Site icon Vistara News

‘ಕರಿಮಣಿ ಮಾಲೀಕ ನೀನಲ್ಲ’ ಎಂದ ಪ್ರಿಯತಮೆಯನ್ನೇ ಕೊಚ್ಚಿ ಕೊಂದ ಬಾಯ್‌ಫ್ರೆಂಡ್

Love Break Up

Telangana man kills girlfriend with axe after she opts for arranged marriage

ಹೈದರಾಬಾದ್:‌ ಪ್ರೀತಿ ಭಗ್ನವಾದಾಗ, ಬ್ರೇಕಪ್‌ ಮಾಡಿಕೊಂಡಾಗ (Love Breakup), ಆಕೆಗೆ ಆತನ ಮೇಲೋ, ಆತನಿಗೆ ಆಕೆಯ ಮೇಲೋ ಸಿಟ್ಟು ಬರುವುದು, ಆಕ್ರೋಶ ಉಮ್ಮಳಿಸಿ ಬರುವುದು ಸಹಜ. ಆದರೆ, ಪ್ರೀತಿಗೆ ವಿದಾಯ ಹೇಳಿದ ಬಳಿಕ ಪ್ರೀತಿಸಿದವರ ಮೇಲೆಯೇ ಸೇಡು ತೀರಿಸಿಕೊಳ್ಳುವುದು, ಅವರ ಮೇಲೆ ಆಸಿಡ್‌ ಎರಚುವುದು, ಹಿಂಸೆ ಕೊಡುವುದು ಮಾತ್ರ ವಿಕೃತ ಮನಸ್ಸಿಗೆ ಸಾಕ್ಷಿಯಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಬೇರೆ ಮದುವೆಯಾಗಲು (Arranged Marriage) ಒಪ್ಪಿದಳು ಎಂದು ಬಾಯ್‌ಫ್ರೆಂಡ್ ಆಕೆಯನ್ನೇ ಕೊಲೆ ಮಾಡಿರುವ ಭೀಕರ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

ತೆಲಂಗಾಣದ ನಿರ್ಮಲ್‌ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಜುಕಾಂಟಿ ಶ್ರೀಕಾಂತ್‌ ಎಂಬ ಯುವಕನು ಅಲೇಖ್ಯಾ ಎಂಬ ಯುವತಿಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ಅಲೇಖ್ಯಾ ಹಾಗೂ ಆಕೆಯ ಸಹೋದರಿಯು ಟೇಲರಿಂಗ್‌ ಇನ್‌ಸ್ಟಿಟ್ಯೂಟ್‌ನಿಂದ ಮನೆಗೆ ತೆರಳುವಾಗ ಅಡ್ಡಗಟ್ಟಿದ ಶ್ರೀಕಾಂತ್‌, ಇಬ್ಬರ ಮೇಲೂ ಕೊಡಲಿಯಿಂದ ಹಲ್ಲೆ ನಡೆಸಿದ್ದಾನೆ. ಕೊಡಲಿಯಿಂದ ಕೊಚ್ಚಿದ ಕಾರಣ ಅಲೇಖ್ಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲೇಖ್ಯಾ ಸಹೋದರಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜುಕಾಂಟಿ ಶ್ರೀಕಾಂತ್‌ ಹಾಗೂ ಅಲೇಖ್ಯಾ ತುಂಬ ದಿನಗಳಿಂದ ಪ್ರೀತಿಸುತ್ತಿದ್ದರು. ಸ್ವಲ್ಪ ದಿನ ಹೋಗಲಿ, ನಿಮ್ಮ ಮನೆಯಲ್ಲಿ ಬಂದು ಮದುವೆ ಕುರಿತು ಮಾತನಾಡುತ್ತೇನೆ ಎಂದು ಶ್ರೀಕಾಂತ್‌ ಹೇಳಿದ್ದ. ಆದರೆ, ಅಲೇಖ್ಯಾ ಮನೆಯಲ್ಲಿ ಇವರ ಪ್ರೀತಿ ಒಪ್ಪದೆ, ಮನೆಯಲ್ಲಿ ನೋಡಿದ ಹುಡುಗನನ್ನೇ ಮದುವೆಯಾಗಬೇಕು ಎಂದು ಆಕೆಯ ತಂದೆ-ತಾಯಿ ಆಗ್ರಹಿಸಿದ್ದರು. ತಂದೆ-ತಾಯಿ ಒತ್ತಡಕ್ಕೆ ಮಣಿದ ಅಲೇಖ್ಯಾ, “ನಾನು ಮನೆಯಲ್ಲಿ ನೋಡಿದ ಹುಡುಗನನ್ನೇ ಮದುವೆಯಾಗುವೆ” ಎಂದು ಶ್ರೀಕಾಂತ್‌ ಬಳಿ ಹೇಳಿದ್ದಳು.

ಇದನ್ನೂ ಓದಿ: Murder Case : ತಾಯಿಗಿತ್ತು ಅನೈತಿಕ ಸಂಬಂಧ; ಅಪ್ಪನಿಗಾಗಿ ಕೊಲೆಗಾರನಾದ ಮಗ!

ಅಲೇಖ್ಯಾ ಮಾತಿನಿಂದ ಕಂಗಾಲಾದ ಶ್ರೀಕಾಂತ್‌, ನನ್ನನ್ನು ಬಿಟ್ಟು ಹೋಗಬೇಡ ಎಂದು ಗೋಗರೆದಿದ್ದ. ಆದರೂ ಕೇಳದೆ, ಅರೇಂಜ್‌ ಮ್ಯಾರೇಜ್‌ ಆಗುತ್ತೇನೆ ಎಂದ ಅಲೇಖ್ಯಾ ಅವರನ್ನು ಶ್ರೀಕಾಂತ್‌ ಕೋಪದಲ್ಲಿ ಕೊಲೆ ಮಾಡಿದ್ದಾನೆ. ಹತ್ಯೆಗೈದ ಆರೋಪ ಶ್ರೀಕಾಂತ್‌ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೆಲ ತಿಂಗಳ ಹಿಂದೆ ದಕ್ಷಿಣ ಕ‌ನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಬಳಿ ಪದ್ಮರಾಜ್‌ ಎಂಬಾತ ಗೌರಿ ಎಂಬ ಪ್ರಿಯತಮೆಯನ್ನೇ ಕತ್ತು ಸೀಳಿ ಕೊಂದಿದ್ದ ಪ್ರಕರಣ ಭಾರಿ ಸುದ್ದಿಯಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version