Site icon Vistara News

ವಿಸ್ತಾರ ನ್ಯೂಸ್‌ ತಂಡದ ಸಾಮಾಜಿಕ ಬದ್ಧತೆ ಬಗ್ಗೆ ಪೂರ್ಣ ವಿಶ್ವಾಸ: ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌

sudhakar

ವಿಸ್ತಾರ ನ್ಯೂಸ್‌ ವಾಹಿನಿಯನ್ನು ಆರಂಭಿಸುತ್ತಿರುವ ಮೂವರ ಅರ್ಹತೆ, ಸಾಮಾಜಿಕ ಬದ್ಧತೆಯ ಬಗ್ಗೆ ನನಗೆ ಪೂರ್ಣ ವಿಶ್ವಾಸವಿದೆ. ಜನತೆಗೆ ಸರಿಯಾದ ಸರಿಯಾದ ಸುದ್ದಿ, ವಿಶ್ಲೇಷಣೆ ಕೊಡಬೇಕು ಎಂಬ ಉದ್ದೇಶದಿಂದ ಮೂವರೂ ಒಂದೆಡೆ ಸೇರಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌ ಹೇಳಿದ್ದಾರೆ. ಶನಿವಾರ ನಡೆದ ವಿಸ್ತಾರ ನ್ಯೂಸ್‌ ವೆಬ್‌ಸೈಟ್‌ ಮತ್ತು ಚಾನೆಲ್‌ ಲೋಗೋ ಅನಾವರಣ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸಂಸ್ಥೆಗೆ ಶುಭ ಹಾರೈಸಿದರು.

ವಿಸ್ತಾರ ಎಂಬುದರಲ್ಲಿ ಪೂರ್ಣ ಜಗತ್ತು ಇದೆ. ಜಗತ್ತನ್ನೂ ಮೀರಿರುವುದು ಇದೆ. ಹೊಸದಾಗಿ ಆರಂಭವಾಗುತ್ತಿರುವ ವಿಸ್ತಾರ ನ್ಯೂಸ್‌ ವಿಶ್ವಾಸಾರ್ಹ ಸುದ್ದಿಸಂಸ್ಥೆಯಾಗಿ ಬೆಳೆಯಲಿ. ಮುನ್ನೂರಕ್ಕೂ ಹೆಚ್ಚು ತಂಡ ಸದಸ್ಯರು ವಿನೂತನ ಪ್ರಯೋಗಕ್ಕೆ ಅಣಿಯಾಗಿದ್ದಾರೆ. ಇದು ಜಗತ್ತಿಗೇ ವಿಸ್ತರಿಸುವ ಸಂಸ್ಥೆಯಾಗಿ ಬೆಳೆಯಲಿ. ಸರ್ವಸ್ಪರ್ಶಿ, ಸರ್ವವ್ಯಾಪಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ಇಂದು ಮಾಧ್ಯಮಲೋಕದಲ್ಲಿ ತೀವ್ರ ಸ್ಪರ್ಧೆಯಿದೆ. ಜನತೆ ಒಂದೇ ಚಾನೆಲ್‌, ವೆಬ್‌ಸೈಟನ್ನು ಪಟ್ಟು ಹಿಡಿದು ನೋಡಲು ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವುದು ಅಗತ್ಯ. ವಿಸ್ತಾರ ನ್ಯೂಸ್‌ ರಾಜ್ಯದ ಪ್ರತಿಯೊಬ್ಬ ಜನರ ವಿಶ್ವಾಸ ಗಳಿಸುತ್ತದೆ ಎಂಬ ಭರವಸೆಯಿದೆ ಎಂದರು.

ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಮಾತನಾಡಿ, ವಿಸ್ತಾರ ನ್ಯೂಸ್‌ ಸಮಾಜದ ಅಭಿವೃದ್ಧಿಗೆ ಕೆಲಸ ಮಾಡಲಿ, ಮನೆಮನೆಗಳನ್ನು ಮುಟ್ಟುವ ಕೆಲಸ ಮಾಡಲಿ ಎಂದು ಹಾರೈಸಿದರು.

ವಿಸ್ತಾರ ನ್ಯೂಸ್‌ನ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ ಅವರು ಈ ಹಿಂದಿನ ಮಾಧ್ಯಮಗಳಲ್ಲಿ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಬದ್ಧತೆ ಪ್ರದರ್ಶಿಸಿ, ಸಾಮಾಜಿಕ ವಿಚಾರಗಳನ್ನು ಬಿಂಬಿಸಿ ಮನೆಮಾತಾದವರು. ಈ ಚಾನೆಲ್‌ಗೆ ಶುಭವನ್ನು ಕೋರುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಸ್ತಾರ ನ್ಯೂಸ್‌ನ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ, ಸಂಸ್ಥೆಯ ನಿರ್ದೇಶಕ ಶ್ರೀನಿವಾಸ್‌ ಎಸ್.‌ ಹೆಬ್ಬಾರ್‌, ಸಂಸ್ಥೆಯ ಚೇರ್ಮನ್‌ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಚ್‌.ವಿ.ಧರ್ಮೇಶ್‌ ಜತೆಗಿದ್ದರು.

ಇದನ್ನೂ ಓದಿ: ವಿಸ್ತಾರ ಮೀಡಿಯಾದ ಉತ್ಸಾಹಿ ತಂಡ…

Exit mobile version