Site icon Vistara News

Theft Case : ಕನ್ನಡ ಚಿತ್ರ ನಿರ್ಮಾಪಕ ಚಂದ್ರಶೇಖರ್‌ ಮನೆಗೆ ಕಳ್ಳರ ಲಗ್ಗೆ; ಬಾಗಿಲು ಒಡೆದು ಲೂಟಿ

Kannada film producers house burgled

ಮಂಡ್ಯ: ಚಿತ್ರ ನಿರ್ಮಾಪಕರೊಬ್ಬರ (Film producer) ಮನೆ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ನಗದು ಕಳವು (Theft Case) ಮಾಡಿರುವ ಘಟನೆ ನಡೆದಿದೆ. ಮಂಡ್ಯ ತಾಲ್ಲೂಕಿನ (Mandya News) ಹೊಸ ಬೂದನೂರು ಗ್ರಾಮದಲ್ಲಿ ಘಟನೆ ನಡೆದಿದ್ದು, ಚಿತ್ರ ನಿರ್ಮಾಪಕರಾಗಿರುವ ಚಂದ್ರಶೇಖರ್ (Film Producer Chandrashekhar) ಎಂಬವರ ಮನೆಯಲ್ಲಿ ಕಳವಾಗಿದೆ.

ಚಿತ್ರ ನಿರ್ಮಾಪಕರಾಗಿರುವ ಚಂದ್ರಶೇಖರ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರಿಗೆ ಮಂಡ್ಯದ ಬೂದನೂರಿನಲ್ಲೂ ಒಂದು ಮನೆ ಇದೆ. ಅವರು ವಾರಾಂತ್ಯ ಇಲ್ಲವೇ ಎರಡು ವಾರಕ್ಕೊಮ್ಮೆ ಹೊಸ ಬೂದನೂರು ಗ್ರಾಮಕ್ಕೆ ಬಂದು ಒಂದೆರಡು ದಿನ ವಾಸ್ತವ್ಯ ಮಾಡಿ ತೆರಳುತ್ತಿದ್ದರು.

ಕಳೆದ ಶನಿವಾರ ಅವರು ಈ ಮನೆಗೆ ಬಂದಿದ್ದರು. ಅವರು ಬಂದು ಹೋದ ಮೇಲೆ ಕಳ್ಳತನ ನಡೆದಿದೆ ಎಂದು ಹೇಳಲಾಗುತ್ತಿದೆ.

ಮನೆಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಸುಮಾರು 57 ಗ್ರಾಂ ಚಿನ್ನದ ಆಭರಣಗಳು ಹಾಗೂ 55 ಸಾವಿರ ರೂ. ನಗದು ಸೇರಿ ಒಟ್ಟು 3 ಲಕ್ಷ ರೂ. ಮೌಲ್ಯದ ನಗ ನಗದು ಕಳವು ಮಾಡಿದ್ದಾರೆ ಎಂದು ಚಂದ್ರಶೇಖರ್‌ ಅವರು ತಿಳಿಸಿದ್ದಾರೆ.

ಈ ಮನೆಗೆ ಸಿಸಿ ಟಿವಿ ಕ್ಯಾಮರಾಗಳಿವೆ. ಆದರೆ, ಕಳ್ಳರು ಸಿಸಿ ಕ್ಯಾಮರಾದ ಡಿವಿಆರ್‌ಗಳನ್ನು ಕೂಡಾ ಕದ್ದೊಯ್ದಿರುವುದಿರಂದ ಅದರಿಂದ ಯಾವುದೇ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಎರಡು ಮೂರು ದಿನದ ಹಿಂದೆ ಕಳವು ನಡೆದಿರುವ ಸಾಧ್ಯತೆಗಳಿವೆ. ಗುರುವಾರ ಪಕ್ಕದ ಮನೆಯವರು ನನ್ನ ಹೆಂಡತಿಗೆ ಕರೆ ಮಾಡಿ ಬಾಗಿಲು ಮುರಿಯಲಾಗಿದೆ ಎಂದು ತಿಳಿಸಿದರು. ಅದರ ಬಳಿಕ ಇಲ್ಲಿಗೆ ಬಂದಿದ್ದೇವೆ ಎಂದು ಅವರು ತಿಳಿಸಿದರು.

ಘಟನಾ ಸ್ಥಳಕ್ಕೆ‌ ಮಂಡ್ಯ ಗ್ರಾಮಸ್ಥರ ಠಾಣೆ ಪೊಲೀಸರು ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Road accident : ಇಬ್ಬರು ಮಕ್ಕಳ ಬಲಿ ಪಡೆದ ಅಪಘಾತಕ್ಕೆ ಟ್ವಿಸ್ಟ್‌ ; ಡಿಕ್ಕಿ ಹೊಡೆದು ಪರಾರಿಯಾಗಿದ್ದ ವಾಯುಪುತ್ರ ಶರಣು

Road Accident: ಸ್ಕೂಟಿಗೆ ಬಸ್ಸು ಡಿಕ್ಕಿ, ಯುವಕ ಸಾವು

ಶಿರಸಿ:‌ ಸ್ಕೂಟಿಯೊಂದಕ್ಕೆ ಕೆಎಸ್ಆರ್‌ಟಿಸಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವಿಗೀಡಾಗಿದ್ದಾರೆ. ರಸ್ತೆ ಅಪಘಾತ (Road Accident) ಶಿರಸಿಯ ಯಲ್ಲಾಪುರ ರಸ್ತೆಯ ಅಂಬೇಡ್ಕರ ಭವನ ಬಳಿ ಘಟನೆ ನಡೆದಿದೆ.

ಭೈರುಂಬೆ ಗ್ರಾ.ಪಂ ವ್ಯಾಪ್ತಿಯ ದೇವರ ಕೆರಿ ಗ್ರಾಮದ ಗಣೇಶ್ ಕರಾಳೆ(20) ಮೃತ ಯುವಕ. ಕೆಎಸ್ಆರ್ಟಿಸಿ‌ ಬಸ್ ಚಾಲಕನ ಎಡವಟ್ಟಿನಿಂದ ನಡೆದ ಘಟನೆ ಇದಾಗಿದ್ದು, ಯುವಕನಿಗೆ ತಲೆಗೆ ಗಂಭೀರ ಸ್ವರೂಪದ ಗಾಯವಾಯಿತು. ತೀವ್ರವಾಗಿ ಗಾಯಗೊಂಡ ಗಣೇಶ್‌, ಆಸ್ಪತ್ರೆ ಸಾಗಿಸುವಾಗ ದಾರಿಯಲ್ಲಿ ಮೃತಪಟ್ಟರು. ಶಿರಸಿ ಮಾರ್ಕೆಟ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version