Site icon Vistara News

Siddheshwar Swamiji | ಜ್ಞಾನ ಯೋಗಾಶ್ರಮದ ಕಡೆಗೆ ಹರಿದು ಬಂತು ಜನ ಸಾಗರ; ಅಂತಿಮ ದರ್ಶನ ಪಡೆದ ಭಕ್ತರು

siddeshwara

ಬೆಂಗಳೂರು : ಸೋಮವಾರ ಸಂಜೆ ದೇಹಾಂತ್ಯಗೊಳಿದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳ (Siddheshwar Swamiji) ಅಂತಿಮ ದರ್ಶನಕ್ಕೆ ಜ್ಞಾನ ಯೋಗಾಶ್ರಮದತ್ತ ಭಕ್ತರ ದಂಡು ಹರಿದುಬರುತ್ತಿದೆ. ಸ್ವಾಮೀಜಿಗಳು ಸಂಜೆಯ ವೇಳೆಗೆ ದೇಹಾಂತ್ಯಗೊಳಿಸಿದ್ದರೂ, ಬರುವ ಭಕ್ತರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರಾತ್ರಿ ವೇಳೆ ಸುದ್ದಿಯನ್ನು ಪ್ರಕಟಿಸಲಾಯಿತು.

ಸ್ವಾಮೀಜಿಗಳ ನಿರ್ಗಮನದ ಸುದ್ದಿ ಬರುತ್ತಿದ್ದಂತೆ ಲಕ್ಷಾಂತರ ಭಕ್ತರು ಜ್ಞಾನ ಯೋಗಾಶ್ರಮದತ್ತ ಬರಲು ಆರಂಭಿಸಿದರು. ಆಶ್ರಮದ ಮುಂಭಾಗದಲ್ಲಿ ನಿರ್ಮಾಣ ಮಾಡಲಾಗಿರುವ ವೇದಿಕೆಯಲ್ಲಿ ಸ್ವಾಮೀಜಿಗಳ ಪಾರ್ಥಿವ ಶರೀರವನ್ನು ಇಡಲಾಗಿತ್ತು. ಅಲ್ಲಿಗೆ ಬಂದ ಭಕ್ತರು ಅಂತಿಮ ದರ್ಶನ ಪಡೆದರು.

ಜಿಲ್ಲಾಡಳಿತ, ಜಿಲ್ಲಾ ಪೊಲೀಸ್​ ಇಲಾಖೆ ಏಕಾಏಕಿ ಹರಿದು ಬಂದ ಭಕ್ತರ ನಿಯಂತ್ರಣಕ್ಕೆ ವ್ಯವಸ್ಥೆ ಕಲ್ಪಿಸಿದ್ದರು. ವಾಹನಗಳಲ್ಲಿ ಬರುವ ಭಕ್ತರಿಗೆ ವಾಹನ ಪಾರ್ಕಿಂಗ್​ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಒಂದು ಗೇಟ್​ನಿಂದ ಪ್ರವೇಶ ಮಾಡಿ ಅಂತಿಮ ದರ್ಶನ ಮುಗಿಸಿ ಇನ್ನೊಂದು ಗೇಟ್​ ಮೂಲಕ ಹೊರಗೆ ಬರುವ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ಇದನ್ನೂ ಓದಿ | Siddheshwar Swamiji | ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ದರ್ಶನಕ್ಕೆ 20 ಲಕ್ಷ ಮಂದಿ ಭಕ್ತರ ಭೇಟಿ ನಿರೀಕ್ಷೆ

Exit mobile version