Site icon Vistara News

Man Kills Wife : ಗರ್ಭಿಣಿ ಪತ್ನಿಯನ್ನು ಕುತ್ತಿಗೆ ಕೊಯ್ದು ಸಾಯಿಸಿದ ಧೂರ್ತ; ಮುಂದಿನ ವಾರ ಡೇಟ್‌ ಕೊಟ್ಟಿದ್ದರು, ಈಗ ಮಗೂ ಸಾವು

Man kills wife

ಮೈಸೂರು: ಧೂರ್ತ ಗಂಡನೊಬ್ಬ ತನ್ನ ಗರ್ಭಿಣಿ ಹೆಂಡತಿಯನ್ನು ಕುತ್ತಿಗೆ ಕೊಯ್ದು (Man kills pregnant wife) ಸಾಯಿಸಿದ ಭೀಕರ ಘಟನೆ ಮೈಸೂರು ಜಿಲ್ಲೆಯ (Mysore News) ನಂಜನಗೂಡಿನ ಚಾಮಲಾಪುರದಲ್ಲಿ (Man Kills wife) ನಡೆದಿದೆ. ಶೋಭಾ(21) ಎಂಬ ಗರ್ಭಿಣಿಯೇ ಮೃತ ದುರ್ದೈವಿ.

8 ವರ್ಷದ ಹಿಂದೆ ಹಿಂದೆ ಮಂಜುನಾಥ್ ನನ್ನು ಪ್ರೀತಿಸಿ ಮದುವೆಯಾಗಿದ್ದ ಶೋಭಾ ಇದೀಗ ಅದೇ ಗಂಡನ ಕ್ರೌರ್ಯಕ್ಕೆ ಬಲಿಯಾಗಿದ್ದಾಳೆ. ಶೋಭಾ ಈಗ ತುಂಬು ಗರ್ಭಿಣಿ. ಮುಂದಿನ ವಾರವೇ ಹೆರಿಗೆ ಎಂದು ವೈದ್ಯರು ದಿನವನ್ನೂ ಹೇಳಿದ್ದರು. ಆದರೆ, ಗಂಡನ ಕ್ರೂರ ಕೈಗಳಿಗೆ ಸಿಕ್ಕಿ ಆಕೆ ಹೆಣವಾಗಿದ್ದಾಳೆ.

ಶೋಭಾ ಮತ್ತು ಮಂಜುನಾಥ್‌

ಪ್ರೀತಿಸಿ ಮದುವೆಯಾಗಿದ್ದರೂ ಗಂಡ ಆಗಾಗ ಕಿರಿಕಿರಿ ಮಾಡುತ್ತಿದ್ದ ಎನ್ನಲಾಗಿದೆ. ಸಣ್ಣ ಸಣ್ಣ ವಿಷಯಗಳಿಗೆ ಒಮ್ಮೆಗೇ ಅತಿರೇಕದ ಪ್ರತಿಕ್ರಿಯೆ ನೀಡುತ್ತಿದ್ದ ಆಕೆಯ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಎನ್ನಲಾಗಿದೆ.

ಗುರುವಾರವೂ ಇಬ್ಬರೂ ಮನೆಯಲ್ಲಿ ಕುಳಿತು ಮಾತನಾಡುವಾಗ ಸಣ್ಣ ವಿಷಯಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮಂಜುನಾಥ ಹರಿತವಾದ ಬ್ಲೇಡ್‌ನಿಂದ ಕುತ್ತಿಗೆ ಭಾಗಕ್ಕೆ ಇರಿದು ಆಕೆಯನ್ನು ಕೊಂದಿದ್ದಾನೆ.

ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ನಡುವೆ ತಾಯಿಯ ಮರಣದಿಂದಾಗಿ ಆಕೆಯ ಹೊಟ್ಟೆಯಲ್ಲಿದ್ದ ಮಗು ಕೂಡಾ ಪ್ರಾಣ ಬಿಟ್ಟಿದೆ. ನಂಜನಗೂಡಿನ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ. ಈ ದಂಪತಿಗೆ ಒಂದು ಸುಮಾರು ಐದು ವರ್ಷದ ಗಂಡುಮಗುವಿದೆ.

ಇದನ್ನೂ ಓದಿ: Murder Case : ತವರು ಮನೆ ಸೇರಿದ ಹೆಂಡ್ತಿಗೆ ಗುಂಡು ಹಾರಿಸಿದ ಪಾಪಿ!

ಜಮಖಂಡಿಯಲ್ಲಿ ಬೈಕ್‌ -ಬೊಲೆರೋ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು

ಬಾಗಲಕೋಟೆ: ಬೈಕ್-ಬುಲೆರೋಗಳು ಮುಖಾಮುಖಿ ಡಿಕ್ಕಿಯಾಗಿ (Road Accident) ಬೈಕ್ ನಲ್ಲಿದ್ದ ಇಬ್ಬರೂ ಸ್ಥಳದಲ್ಲಿಯೇ ಪ್ರಾಣ ಕಳೆದುಕೊಂಡ (Bike riders dead) ಘಟನೆ ಬಾಗಲಕೋಟೆ ಜಿಲ್ಲೆಯ (Bagalakote News) ಜಮಖಂಡಿ ಆರ್‌ಟಿಒ ಕಚೇರಿ ಸಮೀಪದ ಹೆದ್ದಾರಿಯಲ್ಲಿ ನಡೆದಿದೆ.

ಧಾರವಾಡ-ವಿಜಯಪುರ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಈ ಘಟನೆಯಲ್ಲಿ ಮೃತಪಟ್ಟವರನ್ನು ಮುತ್ತಪ್ಪ ಮಲ್ಲಪ್ಪ ಸವದಿ (28), ಬಸವರಾಜ್ ಮಹಾಂತಪ್ಪ ಗಲಗಲಿ (18) ಎಂದು ಗುರುತಿಸಲಾಗಿದೆ.

ಮುಧೋಳದಿಂದ ಜಮಖಂಡಿಗೆ ಕಡೆಗೆ ಹೊರಟಿದ್ದ ಬುಲೆರೋ ವಾಹನ ಮತ್ತು ಜಮಖಂಡಿಯಿಂದ ಮುಧೋಳ ಕಡೆಗೆ ಬರ್ತಿದ್ದ ಬೈಕ್ ನಡುವೆ ಈ ದುರಂತ ಸಂಭವಿಸಿದೆ. ಬೈಕ್‌ನಲ್ಲಿದ್ದ ಇಬ್ಬರೂ ಮುಧೋಳ ತಾಲೂಕಿನ ಬುದ್ನಿ ಪಿ.ಎಂ. ಗ್ರಾಮದವರು.

ಅಪಘಾತದ ಬಳಿಕ ಬೊಲೆರೋ ವಾಹನ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Exit mobile version