Site icon Vistara News

IPL 2023 : ಡೆಲ್ಲಿ ವಿರುದ್ಧ ಟಾಸ್​ ಗೆದ್ದ ಆರ್​ಸಿಬಿ ತಂಡದಿಂದ ಬ್ಯಾಟಿಂಗ್ ಆಯ್ಕೆ

Gujrat Titans will now take on Lucknow Super Giants

#image_title

ನವ ದೆಹಲಿ: ಐಪಿಎಲ್​ 16ನೇ ಆವೃತ್ತಿಯ 50ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹಿಂದಿನ ಪಂದ್ಯದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ವಿರುದ್ಧ ಜಯ ಸಾಧಿಸಿದ ಹುಮ್ಮಸ್ಸಿನಲ್ಲಿರುವ ಆರ್​​ಸಿಬಿ ಮತ್ತೊಂದು ಗೆಲುವಿಗಾಗಿ ಹವಣಿಸಲಿದೆ. ಈ ಮೂಲಕ ಪ್ಲೇಆಫ್​ ಹಂತಕ್ಕೇರಲು ಪ್ರಯತ್ನಿಸಲಿದೆ.

ನವ ದೆಹಲಿಯ ಅರುಣ್​ ಜೇಟ್ಲಿ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಈ ಪಂದ್ಯ ನಡೆಯುತ್ತಿದೆ. ಒಣ ಹವೆ ಹಚ್ಚಿರುವ ಕಾರಣ ಪಿಚ್​ ಹೆಚ್ಚು ಶುಷ್ಕಗೊಂಡಿದೆ. ಹೀಗಾಗಿ ಬೌಲರ್​ಗಳಿಗೆ ಹೆಚ್ಚಿನ ಅವಕಾಶವಿದೆ. ದೊಡ್ಡ ಮೊತ್ತವನ್ನು ಪೇರಿಸಲು ಕೂಡ ಇಲ್ಲಿ ಸಾಧ್ಯವಿಲ್ಲ. ಈ ಸ್ಟೇಡಿಯಮ್​ನ ಸರಾಸರಿ ಸ್ಕೋರ್​ 165. ವೇಗಿಗಳು ಹಾಗೂ ಸ್ಪಿನ್ನರ್​​ಗಳಿಗೆ ಸಮಾನ ಅವಕಾಶ ಸೃಷ್ಟಿ ಮಾಡಿಕೊಡುವ ಪಿಚ್ ಇದಾಗಿದೆ. ಹಾಲಿ ಆವೃತ್ತಿಯಲ್ಲಿ ಈ ಪಿಚ್​​ನಲ್ಲಿ ನಡೆದ ಪಂದ್ಯದಲ್ಲಿ 29 ವಿಕೆಟ್​ಗಳು ವೇಗಿಗಳ ಪಾಲಾಗಿದ್ದರೆ 23 ವಿಕೆಟ್​ಗಳು ಸ್ಪಿನ್ನರ್​ಗಳು ಕಬಳಿಸಿದ್ದಾರೆ.

ಟಾಸ್​ ಗೆದ್ದ ಬಳಿಕ ಮಾತನಾಡಿದ ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​​, ಪಿಚ್​ ಒಣಗಿರುವ ಕಾರಣ ಬೌಲರ್​ಗಳಿಗೆ ಹೆಚ್ಚು ಅವಕಾಶವಿದೆ. ಅಂತೆಯೇ ಇಬ್ಬನಿ ಪರಿಣಾಮವೂ ಇರುವುದಿಲ್ಲ. ಹೀಗಾಗಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದೇವೆ. ನಾವು ದೊಡ್ಡ ಮೊತ್ತ ಪೇರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಿದ್ದೇವೆ. ಕೇದಾರ್ ಜಾಧವ್​ ಆಡಲಿದ್ದಾರೆ ಎಂದು ಹೇಳಿದರು.

ಟಾಸ್ ಗೆದ್ದಿದ್ದರೆ ನಾವು ಕೂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆವು, ನಾವು ಕೂಡ ಹೊಸ ನಂಬಿಕೆಯೊಂದಿಗೆ ಆಡಲು ಬಂದಿದ್ದೇವೆ. ಹಗಲಲ್ಲಿ ಮಳೆಯಾಗಿರುವ ಕಾರಣ ಇಬ್ಬನಿ ಪರಿಣಾಮ ಉಂಟಾಗದು. ಮುಕೇಶ್ ಕುಮಾರ್​ ಹಾಗೂ ಮಿಚೆಲ್​ ಮಾರ್ಷ್​ ತಂಡಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ.

ತಂಡಗಳು

ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ರಿಲೀ ರೊಸೌ, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್.

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ (ನಾಯಕ), ಫಾಫ್ ಡು ಪ್ಲೆಸಿಸ್ (ಸಿ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್ವೆಲ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್ (ವಿಕೆ), ಕೇದಾರ್ ಜಾಧವ್, ವನಿಂದು ಹಸರಂಗ, ಕರಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹೇಜಲ್​ವುಡ್​.

Exit mobile version