Site icon Vistara News

ಗಂಡ-ಹೆಂಡತಿ ಜಗಳ ನಿಲ್ಲಿಸಲು ಹೋದವ ಆಕೆಯ ಗಂಡನನ್ನೇ ಕೊಂದ! ಕಾರಣ ಏನು?

Couple Fight

Man trying to stop couple's fight in Tamil Nadu ends up killing husband

ಚೆನ್ನೈ: ಗಂಡ-ಹೆಂಡತಿ ಜಗಳ ಉಂಡು ಮಲಗುವತನಕ ಎಂಬ ಮಾತಿದೆ. ಹಾಗೆಯೇ, ಗಂಡ-ಹೆಂಡತಿ ಜಗಳ (Husband-Wife Figtht) ಆಡುವಾಗ ಯಾರಾದರೂ ಮಧ್ಯಪ್ರವೇಶಿಸಿದರೆ ಆ ಜಗಳ ಇನ್ನೂ ಜೋರಾಗುವ ಸಾಧ್ಯತೆ ಇದೆ. ಇದಕ್ಕೆ ನಿದರ್ಶನ ಎಂಬಂತೆ, ತಮಿಳುನಾಡಿನಲ್ಲಿ (Tamil Nadu) ಗಂಡ-ಹೆಂಡತಿ ಜಗಳ ನಿಲ್ಲಿಸಲು ಹೋದ ವ್ಯಕ್ತಿಯೊಬ್ಬ ಆ ಮಹಿಳೆಯ ಗಂಡನನ್ನೇ ಕೊಲೆ ಮಾಡಿದ್ದಾನೆ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕಳೆದ ಮಂಗಳವಾರ (ಜನವರಿ 30) ರಾತ್ರಿ ತಮಿಳುನಾಡಿನ ಪೊಳ್ಳಚಿಯಲ್ಲಿ ರಾಧಾಕೃಷ್ಣನ್‌ (59) ಹಾಗೂ ಅವರ ಪತ್ನಿ ಸರಸ್ವತಿ (48) ಎಂಬುವವರು ಜಗಳ ಆಡುತ್ತಿದ್ದರು. ಇದನ್ನು ಕಂಡ ಪಕ್ಕದ ಮನೆಯ ಶಿವಕುಮಾರ್‌ (36) ಎಂಬುವರು ಇಬ್ಬರ ಜಗಳ ಬಿಡಿಸಲು ಹೋಗಿದ್ದಾರೆ. ಇಷ್ಟು ವಯಸ್ಸಾಗಿದೆ, ಇಬ್ಬರೂ ಜಗಳವಾಡುವುದು ಸರಿಯಲ್ಲ ಎಂದು ಬುದ್ಧಿಮಾತು ಹೇಳಿದ್ದಾರೆ. ಆದರೆ, ರಾಧಾಕೃಷ್ಣನ್‌ ಅವರು ಶಿವಕುಮಾರ್‌ ಮೇಲೆಯೇ ಕೋಪಗೊಂಡಿದ್ದಾರೆ.

Police

“ಗಂಡ-ಹೆಂಡತಿ ಮಧ್ಯೆ ಮೂಗು ತೂರಿಸಲು ನೀನ್ಯಾರು” ಎಂದು ರಾಧಾಕೃಷ್ಣನ್‌ ಅವರು ಶಿವಕುಮಾರ್‌ ಮೇಲೆ ಕುಡಗೋಲಿನಿಂದ ಹಲ್ಲೆ ಮಾಡಿದ್ದಾರೆ. ಆಗ ಶಿವಕುಮಾರ್‌ ಬಲಗೈಗೆ ಗಾಯಗಳಾಗಿವೆ. ಇದರಿಂದ ಕುಪಿತಗೊಂಡ ಶಿವಕುಮಾರ್‌, ರಾಧಾಕೃಷ್ಣನ್‌ ಅವರ ಮೇಲೆ ಕುಡಗೋಲಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ರಾಧಾಕೃಷ್ಣನ್‌ ಮೃತಪಟ್ಟಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Death Note: ಪತಿಯ ಕೊಲೆಗೆ ನ್ಯಾಯ ಕೊಡಿಸಲಾಗದೆ ಆತ್ಮಹತ್ಯೆ; ಡೆತ್‌ನೋಟ್‌ನಲ್ಲಿ ನೋವು ತೋಡಿಕೊಂಡ ಪುಷ್ಪಾ

ಕೆಲ ದಿನಗಳ ಹಿಂದಷ್ಟೇ ಕೌಟುಂಬಿಕ ಕಲಹದಿಂದಾಗಿ ಪತಿಯೊಬ್ಬ ಪತ್ನಿ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದ. ಹಲ್ಲೆಗೊಳಗಾದ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ನೀಲಾವತಿ (42) ಮೃತ ದುರ್ದೈವಿ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕುದರೂರು‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆವಿಗೆ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ನೀಲಾವತಿ ಹಾಗೂ ಪತಿ ಲೋಕೇಶ್‌ ದಾಂಪತ್ಯದಲ್ಲಿ ಬಿರುಕು ಬಿಟ್ಟಿತ್ತು. ನಿತ್ಯವು ಮನೆಯಲ್ಲಿ ಗಲಾಟೆ ಇದ್ದೆ ಇತ್ತು. ಇಂದು ಅದು ವಿಪರೀತಕ್ಕೆ ತಿರುಗಿದ್ದು, ಜಗಳದಲ್ಲಿ ಸಿಟ್ಟಿಗೆದ್ದ ಲೋಕೇಶ್‌ ಪತ್ನಿ ನೀಲಾವತಿಗೆ ಕತ್ತಿಯನ್ನು ಬೀಸಿದ್ದಾನೆ. ಇದಾದ ಬಳಿಕ ನೀಲಾವತಿ ಮೃತಪಟ್ಟಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version