Site icon Vistara News

LPG Price Cut: 200 ರೂ. ಇಳಿಕೆ ಬಳಿಕ ಯಾವ ನಗರದಲ್ಲಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಎಷ್ಟು? ಬೆಂಗಳೂರಲ್ಲಿ ಇಷ್ಟಾಗುತ್ತೆ ನೋಡಿ!

LPG

ನವದೆಹಲಿ: ರಕ್ಷಾ ಬಂಧನದ (Raksha Bandhan Festival) ಕೊಡುಗೆಯಾಗಿ ಕೇಂದ್ರ ಸರ್ಕಾರವು (Central Government) ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ 200 ರೂ. ಕಡಿತ ಮಾಡಿದೆ(LPG Price Cut). ಆದರೆ, ಈ ಕಡಿತದ ಹೊರತಾಗಿಯೂ ದೇಶದ ವಿವಿಧ ಭಾಗಗಳಲ್ಲಿ, ವಿವಿಧ ನಗರಗಳಲ್ಲಿ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸ ಇರಲಿದೆ. ಬೆಂಗಳೂರಲ್ಲಿ (Bengaluru) ಸಿಲಿಂಡರ್‌ಗೆ 1105 ರೂ. ಇದ್ದರೆ, ದಿಲ್ಲಿಯಲ್ಲಿ (New Delhi) 1103 ರೂ. ಇದೆ. 2020 ಮೇ ತಿಂಗಳಿಗೆ ಹೋಲಿಸಿದರೆ, ಸಿಲಿಂಡರ್ ಬೆಲೆಯಲ್ಲಿ ದುಪ್ಪಟ್ಟು ಎಂದು ಹೇಳಬಹುದು. ಈಗ ಬೆಲೆ ಇಳಿಕೆ ಮಾಡಿರುವುದರಿಂದ ತುಸು ಹೊರೆ ತಪ್ಪಲಿದೆ. 200 ರೂ. ಇಳಿಕೆ ಮಾಡಿದ್ದರಿಂದ ಬೆಂಗಳೂರು ಮತ್ತು ದಿಲ್ಲಿಯಲ್ಲಿ ಆಲೋಸ್ಟ್ ಸಿಲಿಂಡರ್ ಬೆಲೆ 903 ರೂ. ಆಗಲಿದೆ. ಇದೇ ವೇಳೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಫಲಾನುಭವಿಗಳಿಗೆ, ಪ್ರತಿ ಸಿಲಿಂಡರ್ ಸಬ್ಸಿಡಿಯ ಜತೆಗೆ ಈಗಿನ ಬೆಲೆ ಇಳಿಕೆಯನ್ನು ಪರಿಗಣಿಸಿದರೆ 703 ರೂ. ಬೆಲೆ ಇರಲಿದೆ.

ಇದಲ್ಲದೆ, ಸರ್ಕಾರವು ಹೆಚ್ಚುವರಿ 75 ಲಕ್ಷ ಉಜ್ವಲ ಸಂಪರ್ಕಗಳನ್ನು ಘೋಷಿಸಿದ್ದು, ಒಟ್ಟು ಉಜ್ವಲ ಯೋಜನೆಯ ಫಲಾನುಭವಿಗಳನ್ನು 10.35 ಕೋಟಿಗೆ ಏರಿಕೆಯಾಗಲಿದೆ. ಸದ್ಯ ಉಜ್ವಲ ಫಲಾನುಭವಿಗಳ ಸಂಖ್ಯೆ 9.6 ಕೋಟಿ ಇದ್ದರೆ, ಸಾಮಾನ್ಯ 31 ಕೋಟಿ ಗೃಹಬಳಕೆಯ ಅಡುಗೆ ಅನಿಲ ಬಳಕೆದಾರರಿದ್ದಾರೆ.

14.2 ಕೆಜಿ ಸಿಲಿಂಡರ್‌ಗೆ ಯಾವ ನಗರದಲ್ಲಿ ಎಷ್ಟು ಬೆಲೆ?

ದಿಲ್ಲಿ 903 ರೂ., ಮುಂಬೈ 902.5 ರೂ., ಕೋಲ್ಕೊತಾ 929 ರೂ., ಚೆನ್ನೈ 908.5 ರೂ., ಬೆಂಗಳೂರು 905.5 ರೂ., ಅಹ್ಮದಾಬಾದ್ 910 ರೂ., ಪಟನಾ 1001 ರೂ., ಭೋಪಾಲ್ 908.5 ರೂ., ಜೈಪುರ 906.5 ರೂ. ಮತ್ತು ಲಕ್ನೋದಲ್ಲಿ 940.5 ರೂ. ಇರಲಿದೆ.

ರಕ್ಷಾ ಬಂಧನ, ಓಣಂ ಕೊಡುಗೆ

ದೇಶಾದ್ಯಂತ ಈಗ 14 ಕೆ.ಜಿಯ ಒಂದು ಸಿಲಿಂಡರ್‌ ಬೆಲೆ 1,100 ರೂಪಾಯಿ ಇದೆ. ಇದು ಬಡವರು ಹಾಗೂ ಮಧ್ಯಮ ವರ್ಗದವರಿಗೆ ತುಂಬ ಹೊರೆಯಾಗಿದೆ. ಹಾಗಾಗಿ, ಕೇಂದ್ರ ಸರ್ಕಾರವು 200 ರೂ. ಇಳಿಕೆ ಮಾಡಿರುವುದು ಕೋಟ್ಯಂತರ ಬಡ-ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ. ರಕ್ಷಾಬಂಧನ ಹಾಗೂ ಓಣಂ ಹಬ್ಬದ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ಇಳಿಕೆ ಮಾಡಲು ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆ ತೀರ್ಮಾನಿಸಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: LPG Price Cut: ದೇಶದ ಹೆಣ್ಣುಮಕ್ಕಳಿಗೆ ಮೋದಿ ಭರ್ಜರಿ ಗಿಫ್ಟ್;‌ ಎಲ್‌ಪಿಜಿ ಸಿಲಿಂಡರ್ ದರ 200 ರೂ. ಇಳಿಕೆ

ಲೋಕಸಭೆ ಚುನಾವಣೆಗೆ ರಣತಂತ್ರ?

ಮುಂದಿನ ವರ್ಷ ನಡೆಯುವ ಲೋಕಸಭೆ ಹಾಗೂ ವರ್ಷಾಂತ್ಯದಲ್ಲಿ ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಬೆಲೆ ಇಳಿಕೆಯ ತಂತ್ರ ರೂಪಿಸಿದೆ ಎಂದು ತಿಳಿದುಬಂದಿದೆ. ಇತ್ತೀಚಿನ ಚುನಾವಣೆಗಳಲ್ಲಿ ಬೆಲೆಯೇರಿಕೆಯು ಪ್ರಮುಖ ವಿಷಯವಾಗಿದೆ. ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಅವರು ಸಿಲಿಂಡರ್‌ ಬೆಲೆ ಇಳಿಕೆ ಮಾಡಿದ್ದಾರೆ. ಕಾಂಗ್ರೆಸ್‌ ಉಚಿತ ಕೊಡುಗೆಗಳ ಗ್ಯಾರಂಟಿಗಳನ್ನು ನೀಡುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರವು ಸಿಲಿಂಡರ್‌ ಬೆಲೆ ಇಳಿಕೆ ಮೂಲಕ ಜನರ ಅಸಮಾಧಾನ ತಣಿಸಲು ನಿರ್ಧಾರ ತೆಗೆದುಕೊಂಡಿದೆ.

Exit mobile version