Site icon Vistara News

Boat Tragedy: ಬಾಗಮತಿ ನದಿಯಲ್ಲಿ ದೋಣಿ ದುರಂತ; ಶಾಲೆಗೆ ಹೋಗುತ್ತಿದ್ದ 18 ಮಕ್ಕಳು ನೀರುಪಾಲು?

boat tragedy

ಮುಜಾಫರ್‌ಪುರ: ಬಿಹಾರದ ಮುಜಾಫರ್‌ಪುರದಲ್ಲಿ ಗುರುವಾರ (ಸೆಪ್ಟೆಂಬರ್ 14) ಬೆಳಗ್ಗೆ ಭಾರಿ ದೋಣಿ ಅಪಘಾತ (Boat Mishap) ಸಂಭವಿಸಿದೆ. ಶಾಲಾ ಮಕ್ಕಳಿದ್ದ ದೋಣಿಯೊಂದು ಬಾಗಮತಿ ನದಿಯಲ್ಲಿ (river bagmati) ಮುಳುಗಿದೆ. 18 ಮಕ್ಕಳು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ.

ದೋಣಿಯಲ್ಲಿ ಸುಮಾರು 34 ಮಕ್ಕಳು ಇದ್ದರು ಎನ್ನಲಾಗಿದೆ. ಸ್ಥಳೀಯರ ನೆರವಿನಿಂದ ಸುಮಾರು 20 ಮಕ್ಕಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ನಿಖರ ಅಂಕಿಅಂಶಗಳು ದೊರೆತಿಲ್ಲ. ಹೀಗಾಗಿ ಸುಮಾರು 18 ಮಂದಿ ಮಕ್ಕಳು ನೀರುಪಾಲಾಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಮಕ್ಕಳು ಸ್ಥಳೀಯ ಗ್ರಾಮದಿಂದ ನದಿಯಾಚೆಗಿನ ಶಾಲೆಗೆ ತೆರಳುತ್ತಿದ್ದರು.

ಬೆನಿಯಾಬಾದ್ ಒಪಿ ಪ್ರದೇಶದ ಭಟ್ಗಾಮಾ ಗ್ರಾಮದ ಮಧುರಪಟ್ಟಿ ಘಾಟ್ ಬಳಿ ಈ ಘಟನೆ ನಡೆದಿದೆ. ನಾಪತ್ತೆಯಾಗಿರುವ ಮಕ್ಕಳಿಗಾಗಿ ಶೋಧ ನಡೆಸಲಾಗುತ್ತಿದೆ. SDRF ತಂಡ ಸ್ಥಳಕ್ಕೆ ತಲುಪಿದೆ. ಸ್ಥಳೀಯ ಮುಳುಗುಗಾರರು ಕೂಡ ಮಕ್ಕಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇನ್ನಷ್ಟು ವಿವರಗಳು ದೊರೆಯಬೇಕಿದೆ.

Exit mobile version