜೊತೆ ಶವವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಅಧಿಕಾರಿ, “ಘಟನೆಯ ಬಗ್ಗೆ ನಮಗೆ ಮಧ್ಯಾಹ್ನ ಕರೆ ಬಂದಿದೆ. ನಾವು ಸ್ಥಳಕ್ಕೆ ಬಂದು ಹತ್ಯೆಗೊಳಗಾದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದೆವು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ದೇಹದಾದ್ಯಂತ ಗಾಯಗಳಿದ್ದವು. ಅದರ ಆಧಾರದ ಮೇಲೆ ನಾವು ಎಫ್ಐಆರ್ ದಾಖಲಿಸಿದ್ದೇವೆ ಮತ್ತು ಆರೋಪಿಗಳನ್ನು ಬಂಧಿಸಲು ಹುಡುಕಾಟ ಪ್ರಾರಂಭಿಸಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಆರೋಪಿಗಳನ್ನು ಬಂಧಿಸಲು ವರ್ಲಿ ಪೊಲೀಸರು ಈಗ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕೊಲೆಯಾದ ವ್ಯಕ್ತಿ ಹಾಗೂ ಆತನ ಸ್ನೇಹಿತೆ ಮೇಲೆ ಯಾರೋ ಕಣ್ಣಿಟ್ಟಿದ್ದರು ಮತ್ತು ಅವರು ಸ್ಪಾಗೆ ಪ್ರವೇಶಿಸಿದಾಗ ಕೊಲೆಗಾರರಿಗೆ ಸುಳಿವು ನೀಡಿದ್ದಾರೆ. ಇದು ಪ್ಲ್ಯಾನ್ ಮಾಡಿ ಮಾಡಿದ ಕೊಲೆಯಾಗಿದೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಯುವಕನಿಗೆ ಜಾಡಿಸಿ ಒದ್ದ ಜಿಮ್‌ ಮಾಲೀಕನನ್ನು ಮತ್ತೊಬ್ಬ ಯುವಕ ಇರಿದು ಕೊಂದ; ವಿಡಿಯೊ ಇದೆ

ಇದೇ ರೀತಿಯ ಘಟನೆ ಉತ್ತರ ಪ್ರದೇಶದ ಪ್ರತಾಪ್‌ಘಡದಲ್ಲಿ ಬೆಳಕಿಗೆ ಬಂದಿದೆ. ಮಹಿಳೆ ತನ್ನ ಪತಿಯ ಜೊತೆ ಸೇರಿಕೊಂಡು ತನ್ನ ಪ್ರಿಯಕರನನ್ನು ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಈ ಪ್ರಕರಣವನ್ನು ಕಂಡು ಉತ್ತರ ಪ್ರದೇಶ, ಬಿಹಾರ ಮತ್ತು ಹರಿಯಾಣದ ಪೊಲೀಸರು ಆಘಾತಕ್ಕೊಳಗಾಗಿದ್ದಾರೆ.

Exit mobile version