Site icon Vistara News

ಚಾವಣಿ ಮೇಲೆ ಮಲಗುವ ವಿಚಾರಕ್ಕೆ ಜಗಳ; 25 ಬಾರಿ ಇರಿದು ಮಗಳನ್ನೇ ಕೊಂದ ಕಟುಕ ತಂದೆ

Woman Gang Raped In Madhya Pradesh

Gang Raping A Woman In Madhya Pradesh, BJP Leader's Son An Accused

ಗಾಂಧಿನಗರ: ಉತ್ತರ ದೆಹಲಿಯ ಶಹಬಾದ್‌ನಲ್ಲಿ ಯುವಕನೊಬ್ಬ 16 ವರ್ಷದ ಬಾಲಕಿಗೆ 21 ಬಾರಿ ಇರಿದು, ಕಲ್ಲು ಎತ್ತಿಹಾಕಿ ಕೊಂದ ಪ್ರಕರಣ ದೇಶಾದ್ಯಂತ ಸುದ್ದಿಯಾದ ಬೆನ್ನಲ್ಲೇ ಗುಜರಾತ್‌ನ ಸೂರತ್‌ನಲ್ಲಿ ಕಟುಕ ತಂದೆಯೊಬ್ಬ ಹೆತ್ತ ಮಗಳಿಗೇ 25 ಬಾರಿ ಚಾಕು ಇರಿದು ಕೊಂದಿದ್ದಾನೆ. ಮನೆಯ ಚಾವಣಿ ಮೇಲೆ ಮಲಗುವ ವಿಚಾರಕ್ಕೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದ್ದು, ಭೀಕರ ವಿಡಿಯೊ ಈಗ ವೈರಲ್‌ ಆಗಿದೆ.

ಸೂರತ್‌ನ ಕಡೋದರ ಪ್ರದೇಶದ ಸತ್ಯ ನಗರ ಸೊಸೈಟಿಯಲ್ಲಿ ರಾಮಾನುಜ ಹಾಗೂ ಅವರ ಕುಟುಂಬಸ್ಥರು ವಾಸಿಸುತ್ತಿದ್ದಾರೆ. ಚಾವಣಿ ಮೇಲೆ ಮಲಗುವ ವಿಚಾರಕ್ಕೆ ಸಂಬಂಧಿಸಿದಂತೆ ರಾಮಾನುಜ ಹಾಗೂ ಆತನ ಮಗಳ ಜತೆ ವಾಗ್ವಾದ ನಡೆದಿದೆ. ಇದೇ ವೇಳೆ ರಾಮಾನುಜನು 19 ವರ್ಷದ ಮಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಆಗ, ಕುಟುಂಬಸ್ಥರು ರಾಮಾನುಜನನ್ನು ತಡೆಯಲು ಬಂದಾಗ ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಕುಟುಂಬ ಸದಸ್ಯರು ದೂರ ಓಡುತ್ತಲೇ ಮಗಳ ಮೇಲೆ ಎರಗಿದ ಆತ, 25 ಬಾರಿ ಚಾಕು ಇರಿದು ಕೊಲೆ ಮಾಡಿದ್ದಾನೆ.

ಇಲ್ಲಿದೆ ಕ್ರೌರ್ಯದ ವಿಡಿಯೊ

ಮಗಳು ಸಾಯುವತನಕ ಚಾಕು ಇರಿದ ಆತ ಬಳಿಕ ಚಾವಣಿ ಮೇಲೆ ಇದ್ದ ಹೆಂಡತಿ ಮೇಲೂ ದಾಳಿ ನಡೆಸಿದ್ದಾನೆ. ರಾಮಾನುಜನ ಬೇರೆ ಮಕ್ಕಳು ಆಗ ಜಗಳ ಬಿಡಿಸಿದ್ದಾರೆ. ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ಬಳಿಕ ವಿಷಯ ತಿಳಿದ ಪೊಲೀಸರು ಅಪಾರ್ಟ್‌ಮೆಂಟ್‌ಗೆ ಆಗಮಿಸಿ ರಾಮಾನುಜನನ್ನು ಬಂಧಿಸಿದ್ದಾರೆ. ಸಿಸಿಟಿವಿಯಲ್ಲಿ ಮನಕಲಕುವ ದೃಶ್ಯ ಸೆರೆಯಾಗಿದೆ. ಚಾವಣಿ ಮೇಲೆ ಮಲಗುವ ವಿಚಾರಕ್ಕೇ ಜಗಳ ನಡೆದಿದೆ ಎಂದು ಪೊಲೀಸರು ಕೂಡ ತಿಳಿಸಿದ್ದಾರೆ.

ಇದನ್ನೂ ಓದಿ: Delhi Murder: ಮಾಜಿ ಗೆಳತಿಗೆ 21 ಬಾರಿ ಚಾಕು ಇರಿದು ಕೊಂದಿದ್ದಕ್ಕೆ ಪಶ್ಚಾತ್ತಾಪ ಇಲ್ಲ ಎಂದ ಆರೋಪಿ ಸಾಹಿಲ್

ದೆಹಲಿಯಲ್ಲೂ ಸಾಹಿಲ್‌ ಎಂಬ ಯುವಕನು ತಾನು ಪ್ರೀತಿಸುತ್ತಿದ್ದ ಸಾಕ್ಷಿ ಎಂಬ 16 ವರ್ಷದ ಬಾಲಕಿಯನ್ನು ಇದೇ ರೀತಿ ಕ್ರೂರವಾಗಿ ಕೊಂದಿದ್ದ. ಸಾಕ್ಷಿಯನ್ನು ಅಡ್ಡಗಟ್ಟಿದವನೇ ಸತತವಾಗಿ ಚಾಕುವಿನಿಂದ ಇರಿದಿದ್ದ. ಜನಸಂದಣಿ ಪ್ರದೇಶಲ್ಲಿಯೇ ಬಾಲಕಿಗೆ ಚಾಕು ಇರಿದಿದ್ದು, ಜನ ಬಿಡಿಸಲು ಬಂದರೂ ಆತನು ಚಾಕು ಇರಿದಿದ್ದ ಸುಮಾರು ಸಲ ಚಾಕು ಇರಿದ ಬಳಿಕ ತಲೆಗೆ ಒದ್ದಿದ್ದ, ಕೆಳಗೆ ಹಾಕಿ ತುಳಿದಿದ್ದ. ಪದೇಪದೆ ಕಲ್ಲು ಎತ್ತಿ ಹಾಕಿದ್ದ ಬಾಲಕಿ ಮೃತಪಟ್ಟಿದ್ದನ್ನು ನೋಡಿ ಸ್ವಲ್ಪ ದೂರ ಹೋದ ಯುವಕನು ಮತ್ತೆ ಬಂದು ಕಲ್ಲು ಎತ್ತಿಹಾಕಿ ಕ್ರೌರ್ಯ ಮೆರೆದಿದ್ದಾನೆ. ಪೊಲೀಸರು ಸಾಹಿಲ್‌ನನ್ನು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.

ಪೊಲೀಸರು ಸಾಹಿಲ್​​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ‘ಕಳೆದ ಕೆಲವು ದಿನಗಳಿಂದ ಸಾಕ್ಷಿ ನನ್ನನ್ನು ನಿರ್ಲಕ್ಷ್ಯ ಮಾಡುತ್ತಿದ್ದಳು. ಆಕೆಯ ನಿರ್ಲಕ್ಷ್ಯವನ್ನು ಸಹಿಸಲಾಗುತ್ತಿರಲಿಲ್ಲ. ಅದಕ್ಕೆ ಕೊಲೆ ಮಾಡಿದೆ’ ಎಂದು ಹೇಳಿಕೊಂಡಿದ್ದಾನೆ.

Exit mobile version