Site icon Vistara News

Encounter | ಪೊಲೀಸರ ಮೇಲೆ ಲಾಂಗ್ ಬೀಸಿದ ಕೊಲೆ ಆರೋಪಿ ಕಾಲಿಗೆ ಗುಂಡು

police encounter

ಬೆಂಗಳೂರು: ಕೊಲೆ ಪ್ರಕರಣದ ಆರೋಪಿ ರಾಜರಾಜನ್ ಅಲಿಯಾಸ್‌ ಸೇಠು ಎಂಬಾತನ ಕಾಲಿಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಈತ ಪೊಲೀಸರ ಮೇಲೆ ಲಾಂಗ್‌ ಬೀಸಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ.

ಬೆಂಗಳೂರು ಉತ್ತರ ತಾಲೂಕು ಮಾದವಾರದ ನವಿಲೇ ಬಡಾವಣೆಯಲ್ಲಿ ಫೈರಿಂಗ್‌ ನಡೆದಿದೆ. ಆರೋಪಿ ರಾಜರಾಜನ್, ಮಾಚೋಹಳ್ಳಿಯಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿ.

ರೌಡಿಶೀಟರ್ ನಟರಾಜ ಅಲಿಯಾಸ್‌ ಮುಳ್ಳನನ್ನ ರಾಜರಾಜನ್ ಗ್ಯಾಂಗ್ ಕೊಚ್ಚಿ ಕೊಲೆ ಮಾಡಿತ್ತು. ನವೆಂಬರ್ 15ರಂದು ಮಾಚೋಹಳ್ಳಿಯ ಕಟ್ಟಡವೊಂದರ ಮೇಲೆ ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ಆರೋಪಿ ರಾಜರಾಜನ್‌ನನ್ನು ಮಾದನಾಯಕನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದರು. ಕೃತ್ಯಕ್ಕೆ ಬಳಸಿದ್ದ ಲಾಂಗ್ ವಶಕ್ಕೆ ಪಡೆಯಲು ಆರೋಪಿಯೊಂದಿಗೆ ಪೊಲೀಸರು ತೆರಳಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹಾಜಿ ನಾಮ್ದಾರ್ ಮೇಲೆ ರಾಜರಾಜನ್ ಲಾಂಗ್‌ ಬೀಸಿದ್ದ. ಈ ಸಂದರ್ಭದಲ್ಲಿ ಮಾದನಾಯಕನಹಳ್ಳಿ ಇನ್‌ಸ್ಪೆಕ್ಟರ್ ಮಂಜುನಾಥ್‌ ಗುಂಡಿಟ್ಟು ಬಂಧಿಸಿದ್ದಾರೆ. ಕಾನ್‌ಸ್ಟೇಬಲ್ ಬಲಗೈಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.

ಇದನ್ನೂ ಓದಿ | Encounter | ಕುಖ್ಯಾತ ದರೋಡೆಕೋರನ ಕಾಲಿಗೆ ಪೊಲೀಸರಿಂದ ಗುಂಡೇಟು

Exit mobile version