ಬೆಂಗಳೂರು: ಲೋಕಸಭಾ ಚುನಾವಣೆಗಾಗಿ (Lok Sabha Election 2024) ಬಿಜೆಪಿ ರಾಜ್ಯದ 20 ಸ್ಥಾನಗಳಿಗಾಗಿ (20 Candidates list) ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇದರಲ್ಲಿ ಒಟ್ಟು ಎಂಟು ಮಂದಿ ಹಾಲಿ ಸಂಸದರಿಗೆ ಟಿಕೆಟ್ ಮಿಸ್ ಆಗಿದೆ. ಟಿಕೆಟ್ ಮಿಸ್ ಆಗಿರುವ ಪ್ರಮುಖರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ (Nalin kumar Kateel), ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದ ಗೌಡ (DV Sadananda Gowda) ಸೇರಿದ್ದಾರೆ.
ಟಿಕೆಟ್ ಮಿಸ್ ಆಗಿರುವ ಆ ಎಂಟು ಮಂದಿ ಯಾರು?
- ಡಿ.ವಿ. ಸದಾನಂದಗೌಡ: ಬೆಂಗಳೂರು ಉತ್ತರ
- ನಳಿನ್ ಕುಮಾರ್ ಕಟೀಲ್: ದಕ್ಷಿಣ ಕನ್ನಡ
- ಪ್ರತಾಪ್ ಸಿಂಹ: ಮೈಸೂರು-ಕೊಡಗು
- ಶಿವಕುಮಾರ್ ಉದಾಸಿ: ಹಾವೇರಿ
- ದೇವೇಂದ್ರಪ್ಪ: ಬಳ್ಳಾರಿ
- ಜಿ.ಎಸ್. ಬಸವರಾಜು: ತುಮಕೂರು
- ಜಿ.ಎಂ. ಸಿದ್ದೇಶ್ವರ್: ದಾವಣಗೆರೆ
- ಶ್ರೀನಿವಾಸ್ ಪ್ರಸಾದ್: ಚಾಮರಾಜನಗರ
ಇವರಲ್ಲಿ ಚಾಮರಾಜನಗರದ ಸಂಸದ ಶ್ರೀನಿವಾಸ್ ಪ್ರಸಾದ್, ತುಮಕೂರಿನ ಜಿ.ಎಸ್. ಬಸವರಾಜು, ಹಾವೇರಿಯ ಶಿವಕುಮಾರ್ ಉದಾಸಿ ಮೊದಲೇ ಚುನಾವಣಾ ನಿವೃತ್ತಿಯನ್ನು ಘೋಷಣೆ ಮಾಡಿದ್ದರು.
ಬೆಂಗಳೂರು ಉತ್ತರದಲ್ಲಿ ಡಿ.ವಿ. ಸದಾನಂದ ಅವರ ಬದಲಿಗೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲಾಗಿದೆ.
ದಕ್ಷಿಣ ಕನ್ನಡದಲ್ಲಿ ನಳಿನ್ ಕುಮಾರ್ ಕಟೀಲ್ ಅವರ ಬದಲು ಬ್ರಿಗೇಡಿಯರ್ ಬ್ರಿಜೇಶ್ ಚೌಟ ಆಯ್ಕೆಯಾಗಿದ್ದಾರೆ.
ಮೈಸೂರು-ಕೊಡಗಿನಲ್ಲಿ ಪ್ರತಾಪ್ಸಿಂಹ ಅವರ ಬದಲು ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಲಾಗಿದೆ.
ಹಾವೇರಿಯಲ್ಲಿ ಶಿವಕುಮಾರ್ ಉದಾಸಿ ಅವರ ಬದಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಿಕೆಟ್ ಪಡೆದಿದ್ದಾರೆ.
ಬಳ್ಳಾರಿ ಕ್ಷೇತ್ರದಲ್ಲಿ ಹಾಲಿ ಸಂಸದ ದೇವೇಂದ್ರಪ್ಪ ಅವರ ಬದಲು ಶ್ರೀರಾಮುಲು ಟಿಕೆಟ್ ಪಡೆದಿದ್ದಾರೆ.
ತುಮಕೂರಿನಲ್ಲಿ ಹಾಲಿ ಸಂಸದರಾದ ಜಿ.ಎಸ್. ಬಸವರಾಜ ಅವರ ಬದಲಿಗೆ ವಿ ಸೋಮಣ್ಣ ಅವರಿಗೆ ಟಿಕೆಟ್ ಸಿಕ್ಕಿದೆ.
ದಾವಣಗೆರೆ ಕ್ಷೇತ್ರದಲ್ಲಿ ಜಿ.ಎಂ. ಸಿದ್ದೇಶ್ವರ್ ಅವರಿಗೆ ಟಿಕೆಟ್ ಮಿಸ್ ಆಗಿದ್ದರೂ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್ ಅವರಿಗೆ ಟಿಕೆಟ್ ಸಿಕ್ಕಿದೆ.
ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್ ಅವರ ಬದಲಿಗೆ ಮಾಜಿ ಶಾಸಕ ಬಾಲರಾಜು ಟಿಕೆಟ್ ಪಡೆದಿದ್ದಾರೆ.
ಇವರೇ ಬಿಜೆಪಿ ಘೋಷಣೆ ಮಾಡಿದ 20 ಅಭ್ಯರ್ಥಿಗಳು
- ಚಿಕ್ಕೋಡಿ: ಅಣ್ಣಾ ಸಾಹೇಬ್ ಜೊಲ್ಲೆ
- ಬಾಗಲಕೋಟೆ: ಪಿ.ಸಿ. ಗದ್ದಿಗೌಡರ್
- ವಿಜಯಪುರ: ರಮೇಶ್ ಜಿಗಜಿಣಗಿ
- ಕಲಬುರಗಿ: ಡಾ. ಉಮೇಶ್ ಜಾಧವ್
- ಬೀದರ್: ಭಗವಂತ್ ಖೂಬಾ
- ಕೊಪ್ಪಳ: ಡಾ. ಬಸವರಾಜ ಕ್ಯಾವತೂರು
- ಬಳ್ಳಾರಿ: ಬಿ. ಶ್ರೀರಾಮುಲು
- ಹಾವೇರಿ: ಬಸವರಾಜ ಬೊಮ್ಮಾಯಿ
- ಧಾರವಾಡ: ಪ್ರಹ್ಲಾದ್ ಜೋಶಿ
- ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್
- ಶಿವಮೊಗ್ಗ: ಬಿವೈ ರಾಘವೇಂದ್ರ
- ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ
- ದಕ್ಷಿಣ ಕನ್ನಡ: ಕ್ಯಾಪ್ಟನ್ ಬ್ರಿಜೇಶ್ ಚೌಟ
- ತುಮಕೂರು: ವಿ ಸೋಮಣ್ಣ
- ಮೈಸೂರು: ಯದುವೀರ್ ಕೃಷ್ಣ ದತ್ತ ಒಡೆಯರ್
- ಚಾಮರಾಜನಗರ: ಎಸ್. ಬಾಲರಾಜ್
- ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್. ಮಂಜುನಾಥ್
- ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ
- ಬೆಂಗಳೂರು ಸೆಂಟ್ರಲ್: ಪಿ.ಸಿ. ಮೋಹನ್
- ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ
ಅಭ್ಯರ್ಥಿ ಘೋಷಣೆಯಾಗದ ಕ್ಷೇತ್ರಗಳು:
- ಉತ್ತರ ಕನ್ನಡ
- ಬೆಳಗಾವಿ
- ಚಿಕ್ಕಬಳ್ಳಾಪುರ
- ಚಿತ್ರದುರ್ಗ
- ರಾಯಚೂರು
ಇದುವರೆಗೂ ಚುನಾವಣೆಯಲ್ಲಿ ಸ್ಪರ್ಧಿಸದ ಅಭ್ಯರ್ಥಿಗಳು
ಕ್ಯಾಪ್ಟನ್ ಬೃಜೇಶ್ ಚೌಟ: ದಕ್ಷಿಣ ಕನ್ನಡ
ಡಾ. ಸಿಎನ್. ಮಂಜುನಾಥ್: ಬೆಂಗಳೂರು ಗ್ರಾಮಾಂತರ
ಬಸವರಾಜ ಕ್ಯಾವಟೂರ್: ಕೊಪ್ಪಳ
ಗಾಯತ್ರಿ ಸಿದ್ದೇಶ್ವರ್: ದಾವಣಗೆರೆ
ಯದುವೀರ್ ಒಡೆಯರ್: ಮೈಸೂರು