Site icon Vistara News

Puneeth Parva | ಅಪ್ಪು ಸ್ಮರಣಾರ್ಥ ರಾಜ್ಯದ 25 ಜಿಲ್ಲೆಗಳಿಗೆ ಆಂಬ್ಯುಲೆನ್ಸ್‌, ಯಶ್‌ ಮಹತ್ವದ ಘೋಷಣೆ

Surya Yash

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಯಶ್‌ ಅವರು ಪುನೀತ್‌ ರಾಜಕುಮಾರ್‌ (Puneeth Parva) ಅಭಿಮಾನಿ ಎಂಬುದು ಎಲ್ಲರಿಗೂ ಗೊತ್ತು. ಹಾಗೆಯೇ, ಪುನೀತ್‌ ಅವರಂತೆ ಯಶ್‌ ಸಹ ಹತ್ತಾರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಈಗ ಪುನೀತ್‌ ರಾಜಕುಮಾರ್‌ ಅವರ ಸ್ಮರಣಾರ್ಥ ರಾಜ್ಯದ 25 ಜಿಲ್ಲೆಗಳಿಗೆ ತಲಾ ಒಂದು ಆಂಬ್ಯುಲೆನ್ಸ್‌ ನೀಡುತ್ತೇನೆ ಎಂದು ಯಶ್‌ ಘೋಷಿಸಿದ್ದಾರೆ.

ಬಹುಭಾಷಾ ನಟ ಪ್ರಕಾಶ್‌ ರೈ ಅವರು ಪುನೀತ್‌ ರಾಜಕುಮಾರ್‌ ಅವರ ಸ್ಮರಣಾರ್ಥ ರಾಜ್ಯದ ಪ್ರತಿಯೊಂದು ಜಿಲ್ಲೆಗಳಿಗೂ ಒಂದು ಆಂಬ್ಯುಲೆನ್ಸ್‌ ನೀಡುತ್ತಿದ್ದಾರೆ. ಅವರಿಗೆ ಶಿವರಾಜ್‌ ಕುಮಾರ್‌, ತಮಿಳು ನಟ ಸೂರ್ಯ, ತೆಲುಗು ನಟ ಚಿರಂಜೀವಿ ಅವರು ತಲಾ ಒಂದು ಆಂಬ್ಯುಲೆನ್ಸ್‌ ನೀಡುತ್ತಿದ್ದಾರೆ. ಇದನ್ನು ಪ್ರಕಾಶ್‌ ರೈ ಅವರು ಪುನೀತ ಪರ್ವದಲ್ಲಿ ಹೇಳಿದ್ದರು.

ಇದೇ ವೇಳೆ ಮಾತನಾಡಿದ ಯಶ್‌, “ಯಾರೂ ತಪ್ಪಾಗಿ ಭಾವಿಸಬಾರದು. ಪುನೀತ್‌ ರಾಜಕುಮಾರ್‌ ಅವರ ಹೆಸರಿನಲ್ಲಿ ರಾಜ್ಯಾದ್ಯಂತ ಉಳಿದ ಜಿಲ್ಲೆಗಳಿಗೆ ಎಷ್ಟು ಆಂಬ್ಯುಲೆನ್ಸ್‌ ಕೊಡಬೇಕೋ, ಅವುಗಳನ್ನು ನನ್ನ ಯಶೋಮಾರ್ಗದಿಂದ ನೀಡುತ್ತೇನೆ. ಇದನ್ನು ಯಾರೂ ಅನ್ಯಥಾ ಭಾವಿಸಬಾರದು” ಎಂದರು. ಇದೇ ವೇಳೆ, ಕರ್ನಾಟಕದಾದ್ಯಂತ ನೀಡಲು ಇನ್ನೂ 25 ಆಂಬ್ಯುಲೆನ್ಸ್‌ ಬೇಕು ಅಂದಾಗ, ” ಅಷ್ಟನ್ನೂ ನಾವೇ ಕೊಡುತ್ತೇವೆ” ಎಂದು ಯಶ್‌ ಘೋಷಿಸಿದರು.

ಇದನ್ನೂ ಓದಿ | Puneeth Parva | ಗಂಧದಗುಡಿ ಎಲ್ಲ ರೆಕಾರ್ಡ್‌ ಬ್ರೇಕ್‌ ಮಾಡಲಿ, ಅಪ್ಪು ಚಿರಸ್ಥಾಯಿಯಾಗಲಿ ಎಂದು ಆಶಿಸಿದ ಯಶ್‌

Exit mobile version