Site icon Vistara News

Sulthan Bathery : ಕೇರಳದಲ್ಲೂ ಟಿಪ್ಪು ಪಾಲಿಟಿಕ್ಸ್​; ಸುಲ್ತಾನ್ ಬತ್ತೇರಿ ಹೆಸರು ಬದಲಾಯಿಸುವುದಾಗಿ ಹೇಳಿದ ಬಿಜೆಪಿ ಅಧ್ಯಕ್ಷ

Sulthan Bathery

ತಿರುವನಂತಪುರಂ: ಕೇರಳದ ವಯನಾಡ್ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಅವರು ತಾವು ಈ ಕ್ಷೇತ್ರದಿಂದ ಆಯ್ಕೆಯಾದರೆ ಟಿಪ್ಪು ಸುಲ್ತಾನ್ ಕಾಲದಲ್ಲಿ ಹೆಸರಿಸಲಾದ ಸುಲ್ತಾನ್ ಬತ್ತೇರಿ (Sulthan Bathery) ಪಟ್ಟಣದ ಹೆಸರನ್ನು ಗಣಪತಿ ವಟ್ಟಂ (Ganapathi Vattam) ಎಂದು ಬದಲಾಯಿಸುತ್ತೇನೆ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಸುಲ್ತಾನ್ ಬತ್ತೇರಿ ಪಟ್ಟಣವು ಮೈಸೂರು ಆಡಳಿತಗಾರ ಟಿಪ್ಪು ಸುಲ್ತಾನ್ (Tippu Sulthan) ನೊಂದಿಗೆ ಸಂಬಂಧ ಹೊಂದಿದೆ. ಹೀಗಾಗಿ ಸ್ಥಳೀಯವಾಗಿ ವಿವಾದ ಎದ್ದಿದೆ.

ವಯನಾಡ್​ನಲ್ಲಿ ಹಾಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ವಿರುದ್ಧ ಸ್ಪರ್ಧಿಸಲಿರುವ ಸುರೇಂದ್ರನ್, ಟಿಪ್ಪು ಸುಲ್ತಾನ್ ಕೇರಳದಲ್ಲಿ, ವಿಶೇಷವಾಗಿ ವಯನಾಡ್​ನಲ್ಲಿ ಲಕ್ಷಾಂತರ ಹಿಂದೂಗಳನ್ನು ಮತಾಂತರಗೊಳಿಸಿದ್ದಾನೆ ಎಂದು ಹೇಳಿಕೆ ನೀಡಿದ್ದಾರೆ.

ಟಿಪ್ಪು ಸುಲ್ತಾನ್ ಯಾರು? ವಯನಾಡ್ ಮತ್ತು ಅಲ್ಲಿನ ಜನರ ವಿಷಯಕ್ಕೆ ಬಂದಾಗ ಅವರ ಪ್ರಾಮುಖ್ಯತೆ ಏನು? ಆ ಸ್ಥಳವನ್ನು ಗಣಪತಿ ವಟ್ಟಂ ಎಂದು ಕರೆಯಲಾಗುತ್ತಿತ್ತು. ಜನರುಈ ಹೆಸರಿಗೆ ಒಗ್ಗಿಕೊಂಡಿದ್ದಾರೆ. ಅದನ್ನು ಮರುನಾಮಕರಣ ಮಾಡಲಾಗಿದೆ. ಆದ್ದರಿಂದ, ಕಾಂಗ್ರೆಸ್ ಮತ್ತು ಎಲ್​​ಡಿಎಫ್​ ಇನ್ನೂ ಟಿಪ್ಪು ಸುಲ್ತಾನ್ ಜತೆಗಿದೆ. ಅವರು ಕೇರಳದಲ್ಲಿ, ವಿಶೇಷವಾಗಿ ವಯನಾಡ್ ಮತ್ತು ಮಲಬಾರ್ ಪ್ರದೇಶದಲ್ಲಿ ಅನೇಕ ದೇವಾಲಯಗಳ ಮೇಲೆ ಟಿಪ್ಪು ದಾಳಿ ಮಾಡಿದ್ದ. ಲಕ್ಷಾಂತರ ಹಿಂದೂಗಳನ್ನು ಮತಾಂತರಗೊಳಿಸಿದ್ದ” ಎಂದು ಸುರೇಂದ್ರನ್ ಹೇಳಿಕೆ ನೀಡಿದ್ದಾರೆ.

ಟಿಪ್ಪು ಸುಲ್ತಾನ್ ದೇವಾಲಯಗಳನ್ನು ನೆಲಸಮಗೊಳಿಸಿದ ವ್ಯಕ್ತಿ ಎಂದು ಬಿಜೆಪಿ ಪ್ರತಿಪಾದಿಸುತ್ತಿದೆ. ಕರ್ನಾಟಕದಲ್ಲಿಯೂ ಟಿಪ್ಪುವಿನ ವಿಚಾರದಲ್ಲಿಯೇ ಬಿಜೆಪಿ ಹೋರಾಟ ಮಾಡುತ್ತಿದೆ.

ಸುರೇಂದ್ರನ್ ಅವರ ಹೇಳಿಕೆಗೆ ಎಡಪಕ್ಷಗಳು ಮತ್ತು ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿವೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಪಿ.ಕೆ. ಕುನಾಲಿ ಕುಟ್ಟಿ ಮಾತನಾಡಿ ಕೇರಳದಲ್ಲಿ ಆ ರೀತಿಯ ರಾಜಕೀಯ ನಡೆಯುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: K Kavitha : ತಿಹಾರ್​ ಜೈಲಿನಿಂದಲೇ ಕವಿತಾ ಅರೆಸ್ಟ್​​; ಇದೀಗ ಸಿಬಿಐ ಸರದಿ

ಕಾಂಗ್ರೆಸ್ ಮುಖಂಡ ಮತ್ತು ಶಾಸಕ ಟಿ ಸಿದ್ದೀಕ್ ಇದನ್ನು “ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ” ಎಂದು ಕರೆದಿದ್ದಾರೆ.

ಮೂಲ ಹೆಸರೇನು?

ಸುಲ್ತಾನ್ ಬತ್ತೇರಿ ವಯನಾಡ್ ನ ಮೂರು ಮುನ್ಸಿಪಲ್ ಪಟ್ಟಣಗಳಲ್ಲಿ ಒಂದಾಗಿದೆ. ಕೇರಳ ಪ್ರವಾಸೋದ್ಯಮ ವೆಬೆ್​ಸೈಟ್ ಪ್ರಕಾರ, ಸುಲ್ತಾನ್ ಬತ್ತೇರಿಯನ್ನು ಮೊದಲು ಗಣಪತಿ ವಟ್ಟಂ ಎಂದು ಕರೆಯಲಾಗುತ್ತಿತ್ತು. ವಿಜಯನಗರ ಕಾಲದಲ್ಲಿ ನಿರ್ಮಿಸಲಾದ ಗಣೇಶ ದೇವಾಲಯದ ಹೆಸರನ್ನು ಇಡಲಾಗಿದೆ.

1700 ರಲ್ಲಿ ಟಿಪ್ಪು ಸುಲ್ತಾನ್ ಮಲಬಾರ್ ಪ್ರದೇಶದ ಮೇಲೆ ಆಕ್ರಮಣ ಮಾಡಿದ ನಂತರ ಈ ಪಟ್ಟಣದ ಹೆಸರನ್ನು ಬದಲಾಯಿಸಲಾಯಿತು. ಆಕ್ರಮಣದ ಸಮಯದಲ್ಲಿ, ಟಿಪ್ಪು ಸುಲ್ತಾನ್ ತನ್ನ ಮದ್ದುಗುಂಡು ಮತ್ತು ಫಿರಂಗಿಗಳನ್ನು ಗಣಪತಿ ವಟ್ಟದಲ್ಲಿ ಎಸೆದಿದ್ದಾನೆ

ಈ ಪಟ್ಟಣವನ್ನು ಬ್ರಿಟಿಷ್ ದಾಖಲೆಗಳಲ್ಲಿ ‘ಸುಲ್ತಾನರ ಬತೇರಿ ‘ ಎಂದು ಕರೆಯಲಾಗಿತ್ತು. ಟಿಪ್ಪು ಸುಲ್ತಾನ್ ಅಲ್ಲಿ ಒಂದು ಕೋಟೆ ಸಹ ನಿರ್ಮಿಸಿದ್ದ. ಅದು ಈಗ ಶಿಥಿಲಾವಸ್ಥೆಯಲ್ಲಿದೆ.

Exit mobile version