Site icon Vistara News

Vistara news launch | ವಿಸ್ತಾರ ನ್ಯೂಸ್‌ ನಂ.1 ಚಾನೆಲ್‌ ಆಗಲಿ: ಮಾಜಿ ಸಿಎಂ ಡಿ.ವಿ ಸದಾನಂದ ಗೌಡ

sadananda gowda

ಬೆಂಗಳೂರು: ವಿಸ್ತಾರ ನ್ಯೂಸ್‌ ಚಾನೆಲ್‌ ಲೋಕಾರ್ಪಣೆಯೊಂದಿಗೆ ಮಾಧ್ಯಮ ಲೋಕದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಈ ವಾಹಿನಿ ನಂ. 1 ಚಾನೆಲ್‌ ಆಗಿ ಹೊರಹೊಮ್ಮಲಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರು (Vistara news launch) ಶುಭಾಶಯಗಳನ್ನು ಕೋರಿದರು.

ವಿಸ್ತಾರ ನ್ಯೂಸ್‌ ಚಾನೆಲ್‌ ಅನಾವರಣ ಮತ್ತು ಕಾಯಕ ಯೋಗಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಧ್ಯಮ ಕ್ಷೇತ್ರದ ಸವಾಲುಗಳನ್ನು ವಿಸ್ತಾರ ನ್ಯೂಸ್‌ ಯಶಸ್ವಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ಟಿ.ಎ. ಶರವಣ ಶುಭ ಹಾರೈಕೆ: ಜೆಡಿಎಸ್‌ ಪ್ರಧಾನ ಕಾರ್ಯದರ್ಶಿಗಳಾದ ಟಿ.ಎ ಶರವಣ ಅವರು ಮಾತನಾಡಿ, ಜನರ ಕಷ್ಟಗಳಿಗೆ ಸ್ಪಂದಿಸುವ, ಹೊಸತನವನ್ನು ಒಳಗೊಂಡಿರುವ ನ್ಯೂಸ್‌ ಚಾನೆಲ್‌ ಆಗಿ ಹೊರಹೊಮ್ಮಲಿ ಎಂದು ಶುಭಾಶಯಗಳನ್ನು ಕೋರಿದರು.

ಕನ್ನಡ ಸಂಸ್ಕೃತಿ, ಸಂಸ್ಕಾರವನ್ನು ಇಟ್ಟುಕೊಂಡು ವಿಸ್ತಾರ ವಾಹಿನಿ, ನಾನಾ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಿರುವುದು ಶ್ಲಾಘನೀಯ ಎಂದರು.

Exit mobile version