Site icon Vistara News

9 Years of PM Modi : ಮೋದಿ ಸರ್ಕಾರದ ಸಾಧನೆ ಬಗ್ಗೆ ವಿತ್ತ ಸಚಿವೆ ನಿರ್ಮಲಾ ರಿಪೋರ್ಟ್‌ ಕಾರ್ಡ್‌ನಲ್ಲಿ ಏನಿದೆ?

Nirmala Sitharaman speaks at Thinkers Forum event.

#image_title

ಮುಂಬಯಿ: ಕೇಂದ್ರ ಸರ್ಕಾರ ಹಣದುಬ್ಬರ ಹೆಚ್ಚಳವಾಗಲು ಬಿಡುವುದಿದಲ್ಲ. ಈಗಾಗಲೇ ಬೆಲೆ ಏರಿಕೆ ಪರಿಸ್ಥಿತಿ ಬಗ್ಗೆ ನಿಗಾ ವಹಿಸಲಾಗಿದೆ ಎಂದು ( 9 Years of PM Modi ) ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮುಂಬಯಿನಲ್ಲಿ ಹೇಳಿದ್ದಾರೆ. ತಳಮಟ್ಟದಲ್ಲಿ ಎಲ್ಲ ಅಂಕಿ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಈಗಾಗಲೇ ಹಣದುಬ್ಬರ ಇಳಿಮುಖವಾಗುತ್ತಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದರು.

ಭಾರತದ ಗ್ರಾಹಕ ದರ ಆಧರಿತ ಹಣದುಬ್ಬರ (consumer price inflation) ಕಳೆದ ಏಪ್ರಿಲ್‌ನಲ್ಲಿ 4.7%ಕ್ಕೆ ಇಳಿಕೆಯಾಗಿದೆ. ಮಾರ್ಚ್‌ನಲ್ಲಿ ಇದು 5.66% ಇತ್ತು. ಆಹಾರ ವಸ್ತುಗಳ ಬೆಲೆ ಇಳಿಕೆಯ ಪರಿಣಾಮ ಒಟ್ಟಾರೆ ರಿಟೇಲ್‌ ಹಣದುಬ್ಬರ ಇಳಿಕೆಗೆ ಸಹಕಾರಿಯಾಗಿದೆ.

9 ವರ್ಷಗಳಲ್ಲಿ ಮೋದಿ ಸರ್ಕಾರದ ಸಾಧನೆ ವಿವರಿಸಿದ ವಿತ್ತ ಸಚಿವೆ:

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಳೆದ 9 ವರ್ಷದ ಸಾಧನೆಯನ್ನು ಮುಂಬಯಿನಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಅವರು ಹೇಳಿದ್ದೇನು? ಇಲ್ಲಿದೆ ಮುಖ್ಯಾಂಶಗಳು

  1. ಕೇಂದ್ರ ಸರ್ಕಾರ ಕೋವಿಡ್-‌19 ಬಿಕ್ಕಟ್ಟಿನ ಸಂದರ್ಭ 80 ಕೋಟಿ ಜನರಿಗೆ ಉಚಿತವಾಗಿ ಆಹಾರ ಧಾನ್ಯಗಳನ್ನು ವಿತರಿಸಿದೆ. ದೇಶಾದ್ಯಂತ 220 ಕೋಟಿ ಕೋವಿಡ್-‌19 ಲಸಿಕೆಯನ್ನು ವಿತರಿಸಲಾಗಿದೆ.
  2. ಜಾಗತಿಕ ಮಟ್ಟದಲ್ಲಿ ಭಾರತ ಪ್ರಭಾವಶಾಲಿಯಾಗಿ ಹೊರಹೊಮ್ಮಿದೆ. ಬಡವರಿಗೆ ಆಹಾರ ಭದ್ರತೆ ನೀಡಲಾಗಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಬೇರೆ ಯಾವುದೇ ದೇಶ ಈ ಅವಧಿಯಲ್ಲಿ ಸಾಧಿಸದಷ್ಟು ಮುನ್ನಡೆ ಸಾಧಿಸಿದ್ದೇವೆ.
  3. 12 ಕೋಟಿ ಮನೆಗಳಿಗೆ ಕುಡಿಯು ನೀರು ಕಲ್ಪಿಸಲಾಗಿದೆ. 9.60 ಕೋಟಿ ಉಚಿತ ಎಲ್ಪಿಜಿ ಅನಿಲ ಸಂಪರ್ಕ ವಿತರಿಸಲಾಗಿದೆ. ಬಡವರಿಗೆ ಪ್ರತಿ ಸಿಲಿಂಡರ್‌ ಗ್ಯಾಸ್‌ಗೆ 200 ರೂ. ಸಬ್ಸಿಡಿ ನೀಡಲಾಗಿದೆ.
  4. ಬ್ರಿಟನ್‌ ಅನ್ನು ಹಿಂದಿಕ್ಕೆ 5ನೇ ಅತಿ ದೊಡ್ಡ ಆರ್ಥಿಕತೆಯಾಗಿ ಭಾರತ ಹೊರಹೊಮ್ಮಿದೆ.
  5. ಬಡವರಿಗೆ 3.50 ಕೋಟಿ ರೂ. ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ. 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ.
  6. ತೆರಿಗೆ ಮೌಲ್ಯ ಮಾಪನವನ್ನು ಫೇಸ್‌ಲೆಸ್‌ ಆಗಿಸಲಾಗಿದೆ.
  7. ಬಡವರಿಗೆ 5 ಲಕ್ಷ ಕೋಟಿ ರೂ. ಮೌಲ್ಯದ ವೈದ್ಯಕೀಯ ಸೌಲಭ್ಯವನ್ನು ವಿತರಿಸಲಾಗಿದೆ. ಜನ್‌ ಔಷಧ ಕೇಂದ್ರಗಳಲ್ಲಿ 1 ರೂ.ಗೆ ಸ್ಯಾನಿಟರಿ ಪ್ಯಾಡ್‌ ಗಳನ್ನು ವಿತರಿಸಲಾಗುತ್ತಿದೆ.
  8. ಅಂತಾರಾಷ್ಟ್ರೀಯ ರಸಗೊಬ್ಬರ ದರ ಏರಿಕೆಯಾಗಿದ್ದಲೂ, ಏರಿಕೆಯ ಇಡೀ ಮೊತ್ತವನ್ನು ಕೋವಿಡ್‌ ಸಂದರ್ಭ ಮತ್ತು ನಂತರ ಸರ್ಕಾರವೇ ಭರಿಸಿದೆ.
  9. ವಂದೇ ಭಾರತ್‌ ಎಕ್ಸ್‌ಪ್ರೆಸ್‌, ಮೆಟ್ರೊ ಸೇವೆ ವಿಸ್ತರಣೆಯಿಂದ ಸಾರ್ವಜನಿಕ ಸಾರಿಗೆ ವೆಚ್ಚ ಇಳಿಕೆಯಾಗುತ್ತಿದೆ. ಭಾರತದ 15 ನಗರಗಳಲ್ಲಿ ಈಗ ಮೆಟ್ರೊ ರೈಲು ವ್ಯವಸ್ಥೆ ಇದೆ.
  10. ದೇಶದಲ್ಲಿ 700 ಹೊಸ ವೈದ್ಯಕೀಯ ಕಾಲೇಜುಗಳು ನಿರ್ಮಾಣವಾಗಿದೆ.
  11. ಪಿಎಂ ಗತಿ ಶಕ್ತಿ ಯೋಜನೆಯಿಂದ ಮೂಲಸೌಕರ್ಯ ಯೋಜನೆಗಳು ತ್ವರಿತವಾಗಿ ಅನುಷ್ಠಾನವಾಗುತ್ತಿದೆ.
  12. ಡಿಬಿಟಿ ಮೂಲಕ ಸರ್ಕಾರಕ್ಕೆ ಯೋಜನೆಗಳ ದಕ್ಷತೆ ವೃದ್ಧಿಗೆ ಸಹಕಾರಿಯಾಗಿದೆ.
  13. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಭರದಿಂದ ಸಾಗುತ್ತಿದ್ದು, 2024ರ ಆದಿಯಲ್ಲಿ ಉದ್ಘಾಟನೆಯಾಗುವ ನಿರೀಕ್ಷೆ ಇದೆ.
  14. ಕೋವಿಡ್‌ ಬಿಕ್ಕಟ್ಟಿನ ಸಂದರ್ಭ 2.97 ಕೋಟಿ ಭಾರತೀಯರನ್ನು ನಾನಾ ದೇಶಗಳಿಂದ ತವರಿಗೆ ಸುರಕ್ಷಿತವಾಗಿ ಕರೆ ತರಲಾಯಿತು.
  15. ದೇಶದ ಗಡಿ ಭಾಗದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ : 9 Years of PM Modi: ಮೋದಿ ಸರ್ಕಾರದಿಂದ ಅಭಿವೃದ್ಧಿಯ ಸಾಕಾರ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

Exit mobile version