Site icon Vistara News

Horrible Murder Case: ಶೆಡ್‌ ಹೊರಗಿನಿಂದ ಲಾಕ್‌ ಮಾಡಿ ಬೆಂಕಿ ಇಟ್ಟ ದುಷ್ಟರು; ಇಬ್ಬರು ಸಜೀವ ದಹನ

murder case set fire bagalakote

ಬಾಗಲಕೋಟೆ: ಪಾತಕಿಗಳು ಶೆಡ್‌ನ ಬಾಗಿಲು ಹೊರಗಿನಿಂದ ಲಾಕ್‌ ಮಾಡಿ ಬೆಂಕಿ ಕೊಟ್ಟ (set fire) ಪರಿಣಾಮ ಒಂದೇ ಕುಟುಂಬದ ಇಬ್ಬರು ಸಜೀವವಾಗಿ (Burn to death) ಸುಟ್ಟುಹೋಗಿದ್ದಾರೆ. ಇನ್ನೂ ಇಬ್ಬರು ಸುಟ್ಟ ಗಾಯಗಳೊಂದಿಗೆ ಸಾವು ಬದುಕಿನ ನಡುವೆ ಸೆಣಸಾಡುತ್ತಿದ್ದಾರೆ. ಈ ಭಯಾನಕ ಹತ್ಯಾಕಾಂಡ ಪ್ರಕರಣ (Horrible Murder Case) ಬಾಗಲಕೋಟೆ (Bagalakote news) ಜಿಲ್ಲೆ ಮುಧೋಳ (Mudhol news) ತಾಲ್ಲೂಕಿನ ಬೆಳಗಲಿಯಲ್ಲಿ ನಡೆದಿದೆ.

ಬೆಳಗಲಿ ಪಟ್ಟಣದ ತೋಟದ ಮನೆಯಲ್ಲಿ ಈ ಘೋರ ಕೃತ್ಯ ಎಸಗಲಾಗಿದೆ. ಕುಟುಂಬ ಸಮೇತ ಸುಟ್ಟು ಹಾಕುವ ಉದ್ದೇಶದಿಂದಲೇ ದುಷ್ಟರು ತಡರಾತ್ರಿ ತಗಡಿನ ಶೆಡ್‌ನ ಬಾಗಿಲು ಹೊರಗಿನಿಂದ ಲಾಕ್‌ ಮಾಡಿ, ಪೆಟ್ರೋಲ್ ಸುರಿದು ಶೆಡ್‌ಗೆ ಬೆಂಕಿ ಹಚ್ಚಿದ್ದಾರೆ. ದುರಂತದಲ್ಲಿ ಜೈಬಾನ್ ಪೆಂಡಾರಿ (60), ಶಭಾನಾ ಪೆಂಡಾರಿ (22) ಸಾವಿಗೀಡಾಗಿದ್ದಾರೆ. ದಸ್ತಗೀರ್ ಸಾಬ್ ಪೆಂಡಾರಿ (60), ಶುಭನ್ ಪೆಂಡಾರಿ (26) ತೀವ್ರವಾಗಿ ಸುಟ್ಟ ಗಾಯಗಳೊಂದಿಗೆ ಮುಧೋಳ ತಾಲ್ಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಎಸ್ಪಿ ಅಮರನಾಥ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ 2:30ರ ಸುಮಾರಿಗೆ ಈ ಬರ್ಬರ ಕೃತ್ಯ ಎಸಗಲಾಗಿದೆ. ನೀಚರು ಮೊದಲಿಗೆ ಶೆಡ್ ಹೊರಗಿನಿಂದ ಲಾಕ್ ಮಾಡಿ, ಶೆಡ್ ಪಕ್ಕದಲ್ಲಿದ್ದ ಸಿಂಟ್ಯಾಕ್ಸ್‌ಗೆ ಸುಮಾರು 100 ಲೀಟರ್ ಪೆಟ್ರೋಲ್ ಸುರಿದಿದ್ದಾರೆ. 2 ಎಚ್‌ಪಿ ಮೆಷಿನ್‌ನಿಂದ ಶೆಡ್ ಸುತ್ತ ಪೆಟ್ರೋಲ್ ಹೊಡೆದು ಬೆಂಕಿ ಹಚ್ಚಿರುವ ಶಂಕೆ ಇದೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ಶೆಡ್ ಸುಟ್ಟು ಕರಕಲಾಗಿದೆ.

ಮೃತರು ಹಾಗೂ ಗಾಯಾಳುಗಳು ಒಂದೇ ಕುಟುಂಬದವರು. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪರಿಚಿತರೇ ಕೃತ್ಯ ಎಸಗಿರುವ ಶಂಕೆ ಇದೆ. ಕುಟುಂಬದ ಬಗೆಗೆ ವೈಯಕ್ತಿಕ ದ್ವೇಷ ಹೊಂದಿದ್ದವರು, ಕುಟುಂಬವನ್ನು ಸ್ಥಳದಿಂದ ಒಕ್ಕಲೆಬ್ಬಿಸಲು ಬಯಸಿದವರು, ಕೌಟುಂಬಿಕ ದ್ವೇಷ ಹಾಗೂ ಜಮೀನು ವ್ಯಾಜ್ಯ ಹೊಂದಿದವರನ್ನು ಪ್ರಶ್ನಿಸಲಾಗುತ್ತಿದೆ.

ಬೆಂಗಳೂರಲ್ಲಿ ಹಾಡಹಗಲೇ‌‌ ಪುಂಡಾಟ, 15 ಮಂದಿಯಿಂದ ಯುವಕನ ಮೇಲೆ ಹಲ್ಲೆ

ಬೆಂಗಳೂರು: ಬೆಂಗಳೂರಿನ ಬೀದಿಯಲ್ಲಿ ಹಾಡಹಗಲೇ ನಡೆದ ರಾಜಾರೋಷ ಹಲ್ಲೆಯೊಂದರ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಇದು ಮೆಟ್ರೋ ನಗರದ ಮಾನ ತೆಗೆಯುತ್ತಿದೆ. ವಿದ್ಯಾರಣ್ಯಪುರದಲ್ಲಿ ಘಟನೆ ನಡೆದಿದೆ.

15 ಜನ ಪುಂಡರು ಒಬ್ಬ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಿಸಿಟಿವಿಯಲ್ಲೂ ಯುವಕನ ಮೇಲಿನ ಹಲ್ಲೆಯ ದೃಶ್ಯ ಸೆರೆಯಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ನರಸೀಪುರ ಬಳಿ ನಡೆದ ಘಟನೆಯಿದು. ಹಲ್ಲೆಗೊಳಗಾದವನು ಹಾಗೂ ಹಲ್ಲೆ ಮಾಡಿದವರ ಕುರಿತ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.

ಹಲ್ಲೆಯಿಂದ‌ ಯುವಕನ‌ ಮುಖ ಮತ್ತು ಮೂಗಿನ‌ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಆಯುಕ್ತರು ಮತ್ತು ಈಶಾನ್ಯ ಡಿಸಿಪಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ. ʼಬಿಎನ್‌ಎಸ್ 109 ಅಂದರೆ ಕೊಲೆ‌ ಯತ್ನ?ʼ ಎಂದು ಉಲ್ಲೇಖಿಸಿ ಪೋಸ್ಟ್‌ ಮಾಡಲಾಗಿದೆ.

ಇದನ್ನೂ ಓದಿ: Crime News: ಶಾಕಿಂಗ್‌; 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ ಅಪ್ರಾಪ್ತ ಬಾಲಕರು

Exit mobile version