Site icon Vistara News

ಪತಿಯನ್ನು ಕೊಂದು ಮನೆಯಲ್ಲೇ ಸುಡಲು ಯತ್ನಿಸಿದ ಮಹಿಳೆ, ಪೊಲೀಸರು ಬರದಂತೆ ಬಾಗಿಲಿಗೆ ವಿದ್ಯುತ್‌ ಸಂಪರ್ಕ ಕೊಟ್ಟ ಚಾಲಾಕಿ

Man murders his own father in honnavar

Mumbai Woman Arrested After Mother's Body Parts Found In Tank

ರಾಂಚಿ: ಜಾರ್ಖಂಡ್‌ನಲ್ಲಿ ಮಹಿಳೆಯೊಬ್ಬರು ತನ್ನ ಗಂಡನನ್ನು ಕೊಂದು, ಮನೆಯಲ್ಲೇ ಸುಡಲು ಯತ್ನಿಸಿದ್ದಾಳೆ. ಅಷ್ಟೇ ಅಲ್ಲ, ಪೊಲೀಸರು ಬಾಗಿಲು ಮುರಿದು ಒಳಗೆ ಬರಬಾರದು ಎಂದು ಬಾಗಿಲಿಗೆ ವಿದ್ಯುತ್‌ ಸಂಪರ್ಕ ನೀಡಿದ್ದಾಳೆ ಎಂದು ತಿಳಿದುಬಂದಿದೆ. ಆದಾಗ್ಯೂ, ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.

ಜಮ್ಶೆಡ್‌ಪುರದ ಸುಭಾಷ್‌ ಕಾಲೋನಿಯಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಅಮರ್‌ನಾಥ್‌ ಸಿಂಗ್‌ ಹಾಗೂ ಮೀರಾ ಸಿಂಗ್ ಮಧ್ಯೆ ಇತ್ತೀಚೆಗೆ ಜಗಳ ಜಾಸ್ತಿಯಾಗಿತ್ತು. ಇಬ್ಬರೂ ಮಕ್ಕಳು ಓದು ಹಾಗೂ ಉದ್ಯೋಗದ ಕಾರಣದಿಂದಾಗಿ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಆದರೆ, ಕಳೆದ ನಾಲ್ಕೈದು ದಿನದಿಂದ ಹೊರಗೆ ಬಾರದ ಮೀರಾ, ಗಂಡನನ್ನು ಕೊಂದು ಹಾಕಿದ್ದಾಳೆ.

ಮನೆಯಲ್ಲಿಯೇ ಶವವನ್ನು ಸುಡಲು ಯತ್ನಿಸಿದ ಕಾರಣ ಅಕ್ಕ-ಪಕ್ಕದ ಮನೆಯವರಿಗೆ ದುರ್ವಾಸನೆ ಸಹಿಸಿಕೊಳ್ಳಲು ಆಗಿಲ್ಲ. ಹಾಗಾಗಿ, ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಆಗ ಮನೆಯ ಮೇಲೆ ಹತ್ತಿದ ಮಹಿಳೆಯು ದೊಣ್ಣೆ ಹಿಡಿದು ಹೆದರಿಸಿದ್ದಾಳೆ. ಹಾಗೆಯೇ, ಮನೆಯೊಳಗೆ ಪೊಲೀಸರು ಬರಬಾರದು ಎಂದು ಬಾಗಿಲಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಿದ್ದಾರೆ.

ಪೊಲೀಸರು ಮನೆಯೊಳಗೆ ಪ್ರವೇಶಿಸಲು ಹೆಣಗಾಡಿದ್ದಾರೆ. ಕೊನೆಗೆ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಮನೆಯೊಳಗೆ ಹೋಗುವಷ್ಟರಲ್ಲಿ ಅಮರ್‌ನಾಥ್‌ ಸಿಂಗ್‌ ದೇಹ ಅರ್ಧ ಸುಟ್ಟಿತ್ತು. ಪೊಲೀಸರು ಮಹಿಳೆಯನ್ನು ಬಂಧಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮಹಿಳೆಯ ಮಾನಸಿಕವಾಗಿ ಸ್ಥಿಮಿತ ಕಳೆದುಕೊಂಡಿದ್ದರು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.

ಇದನ್ನೂ ಓದಿ: Holi tragedy : ಹೋಳಿ ಹಲಗೆ ಬಾರಿಸುವ ವಿಚಾರಕ್ಕೆ ಜಗಳ, ಹೊಟ್ಟೆಗೆ ಚಾಕುವಿನಿಂದ ಇರಿದು ಯುವಕನ ಕೊಲೆ

Exit mobile version