Site icon Vistara News

Siddheshwar Swamiji | ಸಿದ್ದೇಶ್ವರ ಶ್ರೀ ನಿಧನಕ್ಕೆ ರಾಹುಲ್‌ ಗಾಂಧಿ, ಸುರ್ಜೇವಾಲ ಸಂತಾಪ

Siddheshwar Swamiji

ನವ ದೆಹಲಿ: ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ನಿಧನಕ್ಕೆ ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ ಹಾಗೂ ರಣದೀಪ್‌ ಸುರ್ಜೇವಾಲಾ ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

ಜಗತ್ತಿಗೆ ಒಳ್ಳೆಯತನದ ಮಾರ್ಗವನ್ನು ತೋರಿದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಜ್ಞಾನೋದಯ ಹೊಂದಿದ ಸಂತರಾಗಿದ್ದರು. ತಮ್ಮ ಸರಳತೆ, ಜ್ಞಾನ, ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಾಗಿ ಅವರ ಸದಾ ಸ್ಮರಿಸಲ್ಪಡುತ್ತಾರೆ. ಈ ಶೋಕದ ಕ್ಷಣಗಳಲ್ಲಿ ಅವರ ಅಸಂಖ್ಯ ಭಕ್ತಾದಿಗಳು, ಅವರ ಉಪದೇಶಗಳನ್ನು ಬದುಕಿನಲ್ಲಿ ಸದಾ ಅನುಸರಿಸುತ್ತಿರುವವರ ದುಃಖದಲ್ಲಿ ನಾನು ಭಾಗಿಯಾಗುತ್ತೇನೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ.

ಅಧ್ಯಾತ್ಮಿಕ ಸಾಧನೆ ಹಾಗೂ ಜೀವನ ಜ್ಞಾನದ ಉತ್ತುಂಗ ಸಾಧಕ, ಸರಳತೆಗೆ ಇನ್ನೊಂದು ಹೆಸರು, ಲಕ್ಷಾಂತರ ಜನತೆಗೆ ಹೊಸ ಬದುಕಿನ ದಾರಿಯನ್ನು ತೋರಿಕೊಟ್ಟ ನೈಜ ಮಾನವತಾವಾದಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ಕೊನೆಯ ಪ್ರಯಾಣವನ್ನು ಶಾಂತಿಯುತವಾಗಿ ಕೈಗೊಂಡಿದ್ದಾರೆ. ಅವರ ದೇಹ ಮರೆಯಾದರೂ ಅವರ ಆಶೀರ್ವಾದ, ಹಾಗೂ ತೋರಿದ ದಾರಿ ನಮ್ಮನ್ನು ಸದಾ ಬೆಳಗುತ್ತಿರುತ್ತದೆ ಎಂದು ರಾಜ್ಯಸಭಾ ಸದಸ್ಯ ರಣದೀಪ್‌ ಸುರ್ಜೇವಾಲಾ ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | Siddheshwar Swamiji | ಸೈನಿಕ ಶಾಲೆಯಲ್ಲಿ ಶ್ರೀಗಳ ಅಂತಿಮ ದರ್ಶನ ಆರಂಭ

Exit mobile version