Site icon Vistara News

MS Dhoni : ಎಂ.ಎಸ್.ಧೋನಿ ಭಗವದ್ಗೀತೆಯೊಂದಿಗೆ ಕಾಣಿಸಿಕೊಂಡ ಫೋಟೋ ವೈರಲ್

MS Dhoni with with bhagavad gita

#image_title

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಫೈನಲ್​ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ಇತಿಹಾಸ ನಿರ್ಮಿಸಿದೆ. ಐದನೇ ಬಾರಿ ಪ್ರಶಸ್ತಿ ಗೆದ್ದು ಸಾಧನೆ ಮಾಡಿರುವ ಮುಂಬಯಿ ಇಂಡಿಯನ್ಸ್​ ಸಾಲಿಗೆ ಸೇರ್ಪಡೆಗೊಂಡಿದೆ ಸಿಎಸ್​ಕೆ. ಈ ಪ್ರಶಸ್ತಿ ಗೆಲ್ಲುವುದಕ್ಕೆ ದಿಗ್ಗಜ ಮಹೇಂದ್ರ ಸಿಂಗ್ ಧೋನಿಯ (MS Dhoni) ನಾಯಕತ್ವವೇ ಕಾರಣ ಎಂದು ಹೊಗಳಲಾಗುತ್ತಿದೆ. ಏತನ್ಮಧ್ಯೆ, ಚೆನ್ನೈ ತಂಡದ ನಾಯಕನ ಭಗವದ್ಗೀತೆ ಕೈಯಲ್ಲಿ ಹಿಡಿದುಕೊಂಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಾರಿನಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದ ಚಿತ್ರ ಅದಾಗಿದೆ. ಅವರು ಮುಂದಿನ ಸೀಟಿನಲ್ಲಿ ಕುಳಿತು ಭಗವದ್ಗೀತೆ ಗ್ರಂಥವನ್ನು ಹಿಡಿದುಕೊಂಡಿದ್ದಾರೆ. ಈ ಚಿತ್ರವನ್ನು ವೈರಲ್​ ಆಗಿದೆ. ಐಪಿಎಲ್ 2023ರಲ್ಲಿ ಧೋನಿ ಮೊಣಕಾಲು ನೋವಿಗೆ ಒಳಗಾಗಿದ್ದರು. ಈ ಗಾಯದಿಂದ ಅವರಿಗೆ ವಿಕೆಟ್​ ಕೀಪಿಂಗ್ ಮಾಡಲು ಸಮಸ್ಯೆ ಆಗುತ್ತಿರಲಿಲ್ಲ. ಆದರೆ, 41 ವರ್ಷದ ಆಟಗಾರನಿಗೆ ಬ್ಯಾಟಿಂಗ್ ಮಾಡುವಾಗ ಸಮಸ್ಯೆ ಎದುರಾಗುತ್ತಿತ್ತು. ಮೊಣಕಾಲಿನ ಗಾಯದಿಂದಾಗಿ ಅವರು ಬ್ಯಾಟ್ ಮಾಡಲು ಮೈದಾನಕ್ಕೆ ಇಳಿಯುತ್ತಿರಲಿಲ್ಲ. ರನ್​ಗಾಗಿ ಓಡುವಾಗಲೂ ಸಮಸ್ಯೆ ಎದುರಿಸಿದ್ದರು.

ಇದನ್ನೂ ಓದಿ : MS Dhoni: ಧೋನಿ ರಾಜಕೀಯ ಪ್ರವೇಶಕ್ಕೆ ಸಲಹೆ ನೀಡಿದ ಆನಂದ್‌ ಮಹೀಂದ್ರಾ

ಧೋನಿ ಮೊಣಕಾಲಿನ ನೋವಿಗೆ ವೈದ್ಯಕೀಯ ಸಲಹೆ ಪಡೆಯಲಿದ್ದಾರೆ. ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೆ ಅವರು ಅದಕ್ಕೆ ಸಮ್ಮತಿ ಸೂಚಿಸಲಿದ್ದಾರೆ ಚೆನ್ನೈ ಸಿಇಒ ಕಾಶಿ ವಿಶ್ವನಾಥನ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ಚೆನ್ನೈಗೆ ಐದನೇ ಟ್ರೋಫಿ

ಐಪಿಎಲ್ 2023ರ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಗುಜರಾತ್ ಟೈಟನ್ಸ್ ತಂಡ 214 ರನ್​ ಬಾರಿಸಿತ್ತು. ಶುಭ್​ಮನ್​ ಗಿಲ್, ವೃದ್ಧಿಮಾನ್ ಸಹಾ ಮತ್ತು ಸಾಯಿ ಸುದರ್ಶನ್ ಉತ್ತಮ ಪ್ರದರ್ಶನ ನೀಡಿದರು. ಗಿಲ್ 20 ಎಸೆತಗಳಲ್ಲಿ 39 ರನ್ ಗಳಿಸಿದ್ದರೆ, 39 ಎಸೆತಗಳಲ್ಲಿ 54 ರನ್ ಗಳಿಸಿದ ಸಹಾ ಅರ್ಧಶತಕ ಗಳಿಸಿದ್ದರು. ಸುದರ್ಶನ್ 47 ಎಸೆತಗಳಲ್ಲಿ 96 ರನ್ ಗಳಿಸಿದ್ದರು. ಎರಡನೇ ಇನ್ನಿಂಗ್ಸ್​​ನಲ್ಲಿ ಬ್ಯಾಟಿಂಗ್​​ಗೆ ಬಂದ ಎಂಎಸ್ ಧೋನಿ ನೇತೃತ್ವದ ತಂಡಕ್ಕೆ 15 ಓವರ್​ಗಳ 171 ರನ್​ಗಳ ಗುರಿ ಪಡೆಯಿತು. ಸಂಘಟಿತ ಹೋರಾಟದಿಂದ ಚೆನ್ನೈ ತಂಡ ಗೆಲುವು ಸಾಧಿಸಿತು. .

Exit mobile version