Site icon Vistara News

Lok sabha Election 2024 : ಟಿಕೆಟ್‌ ಕೈತಪ್ಪಿದ ಆಕ್ರೋಶ; ಬಿಜೆಪಿ ಕಚೇರಿಗೇ ಸಂಗಣ್ಣ ಕರಡಿ ಬೆಂಬಲಿಗರ ದಾಳಿ

Karadi Sanganna Fans

ಕೊಪ್ಪಳ: ಕೊಪ್ಪಳ ಸಂಸದರಾಗಿರುವ ಕರಡಿ ಸಂಗಣ್ಣ (Koppala MP Sanganna Karadi) ಅವರಿಗೆ ಬಿಜೆಪಿ ಟಿಕೆಟ್‌ ಮಿಸ್‌ ಆಗಿರುವುದು ಅವರ ಬೆಂಬಲಿಗರನ್ನು ಕೆರಳಿಸಿದೆ. ಅವರು ಎಷ್ಟರ ಮಟ್ಟಿಗೆ ಆಕ್ರೋಶಿತರಾಗಿದ್ದಾರೆ ಎಂದು ಜಿಲ್ಲಾ ಬಿಜೆಪಿ ಕಚೇರಿಗೇ ನುಗ್ಗಿ ದಾಂಧಲೆ ನಡೆಸುತ್ತಿದ್ದಾರೆ. ಲೋಕಸಭಾ ಚುನಾವಣೆಗೆ (Lok sabha Election 2024) ಸಂಗಣ್ಣ ಕರಡಿ ಬದಲು ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್‌ ಪಡೆದಿರುವ ಡಾ. ಕೆ. ಬಸವರಾಜ (BJP Candidate Dr. K Basavaraja) ಹಾಗೂ ದೊಡ್ಡನಗೌಡ ಪಾಟೀಲ್ ಮಾಧ್ಯಮಗೋಷ್ಠಿ ನಡೆಯುತ್ತಿದ್ದಾಗಲೇ ಲಗ್ಗೆ ಇಟ್ಟ ಅಭಿಮಾನಿಗಳು ಕಲ್ಲು ತೂರಾಟ ನಡೆಸಿ ಕಿಟಕಿಗಳನ್ನು ಒಡೆದು ಹಾಕಿದ್ದಾರೆ. ಭಾರತ ಮಾತೆಯ ಫೋಟೊವನ್ನೂ ಪುಡಿಗಟ್ಟಿದ್ದಾರೆ.

ಸಂಗಣ್ಣ ಕರಡಿ ಮನೆಗೆ ಬಂದ ಅಭ್ಯರ್ಥಿ ಬಸವರಾಜ ಘೇರಾವ್‌

ಈ ನಡುವೆ, ನೂತನ ಅಭ್ಯರ್ಥಿ ಡಾ. ಕೆ. ಬಸವರಾಜ ಅವರು ಹಾಲಿ ಸಂಸದ ಸಂಗಣ್ಣ ಕರಡಿ ಅವರನ್ನು ಭೇಟಿಯಾಗಲು ಮನೆಗೆ ಬಂದಾಗಲೂ ಬೆಂಬಲಿಗರ ಆಕ್ರೋಶ ಜೋರಾಗಿತ್ತು. ಅಭ್ಯರ್ಥಿ ಡಾ. ಕೆ. ಬಸವರಾಜ ಅವರು ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಜೊತೆಗೆ ಆಗಮಿಸಿದಾಗ ಅವರನ್ನು ತಡೆದ ಸಂಗಣ್ಣ ಬೆಂಬಲಿಗರು ಆಕ್ರೋ ವ್ಯಕ್ತಪಡಿಸಿದರು.

ʻʻಯಾರನ್ನು ಕೇಳಿ ಟಿಕೆಟ್ ಪಡೆದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ ಸಂಗಣ್ಣ ಬೆಂಬಲಿಗರು, ಮಾನ ಮರ್ಯಾದೆ ಇದ್ದರೆ ಬರಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಗಣ್ಣ ಕರಡಿ ಪರ ಜೈಘೋಷ ಕೂಗಿದ ಅಭಿಮಾನಿಗಳು, ಬಿಜೆಪಿ, ವಿಜಯೇಂದ್ರ ವಿರುದ್ಧ ಘೋಷಣೆ ಕೂಗಿದರು. ನೀವು ಸೋಲುತ್ತಿರಿ ಎಂದು ಡಾ. ಕೆ. ಬಸವರಾಜ್‌ ಅವರಿಗೆ ಎಚ್ಚರಿಕೆ ನೀಡಿದರು.

ಕಲ್ಲು ತೂರಾಟದಿಂದ ಬಿಜೆಪಿ ಕಚೇರಿ ಗಾಜು ಒಡೆದಿರುವುದು.

ಬೇರೆ ಪಕ್ಷ ಸೇರುವ ಯೋಚನೆ ಮಾಡಿಲ್ಲ ಎಂದ ಕರಡಿ ಸಂಗಣ್ಣ

ಬಿಜೆಪಿ ಟಿಕೆಟ್‌ ಮಿಸ್‌ ಆಗಿರುವ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಗುರುವಾರ ತಮ್ಮ ಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬೇರೆ ಪಕ್ಷ ಸೇರುವ ಚರ್ಚೆ ಮಾಡಿಲ್ಲ ಎಂದರು.

ʻʻನನಗೆ ಟಿಕೇಟ್‌ ಮಿಸ್‌ ಆಗಿದ್ದರಿಂದ ಬೇರೆ ಬೇರೆ ಪಕ್ಷದವರು ಸೌಜನ್ಯಕ್ಕಾಗಿ ಕರೆ ಮಾಡಿ ಮಾತನಾಡಿದ್ದಾರೆ. ಆದರೆ ಪಕ್ಷಕ್ಕೆ ಸೇರುವ ಕುರಿತು ಯಾವುದೇ ರೀತಿ ಚರ್ಚೆ ಮಾಡಿಲ್ಲ. ಹಿರಿತನ, ಕೆಲಸ ಮಾಡಿರುವ ನನಗೆ ಟಿಕೇಟ್‌ ಮಿಸ್‌ ಆಗಿರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದಿದ್ದಾರೆ. ಕಾಂಗ್ರೆಸ್‌ ಅಥವಾ ಕೆಆರ್‌ಪಿಪಿ ಗೆ ಹೋಗುವ ಯೋಚನೆ ಇಲ್ಲ. ಬಿಜೆಪಿಯಲ್ಲಿಯೇ ಇರುತ್ತೇನೆ. ಕಾರ್ಯಕರ್ತರಿಗೆ ನೋವಾಗಿರುತ್ತದೆ. ಅವರನ್ನು ಸಮಾಧಾನ ಮಾಡಬೇಕುʼʼ ಎಂದು ಹೇಳಿದರು.

ಮೋದಿ ಅವರನ್ನು ಇಡೀ ಜಗತ್ತೇ ಮೆಚ್ಚಿದೆ. ನಾನೂ ಅವರನ್ನು ಬೆಂಬಲಿಸುತ್ತೇನೆ. ಘೋಷಿತ ಅಭ್ಯರ್ಥಿ ಡಾ. ಕೆ. ಬಸವರಾಜ ಅವರನ್ನು ಬೆಂಬಲಿಸುವಂತೆ ಕಾರ್ಯಕರ್ತರಿಗೆ ನಾನು ಮನವಿ ಮಾಡುತ್ತೇನೆ ಎಂದು ಸಂಗಣ್ಣ ಕರಡಿ ಹೇಳಿದರು.

ಕೊಪ್ಪಳದಲ್ಲಿ ಎಂಎಲ್ಸಿ ಹೇಮಲತಾ ನಾಯಕ್ ಪೌರುಷ

ಈ ನಡುವೆ, ಟಿಕೇಟ್ ಮಿಸ್ ಆದ ಹಿನ್ನೆಲೆಯಲ್ಲಿ ಸಂಸದ ಸಂಗಣ್ಣ ಕರಡಿ ತಮ್ಮ ನಿವಾಸದಲ್ಲಿ ಪ್ರೆಸ್ ಮೀಟ್ ಮಾಡುತ್ತಿದ್ದ ವೇಳೆ ಎಂಎಲ್‌ಸಿ ಹೇಮಲತಾ ಸಿಟ್ಟಿಗೆದ್ದ ಘಟನೆಯೂ ನಡೆಯುತು.

ಪ್ರೆಸ್ ಮೀಟ್ ನಲ್ಲಿ ಎಂಎಲ್ಸಿ ಹೇಮಲತಾ ನಾಯಕ್ ಸಹ ಕುಳಿತಿದ್ದರು. ಸಂಗಣ್ಣ ಕರಡಿಗೆ ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಾರ್ಯಕರ್ತ ʻʻನೀವೇಕೆ ಇಲ್ಲಿ ಕುಳಿತಿದ್ದೀರಿʼʼ ಎಂದು ಆಕ್ರೋಶದಿಂದ ಹೇಮಲತಾ ಅವರನ್ನು ಪ್ರಶ್ನಿಸಿದ. ಇದರಿಂದ ರೊಚ್ಚಿಗೆದ್ದ ಎಂಎಲ್ಸಿ ಹೇಮಲತಾ ನಾಯಕ್, ಯಾಕೋ ಬದ್ಮಾಷ್… ಬೂಟು ತೆಗೆದುಕೊಂಡೇನುʼ ಎಂದು ರೋಷಾವೇಶದಿಂದ ಹೇಳಿದರು.

Exit mobile version