Site icon Vistara News

Viral Video: ನಿನಗೆಷ್ಟು ಬಾಯ್‌ಫ್ರೆಂಡ್‌ ಎನ್ನುತ್ತ ಗೆಳತಿಗೆ ಭೀಕರವಾಗಿ ಇರಿದ ಯುವ ಕಾಂಗ್ರೆಸ್ ಮುಖಂಡ!

Viral Video


ಇತ್ತೀಚೆಗೆ ಲವ್‌ ಬ್ರೇಕಪ್, ಮೋಸ, ವಂಚನೆ ಮಾಡುವಂತಹ ಪ್ರಕರಣಗಳು (Love Case) ಇತ್ತೀಚೆಗೆ ಮಿತಿ ಮೀರಿ ಬಿಟ್ಟಿದೆ. ಇದೀಗ ಮಧ್ಯಪ್ರದೇಶದಲ್ಲಿ ಕೂಡ ಇಂತಹದೊಂದು (Viral Video) ಪ್ರಕರಣ ನಡೆದಿದೆ. ಮಧ್ಯಪ್ರದೇಶದ ನೀಮುಚ್‍ನಲ್ಲಿ ಯುವ ಕಾಂಗ್ರೆಸ್ ನಾಯಕನೊಬ್ಬ ತನ್ನ ಗೆಳತಿಗೆ ಹಾಡಹಗಲೇ ಚಾಕುವಿನಿಂದ ಭೀಕರವಾಗಿ ಇರಿದಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಘಟನೆಯನ್ನು ಪ್ರೇಕ್ಷಕರೊಬ್ಬರು ವಿಡಿಯೊ ಮಾಡಿದ್ದು, ಇದರಲ್ಲಿ ಸಂತ್ರಸ್ತೆ ರಕ್ತದ ಮಡುವಿನಲ್ಲಿ ಬಿದ್ದು ಸಹಾಯಕ್ಕೆ ಮೊರೆ ಇಡುತ್ತಿರುವುದು ಕಂಡು ಬಂದಿದೆ. ಆ ವ್ಯಕ್ತಿ ಅವಳನ್ನು ಭೀಕರವಾಗಿ ಚಾಕುವಿನಿಂದ ಇರಿದಿದ್ದಾನೆ. ಅಲ್ಲೇ ಇದ್ದ ಆತ “ಅವಳು ನನಗೆ ಮೋಸ ಮಾಡಿದ್ದಾಳೆ. ಈ ಹುಡುಗಿಯರು ಕೇವಲ ಹಣವನ್ನು ಬಯಸುತ್ತಾರೆ ಎಂದು ಹೇಳುತ್ತಾ ಆಕೆಯ ಬಳಿ ನಿನಗೆ ಎಷ್ಟು ಬಾಯ್ ಫ್ರೆಂಡ್‌ಗಳಿದ್ದಾರೆ? ಅಯಾನ್, ರಯಾನ್, ಆಜಾದ್, ಹರ್ಷಿತ್?ʼʼ ಎಂದು ಪ್ರಶ್ನಿಸುತ್ತಿರುವುದು ಕೇಳಿಸುತ್ತದೆ.

ವರದಿಗಳ ಪ್ರಕಾರ, ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ನೀಮುಚ್‍ನ ಕಾಟ್ ಪೊಲೀಸ್ ಠಾಣೆ (Cantt police station)ಪ್ರದೇಶದ ಗಾಂಧಿ ವಾಟಿಕಾ ಬಳಿ ಈ ಘಟನೆ ನಡೆದಿದೆ. ಮಾಹಿತಿ ಪಡೆದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ತೀವ್ರ ರಕ್ತಸ್ರಾವವಾಗುತ್ತಿದ್ದ ಯುವತಿಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಜಿಲ್ಲಾ ಆಸ್ಪತ್ರೆಯಿಂದ, ಯುವತಿಯ ಕುಟುಂಬವು ಅವಳನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿತು. ಅಲ್ಲಿ ಅವಳ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಆರೋಪಿಯನ್ನು ಕುಲದೀಪ್ ವರ್ಮಾ (23) ಎಂದು ಗುರುತಿಸಲಾಗಿದೆ. ಆತ ಯುವತಿಯನ್ನು ಕೊಲೆ ಮಾಡುವ ಪ್ರಯತ್ನದ ಹಿಂದಿನ ನಿಖರವಾದ ಉದ್ದೇಶವನ್ನು ಕಂಡುಹಿಡಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಈಗಾಗಲೇ ಪೊಲೀಸರು ಆರೋಪಿಯನ್ನು ಹುಡುಕಿ ಬಂಧಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಜಲಾವೃತ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಮಹಿಳೆಗೆ ಪುಂಡರ ಕಿರುಕುಳ; ವಿಡಿಯೊ ನೋಡಿ ಜನಾಕ್ರೋಶ

ಪ್ರತ್ಯಕ್ಷದರ್ಶಿಗಳ ಪ್ರಕಾರ, ಇವರಿಬ್ಬರು ಉದ್ಯಾನವನದ ಹೊರಗೆ ನಿಂತು ಯಾವುದೋ ವಿಚಾರಕ್ಕೆ ವಾದಿಸುತ್ತಿದ್ದಾಗ ವ್ಯಕ್ತಿ ಚಾಕುವನ್ನು ಹೊರತೆಗೆದು ಆಕೆಗೆ ಇರಿದಿದ್ದಾನೆ. ಸಂತ್ರಸ್ತೆಯ ಕಿರುಚಾಟ ಕೇಳಿ ಸ್ಥಳದಲ್ಲಿದ್ದವರು ಓಡಿ ಬಂದಿದ್ದಾರೆ. ಆದರೆ ಯಾರೂ ಹುಡುಗಿಯನ್ನು ಕಾಪಾಡಲು ಮತ್ತು ಆ ವ್ಯಕ್ತಿಯನ್ನು ಎದುರಿಸಲು ಪ್ರಯತ್ನಿಸಲಿಲ್ಲ ಎನ್ನಲಾಗಿದೆ. ಸಂತ್ರಸ್ತೆಯನ್ನು 20 ವರ್ಷದ ತಸ್ಲೀಮ್, ಬೋಹ್ರಾ ಬಜಾರ್ ನಿವಾಸಿ ಎಂದು ಗುರುತಿಸಲಾಗಿದ್ದು, ಆರೋಪಿ ಕುಲದೀಪ್ ವರ್ಮಾ ಕೇಸರ್ ಪುರ ನಿವಾಸಿಯಾಗಿದ್ದು, ಯುವ ಕಾಂಗ್ರೆಸ್ ನಾಯಕನಾಗಿದ್ದಾನೆ. ಈತ ಜ್ಞಾನೋದಯ ಮಹಾವಿದ್ಯಾಲಯದಲ್ಲಿ ಎನ್ಎಸ್‌ಯುಐನ ಕಾಲೇಜು ಅಧ್ಯಕ್ಷನಾಗಿದ್ದ. ಇತ್ತೀಚೆಗೆ ಅವನನ್ನು ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಸೇರಿಸಲಾಗಿತ್ತು.

Exit mobile version