Site icon Vistara News

ಬೆಂಗಳೂರಿನ ಕೋಣನಕುಂಟೆಯಲ್ಲಿ ಶುರುವಾಗಿದೆ ʼವಡಪ್ಪೆʼ ಮೋಡಿ; ಇಲ್ಲಿ ಸಿಗಲಿದೆ ಪಶ್ಚಿಮಘಟ್ಟದ ತಿಂಡಿ

vadappe hotel inaguration

ಬೆಂಗಳೂರು: ಉದ್ಯಮಿಗಳಾದ ಇನಾ ಕಾಕಲ್‌ ಹಾಗೂ ಛಾಯಾ ಕಾಕಲ್‌ ಅವರು ಇಲ್ಲಿನ ಕೋಣನಕುಂಟೆಯ ಚುಂಚನಕಟ್ಟೆಯಲ್ಲಿ ನೂತನವಾಗಿ ಪ್ರಾರಂಭ ಮಾಡಿರುವ “ವಡಪ್ಪೆ” ಹೋಟೆಲ್‌ ಅನ್ನು ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ಗುರುವಾರ ಉದ್ಘಾಟಿಸಿದರು.

ಪಶ್ಚಿಮಘಟ್ಟಗಳ ಆಸುಪಾಸಿನ ಹಳ್ಳಿಗಳ ಮನೆ ತಿಂಡಿಯ ರುಚಿಯನ್ನು ಈ ಹೋಟೆಲ್‌ ಮೂಲಕ ಕೊಡುವುದಾಗಿ “ವಡಪ್ಪೆ” ರೂವಾರಿಗಳು ತಿಳಿಸಿದ್ದಾರೆ. ಈ ನೂತನ ಹೋಟೆಲ್‌ ಅನ್ನು ಚುಂಚನಕಟ್ಟೆಯ ಕನಕಪುರ ರಸ್ತೆಯ ಪಕ್ಕದಲ್ಲಿರುವ ನ್ಯೂ ಬ್ಯಾಂಕ್‌ ಕಾಲೋನಿಯಲ್ಲಿ ಪ್ರಾರಂಭಿಸಲಾಗಿದೆ. ಇದೊಂದು ಶುದ್ಧ ಸಸ್ಯಾಹಾರಿ ಹೋಟೆಲ್‌ ಆಗಿದೆ.

ಇದನ್ನೂ ಓದಿ: Healthy Drink: ಹೋಳಿಯ ನಂತರ ಚರ್ಮ ಸರಿಯಾಗಬೇಕಾದರೆ ಕುಡಿಯಲೇ ಬೇಕಾದ ಪೇಯಗಳಿವು!

ಕಾರ್ಯಕ್ರಮದಲ್ಲಿ ಸಿಲಿಕಾನ್‌ ಸಿಟಿ ಅಕಾಡೆಮಿಯ ಕಾರ್ಯದರ್ಶಿ ಎಲ್.‌ ರವಿ, ಸಿಲಿಕಾನ್‌ ಸಿಟಿ ಅಕಾಡೆಮಿ ಆಫ್‌ ಸೆಕೆಂಡರಿ ಎಜುಕೇಶನ್‌ನ ಪ್ರಾಂಶುಪಾಲರು, ಜಂಟಿ ಕಾರ್ಯದರ್ಶಿ ಸುಮಾಲಿನಿ, ವಡಪ್ಪೆ ಸಿಇಒ ಇನಾ ಕಾಕಲ್‌ ಹಾಗೂ ಚಾಯಾ ಕಾಕಲ್‌ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Exit mobile version