Site icon Vistara News

Siddeshwar swamiji | ತ್ರಿವೇಣಿ ಸಂಗಮದಲ್ಲಿ ಸಿದ್ದೇಶ್ವರ ಶ್ರೀ ಚಿತಾಭಸ್ಮ ವಿಲೀನ

siddeswara swamiji

ಕೂಡಲಸಂಗಮ: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ತ್ರಿವೇಣಿ ಸಂಗಮದಲ್ಲಿ ಸಿದ್ದೇಶ್ವರ ಶ್ರೀಗಳ ಚಿತಾಭಸ್ಮವನ್ನು ಭಾನುವಾರ ಬೆಳಗ್ಗೆ ವಿಸರ್ಜಿಸಲಾಯಿತು.

ಸಿದ್ದೇಶ್ವರರ ಚಿತಾಭಸ್ಮವನ್ನು ಸ್ವಾಮೀಜಿಗಳು ನದಿಗೆ ವಿಸರ್ಜಿಸಿದರು. ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸೇರಿದಂತೆ ಹಲವಾರು ಸ್ವಾಮೀಜಿಗಳ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿದ್ದರು.

ಶ್ರೀಗಳಿಗೆ ಬಸವಣ್ಣನ ಐಕ್ಯಸ್ಥಳ,ಕೂಡಲಸಂಗಮದ ಬಗ್ಗೆ ಅಪಾರ ಒಲವಿತ್ತು. ಇಲ್ಲಿಯೆ ಚಿತಾಭಸ್ಮ ಬಿಡಬೇಕು ಎಂದು ಅವರ ಇಚ್ಚೆಯಾಗಿತ್ತು. ಎಲ್ಲವೂ ಅವರ ಇಚ್ಛೆಯಂತೆ ನಡೆದಿದೆ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.

Exit mobile version