Site icon Vistara News

ಜಾರ್ಖಂಡ್‌ನ ಡುಮ್ಕಾದಲ್ಲಿ ಬುಡಕಟ್ಟು ಬಾಲಕಿಯ ಹತ್ಯೆ, ವಾರದಲ್ಲಿ ಎರಡನೇ ಪ್ರಕರಣ!

Crime

ರಾಂಚಿ: ಜಾರ್ಖಂಡ್‌ನ ಡುಮ್ಕಾದಲ್ಲಿ ಯುವಕನೊಬ್ಬನ ಪ್ರೇಮ ನಿವೇದನೆ ನಿರಾಕರಿಸಿದ ಕಾರಣ ಯುವತಿಗೆ ಬೆಂಕಿ ಹಚ್ಚಿ ಹತ್ಯೆ ಮಾಡಿದ ಬೆನ್ನಲ್ಲೇ ಮತ್ತೊಬ್ಬ ಬಾಲಕಿಯನ್ನು ಹತ್ಯೆ ಮಾಡಲಾಗಿದೆ. ಡುಮ್ಕಾದಲ್ಲಿ ಶುಕ್ರವಾರ ಬೆಳಗ್ಗೆ 14 ವರ್ಷದ ಬುಡಕಟ್ಟು ಜನಾಂಗದ ಬಾಲಕಿಯ ಶವವು ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದರೆ, ಅರ್ಮಾನ್‌ ಅನ್ಸಾರಿ ಎಂಬಾತನು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ.

“ಶುಕ್ರವಾರ ಬೆಳಗಿನ ಜಾವ ಬಾಲಕಿಯ ಶವ ಪತ್ತೆಯಾಗಿದೆ. ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆಯಿದೆ. ಆರೋಪಿ ಅರ್ಮಾನ್‌ ಅನ್ಸಾರಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಮರಣೋತ್ತರ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ” ಎಂದು ಡಿಜಿಪಿ ಸುದರ್ಶನ್‌ ಮಂಡಲ್‌ ತಿಳಿಸಿದ್ದಾರೆ.

ಬಾಲಕಿಯು ಡುಮ್ಕಾದಲ್ಲಿ ಚಿಕ್ಕಮ್ಮನ ಜತೆ ಇರುತ್ತಿದ್ದಳು. ಅರ್ಮಾನ್‌ ಅನ್ಸಾರಿಯ ಪರಿಚಯವಾಗಿದ್ದು, ಸ್ನೇಹ ಪ್ರೇಮವಾಗಿ ಮಾರ್ಪಾಡಾಗಿತ್ತು. ಅಲ್ಲದೆ, ಬಾಲಕಿಯು ಇತ್ತೀಚೆಗೆ ಗರ್ಭಿಣಿಯಾಗಿದ್ದು, ಮದುವೆಯಾಗು ಎಂದು ಹೇಳಿದ್ದಳು. ಮದುವೆಯಾಗಲು ಮನಸ್ಸಿರದ ಅನ್ಸಾರಿಯು ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಕಳೆದ ವಾರ ಡುಮ್ಕಾದಲ್ಲಿ ಪಿಯುಸಿ ಓದುತ್ತಿದ್ದ ಯುವತಿ ಹಿಂದೆ ಬಿದ್ದಿದ್ದ ಶಾರುಖ್‌ ಎಂಬಾತ, ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಆಕೆಗೆ ಬೆಂಕಿ ಹಚ್ಚಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯು ಬಳಿಕ ಮೃತಪಟ್ಟಿದ್ದಳು. ಪ್ರಕರಣವು ಜನರ ಮನಸ್ಸಿನಿಂದ ಮಾಸಿಹೋಗುವ ಮುನ್ನವೇ ಮತ್ತೊಂದು ಹತ್ಯೆ ನಡೆದಿದೆ.

ಇದನ್ನೂ ಓದಿ | Shameless Smile | ಯುವತಿಗೆ ಬೆಂಕಿ ಹಚ್ಚಿ ಕೊಂದ ಆರೋಪಿ, ಪೊಲೀಸರು ಬಂಧಿಸಿದಾಗ ನಾಚಿಕೆಯಿಲ್ಲದೆ ನಕ್ಕ ವಿಡಿಯೊ ನೋಡಿ

Exit mobile version