Site icon Vistara News

IPL 2023: ವಿಶ್ವದ ಕ್ಯಾಶ್‌ ರಿಚ್‌ ಐಪಿಎಲ್ ಟೂರ್ನಿಗೆ ದಿನಗಣನೆ; ಈ ಬಾರಿಯ ವಿಶೇಷತೆ ಏನು?

IPL 2023: Countdown to world's cash-rich IPL tournament; What is special this time?

IPL 2023: Countdown to world's cash-rich IPL tournament; What is special this time?

ಅಹಮದಾಬಾದ್​: ವಿಶ್ವದ ಕ್ಯಾಶ್‌ ರಿಚ್‌ ಕ್ರಿಕೆಟ್‌ ಲೀಗ್‌ ಐಪಿಎಲ್​ ಆರಂಭಗೊಂಡು 15 ವರ್ಷ ಉರುಳಿದೆ. ಇದೀಗ 16ನೇ ಆವೃತ್ತಿಗೆ(IPL 2023) ಕಾಲಿರಿಸಿದೆ. ಕೊರೊನಾದ ಬಳಿಕ ಈ ಬಾರಿ ಟೂರ್ನಿ ಭಾರತದಲ್ಲಿ ತನ್ನ ಮೊದಲ ಸ್ವರೂಪದಲ್ಲೇ ನಡೆಯಲಿದೆ. ಕಳೆದ ಎರಡು ಆವೃತ್ತಿಗಳೂ ಕೊರೊನಾ ನಿರ್ಬಂಧಗಳಿಂದಾಗಿ ಅಷ್ಟಾಗಿ ಸಂಭ್ರಮದಲ್ಲಿ ಟೂರ್ನಿಯನ್ನು ನಡೆಸಲಾಗಿರಲಿಲ್ಲ. ಆದರೆ ಈ ಬಾರಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಬಿಸಿಸಿಐ ಎಲ್ಲ ಸಿದ್ಧತೆ ನಡೆಸಿದೆ.

ರಶ್ಮಿಕಾ ಮಂದಣ್ಣ- ತಮನ್ನಾ ಭಾಟಿಯ ಭಾಗಿ

ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ಉದ್ಘಾಟನಾ ಸಮಾರಂಭ ಇದೀಗ ಬರೋಬ್ಬರಿ 4 ವರ್ಷಗಳ ಬಳಿಕ ನಡೆಯುತ್ತಿದೆ. ಈ ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಮಿಲ್ಕಿ ಬ್ಯೂಟಿ ಖ್ಯಾತಿಯ ತಮನ್ನಾ ಭಾಟಿಯ(Tamanna Bhatia) ನೃತ್ಯದ ಮೂಲಕ ಎಲ್ಲರನ್ನು ರಂಜಿಸಲಿದ್ದಾರೆ ಎಂದು ವರದಿಯಾಗಿದೆ. ಈ ಉದ್ಘಾಟನಾ ಸಮಾರಂಭ ಭಾರತದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್ 31 ರಂದು ನಡೆಯಲಿದೆ.

ಎಂ.ಎಸ್​ ಧೋನಿ vs ಹಾರ್ದಿಕ್‌ ಪಾಂಡ್ಯ

ಉದ್ಘಾಟನಾ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ(hardik pandya) ನೇತೃತ್ವದ ಹಾಲಿ ಚಾಂಪಿಯನ್ ಗುಜರಾತ್​ ಟೈಟಾನ್ಸ್​ ಮತ್ತು ಧೋನಿ(MS Dhoni) ಸಾರಥ್ಯದ ಚೆನ್ನೈ ಸೂಪರ್​ ಕಿಂಗ್ಸ್​ ಮುಖಾಮುಖಿಯಾಗಲಿವೆ. ಈ ಪಂದ್ಯ ಶುಕ್ರವಾರ ಅಹಮದಾಬಾದ್​ನಲ್ಲಿ ನಡೆಯಲಿದೆ. ಕಳೆದ ಬಾರಿ ನಡೆದ ಟೂರ್ನಿಯಲ್ಲಿ ಪಾಂಡ್ಯ ಪಡೆ ಚೆನ್ನೈ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲಿಯೂ ಮೇಲುಗೈ ಸಾಧಿಸಿತ್ತು. ಮೊದಲ ಪಂದ್ಯ 3 ವಿಕೆಟ್​ನಿಂದ ಗೆದ್ದರೆ, ದ್ವಿತೀಯ ಪಂದ್ಯ 7 ವಿಕೆಟ್​ಗಳಿಂದ ಗೆದ್ದಿತ್ತು.

ಇದನ್ನೂ ಓದಿ IPL 2023: ಅನ್ ಸೋಲ್ಡ್ ಆಗಿದ್ದ ಸ್ಟೀವನ್​ ಸ್ಮಿತ್​ ಮತ್ತೆ ಐಪಿಎಲ್​ಗೆ ಎಂಟ್ರಿ

ಗಾಯದ ಸಮಸ್ಯೆ

ಕಳೆದ 15 ಆವೃತ್ತಿಯ ಐಪಿಎಲ್​ನಲ್ಲಿ ಇಷ್ಟು ದೊಡ್ಡ ಮಟ್ಟದ ಗಾಯದ ಸಮಸ್ಯೆ ಕಾಡಿಲ್ಲ. ಟೂರ್ನಿಯ ಇತಿಹಾಸದಲ್ಲೇ ಅತಿ ಹೆಚ್ಚು ಸ್ಟಾರ್​ ಆಟಗಾರರು ಈ ಬಾರಿ ಗಾಯದಿಂದ ಟೂರ್ನಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್​ ಟೂರ್ನಿಯನ್ನು ಇಂಜುರಿ ಲೀಗ್​ ಎಂದೇ ಕರೆಯಲಾಗುತ್ತಿದೆ. ಜಸ್​ಪ್ರೀತ್​ ಬುಮ್ರಾ, ರಿಷಭ್​ ಪಂತ್​, ಶ್ರೇಯಸ್​ ಅಯ್ಯರ್​, ಜಾನಿ ಬೇರ್​ಸ್ಟೋ, ಪ್ರಸಿದ್ಧ್​ ಕೃಷ್ಣ ಸೇರಿ ಹಲವು ಆಟಗಾರರು ಗಾಯದಿಂದ ಅಲಭ್ಯರಾಗಿದ್ದಾರೆ.

ಧೋನಿಗೆ ವಿದಾಯ ಕೂಟ ಸಾಧ್ಯತೆ

ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಈ ಬಾರಿಯ ಐಪಿಎಲ್​ ಬಳಿಕ ವಿದಾಯ ಹೇಳಲಿದ್ದಾರೆ ಎಂದು ವರದಿಯಾಗಿದೆ. ಮೆ.14 ರಂದು ಕೆಕೆಆರ್​ ವಿರುದ್ಧದ ಪಂದ್ಯವು ಸಿಎಸ್​ಕೆ ಪರ ಧೋನಿಯ ಕೊನೆಯ ಪಂದ್ಯವಾಗಿರಲಿದೆ ಎಂದು ಫ್ರಾಂಚೈಸಿ ತಿಳಿಸಿರುವುದಾಗಿ ಇನ್​ಸೈಡ್ ಸ್ಪೋರ್ಟ್ಸ್​ ತಿಳಿಸಿದೆ. ಈಗಾಗಲೇ ಧೋನಿ ಅವರ ವಿದಾಯಕ್ಕೆ ಚೆನ್ನೈ ತಂಡ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿದ್ದು ಅದರಂತೆ ಮೇ.14ಕ್ಕೆ ಧೋನಿ ವಿದಾಯ ಪಂದ್ಯ ಆಡಲಿದ್ದಾರೆ ಎಂದು ತಂಡದ ಮೂಲವೊಂದು ತಿಳಿಸಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ Team Leaders Of IPL 2023: ಐಪಿಎಲ್​ 2023ನೇ ಆವೃತ್ತಿಯ ತಂಡಗಳ ನಾಯಕರು ಇವರು

ಈ ಹಿಂದೆಯೇ ಚೆಪಾಕ್ ಮೈದಾನದಲ್ಲಿ ಅಭಿಮಾನಿಗಳ ಮುಂದೆ ಕಣಕ್ಕಿಳಿಯುವ ಮೂಲಕ ಧೋನಿ ಐಪಿಎಲ್​ಗೆ ಗುಡ್ ಬೈ ಹೇಳಲು ಇಚ್ಛಿಸಿರುವುದಾಗಿ ತಿಳಿಸಿದ್ದರು. ಆದರೆ ಕೊರೊನಾ ಕಾರಣದಿಂದಾಗಿ ಕಳೆದ ಮೂರು ಸೀಸನ್​ನಲ್ಲಿ ತವರು ಮೈದಾನದಲ್ಲಿ ಪಂದ್ಯಗಳು ನಡೆದಿರಲಿಲ್ಲ. ಆದರೆ ಈ ಬಾರಿ ಇಲ್ಲಿ ಪಂದ್ಯ ನಡೆಯಲಿದೆ. ಹೀಗಾಗಿ ಧೋನಿ ಈ ಬಾರಿ ವಿದಾಯ ಹೇಳಲಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಧೋನಿ ಯಾವುದೇ ಅಧಕೃತ ಮಾಹಿತಿ ನೀಡಿಲ್ಲ.

Exit mobile version