Site icon Vistara News

BBK SEASON 10: ʻಉತ್ತಮʼರಾದ ನಮ್ರತಾ, ಜೈಲು ಪಾಲಾದ ಪ್ರತಾಪ್‌; ಕ್ಯಾಪ್ಟನ್‌ ಯಾರು?

Drone Prathap Gets Kalape Namratha Gowda Becomes Best Performer snehith captain

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಎಂಟನೇ ವಾರ ಪ್ರತಾಪ್‌ ʻಕಳಪೆʼ ಪಟ್ಟ ಪಡೆದರೆ , ನಮ್ರತಾ ಅವರು ʻಉತ್ತಮʼರಾಗಿ ಹೊರಹೊಮ್ಮಿದರು. ಈ ಬಾರಿ ನಮ್ರತಾ ಅವರು ತನಿಷಾ ಪರ ಆಡಿದ್ದಕ್ಕೆ ಹಾಗೂ ತಾವೇ ಸ್ಟ್ಯಾಂಡ್‌ ತೆಗೆದುಕೊಂಡಿದ್ದಕ್ಕೆ ಪ್ರೇಕ್ಷಕರು ಕೂಡ ಮೆಚ್ಚಿದ್ದಾರೆ. ಆಟದ ವೇಳೆ ಸಂಯಮ ಕಳೆದುಕೊಂಡು ಮಾತನಾಡುತ್ತಾರೆ’’ ಎಂಬ ಕಾರಣ ಕೊಟ್ಟು ಕಾರ್ತಿಕ್ ಅವರನ್ನ ತಂಡದಿಂದ ಹೊರಗೆ ತಳ್ಳಿದ್ದಕ್ಕೆ ಪ್ರತಾಪ್‌ ಅವರಿಗೆ ಬಹುತೇಕರು ಕಳಪೆ ನೀಡಿದರು.

ಕಳೆದ ವಾರ ನಮ್ರತಾ ಅವರ ತುಂಬಾ ತಮ್ಮ ಮೇಲೆಯೇ ಬೇಸರಿಸಿಕೊಂಡಿದ್ದರು. ʻಇಷ್ಟು ದಿನವಾದರೂ ನನಗೆ ಉತ್ತಮ ಸಿಕ್ಕಿಲ್ಲ, ಕಳಪೆಯೂ ಸಿಕ್ಕಿಲ್ಲ, ಕ್ಯಾಪ್ಟನ್ ಆಗಿಲ್ಲ, ಕಿಚ್ಚನ ಚಪ್ಪಾಳೆಯೂ ಲಭಿಸಿಲ್ಲ.. ನಾನಿಲ್ಲಿ ಏನು ಮಾಡುತ್ತಿದ್ದೇನೆʼ’ ಎಂದು ಜೋರಾಗಿ ಅತ್ತಿದ್ದರು. ಈ ವಾರ ಸ್ಟ್ರಾಟೆಜಿ ಬದಲಾಯಿಸಿಕೊಂಡು ಎದ್ದು ನಿಂತರು. ಅಷ್ಟೇ ಅಲ್ಲದೇ ತಮ್ಮ ಗ್ಯಾಂಗ್‌ ಬಿಟ್ಟ ಬಂದು, ವಿನಯ್‌ ಅವರನ್ನೇ ಹೊರಗಿಟ್ಟು ಆಡಿದರು. ನಮ್ರತಾಗೆ ಕಾರ್ತಿಕ್, ವರ್ತೂರು ಸಂತೋಷ್, ಡ್ರೋನ್ ಪ್ರತಾಪ್, ತುಕಾಲಿ ಸಂತು, ಪವಿ ಪೂವಪ್ಪ, ಸಿರಿ, ವಿನಯ್, ಸ್ನೇಹಿತ್ ಹಾಗೂ ತನಿಷಾ ಉತ್ತಮ ಪಟ್ಟ ಕೊಟ್ಟರು.

ತಂತ್ರಗಾರಿಕೆ ಮಾಡುವಲ್ಲಿ ಪ್ರತಾಪ್ ಸೋಲು

ಹಿಂದಿನ ವಾರವಷ್ಟೇ ಅತ್ಯಧಿಕ ವೋಟ್‌ ಪಡೆದ ಪ್ರತಾಪ್‌, ಈ ವಾರ ಜೈಲು ಸೇರಿದ್ದಾರೆ. ನೀರು ಸರಿಯಾಗಿ ಎರಚಿಲ್ಲ ಎಂಬ ಕಾರಣಕ್ಕೆ ವರ್ತೂರ್‌ ಕಳಪೆ ಕೊಟ್ಟರು. ಪ್ರತಾಪ್‌ ಉತ್ತಮ ತಂತ್ರಗಾರ ಅಂತ ತಂಡಕ್ಕೆ ಹೋಗಿದ್ದೆ. ತಂತ್ರಗಾರಿಕೆ ಮಾಡುವಲ್ಲಿ ಪ್ರತಾಪ್ ಎಡವಿ ಸರಣಿ ಸೋಲಿಗೆ ಕಾರಣವಾದರು ಎಂದು ಕಾರ್ತಿಕ್‌ ಕಾರಣ ಕೊಟ್ಟರು. ಕ್ಯಾಪ್ಟನ್ಸಿ ಓಟದಿಂದ ನನ್ನನ್ನ ಪ್ರತಾಪ್ ಹೊರಗಿಟ್ಟಿದ್ದು ಬೇಜಾರಾಯ್ತು… ಆ ಕ್ಷಣಕ್ಕೆ! ಆಮೇಲೆ ನಾನು ಮೂವ್ ಆನ್ ಆದೆ ಎಂದು ನಮ್ರತಾ ಕಾರಣ ಕೊಟ್ಟರು. ಕಾರ್ತಿಕ್‌ ಅವರನ್ನು ಹೊರಗೆ ಕೂರಿಸಿದ್ದು ಪ್ರತಾಪ್ ತಂಡದ ಸರಣಿ ಸೋಲಿಗೆ ಕಾರಣವಾಯ್ತು ಎಂದು ನನಗೆ ಅನಿಸುತ್ತೆ ಎಂದರು ವಿನಯ್‌. ಮೈಕಲ್, ಅವಿನಾಶ್ ಶೆಟ್ಟಿ, ಸ್ನೇಹಿತ್, ತನಿಷಾ, ತುಕಾಲಿ ಸಂತು ಮತ್ತು ಪವಿ ಪೂವಪ್ಪ ಕೂಡ ಡ್ರೋನ್ ಪ್ರತಾಪ್‌ಗೆ ಕಳಪೆ ಪಟ್ಟ ನೀಡಿದರು.

ಇದನ್ನೂ ಓದಿ: BBK SEASON 10: ತನಿಷಾ ಪರ ಆಡಿ ಬೆಸ್ಟಿ ವಿನಯ್‌ರನ್ನು ಹೊರಗಟ್ಟಿದ ನಮ್ರತಾ!

ಪ್ರತಾಪ್‌ ಹೊರತು ಪಡಿಸಿ ವಿನಯ್ ಅವರನ್ನ ಡ್ರೋನ್ ಪ್ರತಾಪ್ ಕಳಪೆ ಎಂದರು.ಸ್ನೇಹಿತ್ ಅವರಿಗೆ ಸಿರಿ ಕಳಪೆ ಪಟ್ಟ ಕೊಟ್ಟರು.ತುಕಾಲಿ ಸಂತುಗೆ ಸಂಗೀತಾ ಕಳಪೆ ಕೊಟ್ಟರು. ಅತ್ಯುತ್ತಮ ನಮ್ರತಾ ಹೊರತುಪಡಿಸಿ ಸಂಗೀತಾ ಪ್ರಕಾರ ಪವಿ ಪೂವಪ್ಪ, ನಮ್ರತಾ ಪ್ರಕಾರ ಸಿರಿ ಉತ್ತಮ. ಮೈಕಲ್ ಹಾಗೂ ಅವಿನಾಶ್ ಶೆಟ್ಟಿ ಪ್ರಕಾರ ಸ್ನೇಹಿತ್ ಉತ್ತಮ ಎಂದರು.

ʻʻಮಾತು ಒಂದು ಆಡಿ, ಬೇರೆ ಟೀಮ್‌ ಚೂಸ್‌ ಮಾಡುವುದಕ್ಕೆ ನನಗೆ ಬರಲ್ಲ. ಅದರ ಪ್ರಕಾರ ನಾನು ಟೀಮ್‌ ಸೆಲೆಕ್ಟ್ ಮಾಡಿದ್ದೀನಿ. ಎಲ್ಲರಿಗೂ ಒಂದು ಸಮನಾದ ಅವಕಾಶ ಇರಲಿ ಎನ್ನುವ ದೃಷ್ಟಿಯಿಂದ ನಾನು ಟೀಮ್ ಸೆಲೆಕ್ಟ್ ಮಾಡಿರೋದು. ನಮ್ರತಾ ಅವರನ್ನ ಕೂರಿಸಿದಾಗ, ಹಳ್ಳಿ ಟಾಸ್ಕ್‌ನಲ್ಲಿ ನಮ್ರತಾ ಅವರನ್ನು ಹೊರ ತೆಗೆದಾಗ ಪ್ರತಿಭಟನೆ ಆಗಲೇ ಇಲ್ಲ. ನಗುನಗುತ್ತಾ ಕೂತರುʼʼ ಎಂದು ಕಾರಣ ಕೊಟ್ಟರು ಪ್ರತಾಪ್‌.

ಮನೆಯವರ ನಿರ್ಧಾರಕ್ಕೆ ಬದ್ಧನಾಗಿ ಪ್ರತಾಪ್ ಜೈಲುಡುಗೆಯೇನೋ ತೊಟ್ಟಿದ್ದಾರೆ. ಆದರೆ ಅವರ ನಿರ್ಧಾರ ನನಗೆ ಸಮ್ಮತ ಅನಿಸಿಲ್ಲ ಎಂದೂ ಗಟ್ಟಿಯಾಗಿಯೇ ಹೇಳಿದ್ದಾರೆ. ‘ನನ್ನ ಪ್ರಕಾರ ನಾನು ತೆಗೆದುಕೊಂಡ ನಿರ್ಧಾರಗಳು ಸರಿ ಇತ್ತು. ಎಲ್ಲರೂ ಸೇರಿ ನನಗೆ ಕಳಪೆ ಕೊಟ್ಟಿದ್ದು ಬೇಜಾರಾಗಿದೆ. ಇದಕ್ಕೆ ನನಗೆ ಸಮ್ಮತಿ ಇಲ್ಲ’ ಎಂದು ಹೇಳಿ ಅವರು ಜೈಲಿನೊಳಗೆ ಹೋಗಿ ಕೂತಿದ್ದಾರೆ.

ಇದನ್ನೂ ಓದಿ: BBK SEASON 10: ʻಬೆಂಕಿʼ ತನಿಷಾರನ್ನ ಮಿಸ್‌ ಮಾಡ್ಕೋತ್ತಿದ್ದಾರಂತೆ ವರ್ತೂರ್‌ ಸಂತೋಷ್‌!

ಕ್ಯಾಪ್ಟೆನ್ಸಿ ಟಾಸ್ಕ್​ನ ಕೊನೆಯ ಟಾಸ್ಕ್​ನಲ್ಲಿ ತನಿಷಾ ಪರವಾಗಿ ನಮ್ರತಾ ಆಡಿದರು. ಎದುರಾಳಿಯಾಗಿ ಇದ್ದಿದ್ದು ಸ್ನೇಹಿತ್. ಟಾಸ್ಕ್​ನಲ್ಲಿ ಆರಂಭದಲ್ಲಿ ನಮ್ರತಾ ಮುಂದಿದ್ದರು, ಆದರೆ ಮೈಕಲ್​ರ ಸಲಹೆಯಂತೆ ಆಟದಲ್ಲಿ ಬದಲಾವಣೆ ಮಾಡಿಕೊಂಡ ಸ್ನೇಹಿತ್ ಸುಲಭಕ್ಕೆ ಗೆದ್ದು ಮನೆಯ ಕ್ಯಾಪ್ಟನ್ ಆದರು. ಗೆಲುವನ್ನು ವಿನಯ್​ಗೆ ಅರ್ಪಿಸಿದರು.

ಬಿಗ್​ಬಾಸ್ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version