Site icon Vistara News

Rishabh Pant : ಆಟಕ್ಕೆ ಮರಳಿದ ತಕ್ಷಣ ಪಂತ್​ ಮಿಂಚಲಿದ್ದಾರೆ ಎಂದು ಭವಿಷ್ಯ ನುಡಿದ ಮಾಜಿ ಆಟಗಾರ

Rishabh Pant

ನವದೆಹಲಿ: ಭಾರತದ ವಿಕೆಟ್ ಕೀಪರ್-ಬ್ಯಾಟರ್​ ರಿಷಭ್ ಪಂತ್ (Rishabh Pant) ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳುವ ಬಗ್ಗೆ ಇಂಗ್ಲೆಂಡ್​ ಮಾಜಿ ನಾಯಕ ನಾಸಿರ್ ಹುಸೇನ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಅವರಿಲ್ಲದೆ ಟೀಮ್ ಇಂಡಿಯಾ ಉತ್ತಮವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಪಂತ್ ಬಾಕ್ಸ್ ಆಫೀಸ್ ಕ್ರಿಕೆಟಿಗ ಮತ್ತು ಭಾರತವು ಅವರನ್ನು ಹೊಂದಲು ಅದೃಷ್ಟಶಾಲಿ ಎಂದು ಹುಸೇನ್ ಒಪ್ಪಿಕೊಂಡಿದ್ದಾರೆ.

ಪಂತ್ ಕಳೆದ ವರ್ಷ ಡಿಸೆಂಬರ್​ನಲ್ಲಿ ದೆಹಲಿಯಿಂದ ಹೋಗುವಾಗ ಡೆಹ್ರಾಡೂನ್ ಹೆದ್ದಾರಿಯಲ್ಲಿ ಕಾರು ಅಪಘಾತಕ್ಕೆ ಒಳಗಾಗಿದ್ದರು. ಸ್ವಲ್ಪ ಸಮಯದವರೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ತಮ್ಮ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಮತ್ತು ಅಂದಿನಿಂದ ಎನ್​ಸಿಎನಲ್ಲಿ ಪುನಶ್ಚೇತನಗೊಳ್ಳುತ್ತಿದ್ದಾರೆ.

ಇದನ್ನೂ ಓದಿ : KL Rahul : ರಾಹುಲ್​ ನಾಯಕತ್ವದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಎಲ್​ಎಸ್​ಜಿ ಕೋಚ್​​

ಗಾಯದಿಂದಾಗಿ ಅವರು ಏಷ್ಯಾ ಕಪ್ 2023 ವಿಶ್ವಕಪ್ 2023 ಮತ್ತು ಐಪಿಎಲ್ 2023 ಅನ್ನು ತಪ್ಪಿಸಿಕೊಂಡರು. ಆದರೆ ಪಂತ್ ಐಪಿಎಲ್ 2024 ನೊಂದಿಗೆ ಸ್ಪರ್ಧಾತ್ಮಕ ಕ್ರಿಕೆಟ್​​ಗೆ ಮರಳುತ್ತಾರೆ ಎಂಬ ಊಹಾಪೋಹಗಳು ಹರಡಿರುವುದರಿಂದ ಆ ಬಗ್ಗೆ ಕೌತುಕ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್​​ನಲ್ಲಿ ಮಾಜಿ ನಾಯಕ ನಾಸಿರ್ ಹುಸೇನ್ ಅವರು ಇಡೀ ಜಗತ್ತು ಅವರ ಮರಳುವಿಕೆಗಾಗಿ ಕಾಯುತ್ತಿದೆ ಎಂದು ಹೇಳಿದ್ದಾರೆ.

ಹುಸೇನ್ ಹೇಳಿದ್ದೇನು?

ಅದೊಂದು ಗಂಭೀರ ಅಪಘಾತವಾಗಿತ್ತು. ಇಡೀ ಜಗತ್ತು ಉಸಿರು ಬಿಗಿಹಿಡಿದಿತ್ತು. ಅದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ನೀವು ಸೋಷಿಯಲ್ ಮೀಡಿಯಾದಲ್ಲಿ, ನನ್ನ ಫೋನ್​ನಲ್ಲಿ ಮತ್ತು ಜಿಮ್​ನಲ್ಲಿ ದೃಶ್ಯಗಳಿಗೆ ಆರಂಭಿಕ ಮೊದಲ ನಡಿಗೆಯ ಹೆಜ್ಜೆಗಳನ್ನು ಮತ್ತು ನಂತರ ಅವರು ಸ್ವಲ್ಪ ಕ್ರಿಕೆಟ್ ಆಡುವ ದೃಶ್ಯಗಳು, ರಿಕಿ (ಪಾಂಟಿಂಗ್) ಅವರೊಂದಿಗೆ ಅವರ ಚಟುವಟಿಕೆಗಳನ್ನು ಗಮನಹರಿಸಿದ್ದೀರಿ. ಆ್ಯಶಸ್​ನಲ್ಲಿ ಬೇಸಿಗೆಯಲ್ಲಿ ನಾನು ರಿಕಿ ಪಾಟಿಂಗ್​ ಅವರೊಂದಿಗೆ ಪ್ರಯಾಣಿಸಿದೆ. ರಿಕಿ ಪಂತ್ ಪ್ರಗತಿ ಕುರಿತು ಸಂದೇಶ ಕಳುಹಿಸುತ್ತಿದ್ದರು. ಇದೀಗ ನೋಡಿದರೆ ಅವರು ಬಾಕ್ಸ್​ಆಫೀಸ್​ ಕ್ರಿಕೆಟಿಗನಾಗುವುದು ಖಚಿತ ಎಂದು ಹೇಳಿದರು.

ಇಂಗ್ಲೆಂಡ್ ಮುಂದಿನ ವರ್ಷ ಜನವರಿ-ಮಾರ್ಚ್​​ನಲ್ಲಿ ಐದು ಟೆಸ್ಟ್ ಪಂದ್ಯಗಳಿಗಾಗಿ ಭಾರತ ಪ್ರವಾಸ ಕೈಗೊಳ್ಳಲಿದೆ. ಪಂತ್​​ ಇಂಗ್ಲಂಡ್​ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಆಂಗ್ಲರ ವಿರುದ್ಧ 12 ಇನಿಂಗ್ಸ್​ಗಳಲ್ಲಿ ಮೂರು ಶತಕಗಳು ಮತ್ತು ನಾಲ್ಕು ಅರ್ಧಶತಕಗಳೊಂದಿಗೆ 781 ರನ್ ಗಳಿಸಿದ್ದಾರೆ.

ಪಂತ್ ಅನುಪಸ್ಥಿತಿಯಲ್ಲಿ, ಭಾರತವು ಟೆಸ್ಟ್​​ ತಂಡ ವಿಕೆಟ್ ಕೀಪರ್​ಗಳಾಗಿ ಕೆಎಸ್ ಭರತ್, ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್ ಅವರನ್ನು ಪ್ರಯತ್ನಿಸಿದೆ. ವೈಟ್-ಬಾಲ್ ಕ್ರಿಕೆಟ್​ನಲ್ಲಿ ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್ ತಮ್ಮ ಕೆಲಸವನ್ನು ಮಾಡಿದ್ದಾರೆ.

ಪಂತ್ ಇಲ್ಲದೆ ಭಾರತ ಉತ್ತಮ ಪ್ರದರ್ಶನ ನೀಡಿದೆ. ಏಕೆಂದರೆ ಕೆಎಲ್ ಎಲ್ಲಾ ಸ್ವರೂಪಗಳಲ್ಲಿ ಅದ್ಭುತವಾಗಿ ಆಡಿದ್ದಾರೆ. ಅವರು ಅದ್ಭುತವಾಗಿ ಮುಂದುವರಿಯುತ್ತಾರೆ. ಅವರಿಬ್ಬರನ್ನು ಹೊಂದಲು ಭಾರತ ತಂಡವು ಅದೃಷ್ಟ ಮಾಡಿದೆ. ರಿಷಭ್ ಪಂತ್ ಅವರ ಗಾಯದ ಮೊದಲು ಅದ್ಭುತ ಪ್ರದರ್ಶನ ನೀಡುತ್ತಿದ್ದರು. ಗಾಯದ ನಂತರ ಅವರು ಬಾಕ್ಸ್ ಆಫೀಸ್ ಕ್ರಿಕೆಟಿಗ ಆಗುತ್ತಾರೆ ಎಂದು ಆಶಿಸುತ್ತೇವೆಎಂದು ಹುಸೇನ್ ಹೇಳಿದರು.

Exit mobile version