Site icon Vistara News

Letter to God : ಪ್ರಪಂಚದಲ್ಲೇ ನಾನು ಸರ್ವಾಂಗ ಸುಂದರನಾಗಬೇಕು; ಗಿರಿಜಾದೇವಿಗೆ ಭಕ್ತನ ಹರಕೆ ಪತ್ರ!

Letter to God

ಚಿಕ್ಕಮಗಳೂರು: ನಾನು ಒಬ್ಬ ಉತ್ತಮ ನಟ ಹಾಗೂ ಫ್ಯಾಷನ್‌ ಮಾಡೆಲ್‌ ಆಗಬೇಕೆಂದು ಇಚ್ಚಿಸಿದ್ದೇನೆ. ಈ ಕನಸನ್ನು ನನಸು ಮಾಡುವ ಹೊಣೆ ನಿಮ್ಮದು. ನಿಮ್ಮಂತೆ ನಾನು ಸರ್ವಾಂಗ ಸುಂದರನಾಗಬೇಕು. ಹೀಗೆ ದೇವರಿಗೆ ಭಕ್ತನೊಬ್ಬ ಬರೆದಿರುವ ಹರಕೆ (Letter to God) ಪತ್ರ ವೈರಲ್‌ (Viral news) ಆಗಿದೆ.

ಚಿಕ್ಕಮಗಳೂರಿನ ಕಳಸದ (kalasa temple) ಕಳಸೇಶ್ವರ ಸ್ವಾಮಿ ದೇವಾಲಯಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಇಲ್ಲಿ ಭಕ್ತರು ಹರಕೆಯನ್ನು ಕಟ್ಟಿಕೊಳ್ಳುತ್ತಾರೆ. ಹೀಗೆ ಹುಂಡಿಯಲ್ಲಿ ಕಾಣಿಕೆಯ ಜತೆಗೆ ಭಕ್ತರ ಹರಕೆ ಪತ್ರವೂ ಲಭ್ಯವಾಗಿದೆ. ಹುಂಡಿ ಹಣ ಎಣಿಕೆ ವೇಳೆ ಅಧಿಕಾರಿಗಳಿಗೆ ಭಕ್ತನೊಬ್ಬನ ಹರಕೆ ಪತ್ರವು ನಗು ತರಿಸಿದೆ.

ದೇವರಿಗೆ ಪತ್ರ ಬರೆದ ಭಕ್ತರೊಬ್ಬರು ಹುಂಡಿಗೆ ಹಾಕಿರುವ ಪತ್ರ ವೈರಲ್‌ ಆಗಿದೆ. ಹುಂಡಿ ಎಣಿಕೆ ಸಂದರ್ಭದಲ್ಲಿ ಭಕ್ತನ ಚೀಟಿ ಸಿಕ್ಕಿದ್ದು, ತಾಯಿ ಗಿರಿಜಾದೇವಿಗೆ ಹರಕೆಯ ಸುರಿಮಳೆಯನ್ನೇ ಸುರಿಸಿದ್ದಾರೆ.

ಇದನ್ನೂ ಓದಿ: Rowdy Murder: ರೌಡಿ ಮಹೇಶ್ ಹತ್ಯೆ; ಸಿದ್ದಾಪುರ ಕಿಂಗ್‌ ಪಟ್ಟಕ್ಕಾಗಿ ನಡೆಯಿತು ಕೊಲೆ! ಮತ್ತೆ ಶುರುವಾಯ್ತಾ ಗ್ಯಾಂಗ್‌ವಾರ್‌ ಯುಗ?

ಪತ್ರದಲ್ಲಿದೆ ಏನಿದೆ?

ಗಿರಿಜಾದೇವಿಗೆ ರಕ್ಷಿತ್‌ ಎಂಬಾತ ಪತ್ರ ಬರೆದಿದ್ದಾನೆ. ಸರ್ವಾಂಗ ಸುಂದರಿಯಾದ ಗಿರಿಜಾದೇವಿಯಿಂದ ಆಶೀರ್ವಾದ ಬಯಸುತ್ತೇನೆ. ನಾನು ಒಬ್ಬ ಉತ್ತಮ ನಟ-ಫ್ಯಾಷನ್‌ ಮಾಡೆಲ್‌ ಆಗಬೇಕೆಂದು ಇಚ್ಛಿಸುತ್ತೇನೆ. ನನ್ನ ಕನಸನ್ನು ನನಸು ಮಾಡುವ ಹೊಣೆ ನಿಮ್ಮದು. ನಿಮ್ಮಂತೆ ನಾನು ಸರ್ವಾಂಗ ಸುಂದರನಾಗಬೇಕು ಎಂದು ಈ ಪತ್ರದ ಮೂಲಕ ಆಶಿಸುತ್ತಿದ್ದೇನೆ.

ಭಕ್ತನ ಪತ್ರ

ನನ್ನ ಸೌಂದರ್ಯದ ಹೊಣೆ ನಿಮ್ಮದು. ಪ್ರಪಂಚದಲ್ಲೇ ಸರ್ವಾಂಗಸುಂದರನೆಂದು ಪ್ರಖ್ಯಾತಿಯಾಗಬೇಕು. ಇದು ನಿಮ್ಮ ಭಕ್ತನ ಬೇಡಿಕೆ ಆಗಿದೆ. ನನ್ನ ಪ್ರಾರ್ಥನೆಯೊಂದೇ ನನ್ನ ಹೊಣೆ ನಿಮ್ಮ ಜವಬ್ದಾರಿ. ಹೀಗೆ ಭಕ್ತನ ಬೇಡಿಕೆಗೆ ಹುಂಡಿ ಹಣ ಎಣಿಕೆ ಅಧಿಕಾರಿಗಳು ನಕ್ಕು ಸುಮ್ಮನಾಗಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version