Site icon Vistara News

Nayanathara marriage | ನೀರಿನಲ್ಲಿ ನಡೆದ ಜೋಡಿ, ಚಂದದ ಡ್ರೆಸ್‌ಗೆ ಫ್ಯಾನ್ಸ್‌ ಖುಷ್‌

ನಯನತಾರಾ

ಬೆಂಗಳೂರು: ಖ್ಯಾತ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್‌ ಅವರ ಅದ್ಧೂರಿ ವಿವಾಹ ಸಂಭ್ರಮದ (Nayanathara marriage) ಬಳಿಕ ಇದೀಗ ಅವರ ಫೋಟೊ ಶೂಟ್‌ ಮತ್ತು ಧರಿಸಿದ ಡ್ರೆಸ್‌ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜೋಡಿ ಗುರುವಾರ ಬೆಳಗ್ಗೆ 8.30ಕ್ಕೆ ಸಪ್ತಪದಿ ತುಳಿದಿದ್ದರೂ ಅಧಿಕೃತ ಫೋಟೊಗಳು ಬಿಡುಗಡೆಯಾಗಿರಲಿಲ್ಲ. ಸಂಜೆ ಹೊತ್ತಿಗೆ ವಿಘ್ನೇಶ್‌ ತಮ್ಮ ಇನ್‌ಸ್ಟಾ ಗ್ರಾಂ ಮೂಲಕ ಫೋಟೊ ರಿವೀಲ್‌ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಫುಲ್‌ ಖುಷ್‌ ಆದರು. ಬಳಿಕ ಅವರಿಬ್ಬರ ಡ್ರೆಸ್‌ ಬಗ್ಗೆ ಭಾರಿ ಚರ್ಚೆ ನಡೆಯಿತು.

ಕ್ಯೂಟ್‌ ಕಪಲ್‌, ಕ್ಯೂಟ್‌ ಡ್ರೆಸ್‌

ಫೊಟೊ ವಿಘ್ನೇಶ್‌ ತಮ್ಮ ವಿವಾಹದ ಫೋಟೊಗಳನ್ನು ಇನ್‌ಸ್ಟಾ ಮೂಲಕ ರಿವೀಲ್‌ ಮಾಡುತ್ತಿದ್ದಂತೆಯೇ ಜನರು ಕ್ಯೂಟ್‌ ಕಪಲ್‌ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಘ್ನೇಶ್‌ ಅವರು ವೇಷ್ಟಿ, ಕುರ್ತಾ ಮತ್ತು ಶಾಲು ಧರಿಸಿ ಮಿಂಚುತ್ತಿದ್ದರೆ, ಕುಂಕುಮ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು ನಯನತಾರಾ.

ಜೋಡಿಯ ವಸ್ತ್ರ ವಿನ್ಯಾಸ ಮಾಡಿದ ಡಿಸೈನರ್‌ಗಳಾದ ಮೋನಿಕಾ ಮತ್ತು ಕರೀಷ್ಮಾ , ವರ ವಿಘ್ನೇಶ್‌ ಶಿವನ್‌ ಅವರ ಉಡುಗೆ ಕುರಿತು ಧರ್ಮ, ಅರ್ಥ, ಕರ್ಮ, ಮೋಕ್ಷ ಎನ್ನುವ ನಾಲ್ಕು ಅರ್ಥಗಳನ್ನು ಹೊಂದಿದೆ ಎಂದು ತಮ್ಮ ಇನ್‌ಸ್ಟಾ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

ಹೊಯ್ಸಳ ಕೆತ್ತಲೆ ಪ್ರೇರಣೆ

ನಯನತಾರಾ ಅವರ ಕುಂಕುಮ ಬಣ್ಣದ ಸೀರೆ ಮತ್ತು ಅದಕ್ಕೊಪ್ಪುವಂತೆ ಧರಿಸಿದ್ದ ಡಿಸೈನರ್‌ ಚೈನ್‌ಗಳು ಎಲ್ಲರ ಕಣ್ಮನ ಸೆಳೆದಿವೆ. ಈ ವಿನ್ಯಾಸದ ಹಿನ್ನೆಲೆ ಬಿಚ್ಚಿಟ್ಟ ಡಿಸೈನರ್ಸ್‌, ಹೊಯ್ಸಳ ದೇವಾಲಯಗಳ ಕೆತ್ತನೆಗಳಿಂದ ಪ್ರೇರಿತವಾಗಿ ಸಾರಿಯ ಡಿಸೈನ್‌ ಮಾಡಲಾಗಿದ್ದು, ಸಂಪ್ರದಾಯ ಬದ್ಧವಾಗಿ, ರವಿಕೆಯ ಮೇಲೆ ಲಕ್ಷ್ಮೀ ದೇವಿಯ ರೂಪಗಳನ್ನು ಡಿಸೈನ್‌ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Nayanthara marriage | ವಿಘ್ನೇಶ್‌ ಕೈ ಹಿಡಿದ ನಯನತಾರಾ: ಹರಸಿದ ರಜನಿ, ಶಾರುಖ್‌, ಮಣಿರತ್ನಂ

ಶಾರುಖ್‌ ಹಾಗೂ ರಜನಿಕಾಂತ್‌ ಹಾರೈಕೆ

ಸೂಪರ್‌ ಸ್ಟಾರ್‌ ರಜನಿಕಾಂತ್‌ ಹಾಗೂ ಶಾರುಖ್‌ ದಂಪತಿಗಳಿಗೆ ಹಾರೈಸಿದ್ದಾರೆ. ಶಾರುಖ್‌ ಅವರ ಜವಾನ್‌ ಚಿತ್ರದಲ್ಲಿ ನಯನತಾರಾ ನಟಿಯಾಗಲಿದ್ದಾರೆ ಎಂದು ಸುದ್ದಿ ಕೂಡ ಹಬ್ಬಿತ್ತು.

ಜವಾನ್‌ ನಿರ್ದೇಶಕ ಅಟ್ಲೀ ಕೂಡ ಶಾರುಖ್‌ ಜತೆ ಪೋಟೊ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಮದುವೆ ಸಮಾರಂಭದಲ್ಲಿ ಸೂರ್ಯ, ವಿಜಯ್, ಮಣಿರತ್ನಂ ಮತ್ತು ಇತರ ಅನೇಕ ಗಣ್ಯ ಅತಿಥಿಗಳು ಮದುವೆಯಲ್ಲಿ ಕಾಣಿಸಿಕೊಂಡರು.

ಶುಭಾಶಯಗಳ ಸುರಿಮಳೆ

ಚೆನ್ನೈನಲ್ಲಿ ನಡೆದ ಅದ್ಧೂರಿ ಮದುವೆಗೆ ನಟ ನಟಿಯರ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ನಯನತಾರಾ ಅವರ ಕನಸಿನ ಮುದುವೆಗೆ ನಟಿಯರಾದ ಕತ್ರಿನಾ ಕೈಫ್‌, ಸಮಂತಾ ಪ್ರಭು ಮತ್ತು ಪೂಜಾ ಹೆಗ್ಡೆ ಸೇರಿದಂತೆ ಅನೇಕ ಗಣ್ಯರು ಸುಂದರ ಜೋಡಿ ಎಂದು ಅಭಿನಂದಿಸಿದ್ದಾರೆ.

ಸೂಪರ್‌ಸ್ಟಾರ್‌ ರಜನಿಕಾಂತ್‌ , ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌, ಕಲಾವಿದರಾದ ಕಾರ್ತಿ, ಶರತ್‌ ಕುಮಾರ್, ಅಟ್ಲಿ, ವಿಜಯ್ ಸೇತುಪತಿ, ಮಣಿರತ್ನಂ ಸೇರಿದಂತೆ ಹಲವರು ಮದುವೆ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಿದರು.

ತಿರುಪತಿಯ ಅರ್ಚಕರ ಪೌರೋಹಿತ್ಯ

ನಯನತಾರಾ ಮತ್ತು ವಿಘ್ನೇಶ್‌ ತಿರುಪತಿಯಲ್ಲಿ ಮದುವೆಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಅದು ಸಾಧ್ಯವಾಗದ ಕಾರಣ ತಿರುಪತಿಯಿಂದಲೇ ಅರ್ಚಕರನ್ನು ಆಹ್ವಾನಿಸಿರುವುದಾಗಿ ವರದಿಯಾಗಿದೆ. ಟೈಮ್ಸ್‌ ಆಫ್‌ ಇಂಡಿಯಾ ಪ್ರಕಾರ, ʼತಿರುಟ್ಟಣಿ, ವಡಪಳನಿ, ಮೈಲಾಪುರ್‌, ಕಾಳಿಕಾಂಬಳ್‌ ದೇವಸ್ಥಾನದ 20 ಪುರೋಹಿತರು ಬೆಳಗ್ಗೆ 8.30 ರ ಸುಮಾರಿಗೆ ಹಿಂದೂ ಧಾರ್ಮಿಕ ಕ್ರಿಯೆಗಳನ್ನು ನೇರವೇರಿಸಿದ್ದಾರೆʼ ಎಂದು ವರದಿ ಮಾಡಿದೆ.

ಇದನ್ನೂ ಓದಿ | Nayanthara marriage | ಇಲ್ಲಿವೆ ʼನಯನʼಮನೋಹರ ಫೋಟೋಗಳು

ʼಕ್ರೇಜಿ ರಿಚ್‌ ಏಷ್ಯನ್ಸ್‌ʼ ಸ್ಫೂರ್ತಿ ಪಡೆದರಾ ಜೋಡಿ

ನಯನ ತಾರಾ ಮತ್ತು ವಿಘ್ನೇಶ್‌ ಹೂವಿನ ಗಿಡಗಳ ಸಾಲಿನ ನಡುವೆ ನೀರಿನಿಂದ ತುಂಬಿದ ನೆಲದ ಮೇಲೆ ನಡೆದುಬರುವ ಚಿತ್ರ ಎಲ್ಲರ ಗಮನ ಸೆಳೆದಿದೆ. ಜನರ ಈ ಫೋಟೊಗಳಿಗೆ ಫಿದಾ ಆಗಿದ್ದಾರೆ. ಈ ನಡುವೆ, ಈ ಕಾನ್ಸೆಪ್ಟ್‌ ʼಕ್ರೇಜಿ ರಿಚ್‌ ಏಷ್ಯನ್ಸ್‌ʼ ಚಿತ್ರದಿಂದ ಕಾಪಿ ಮಾಡಿದ್ದಾ ಎಂಬ ಪ್ರಶ್ನೆಯೂ ಅಭಿಮಾನಿಗಳನ್ನು ಕಾಡಿದೆ. ಈ ಚಿತ್ರದಲ್ಲಿ ನಟ ಕಾನ್‌ಸ್ಟಾನ್ಸ್‌ ವು ಮತ್ತು ನಟಿ ಮಿಶೆಲ್‌ ಯೋ ಅವರು ನೀರಿನಲ್ಲಿ ನಡೆದುಬರುವ ದೃಶ್ಯವಿದೆ.

ಇದನ್ನೂ ಓದಿ | Kushi Movie : ಶೂಟಿಂಗ್‌ ವೇಳೆ ಅವಘಡದಲ್ಲಿ ವಿಜಯ್‌ ದೇವರಕೊಂಡ -ಸಮಂತಾಗೆ ಗಾಯ

Exit mobile version