Site icon Vistara News

Weekly Horoscope : ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

horoscope today

ವಾರ ಭವಿಷ್ಯ

ಮೇಷ: ನಿಮಗೆ ರವಿ ಗ್ರಹದ ದಿವ್ಯ ಬೆಂಬಲ

ಯಾವುದೋ ಅಡೆತಡೆಗಳಿಗೂ ತಲೆ ಕೆಡಿಸಿಕೊಳ್ಳದ ಹಾಗೆ ರಾಶಿಯ ಅಧಿಪತಿ ಕುಜನು ಅರಿಷ್ಟದ ಕಿಲುಬನ್ನೆಲ್ಲ ನಿವಾರಿಸುವ ಚೈತನ್ಯ ನೀಡುತ್ತಾನೆ. ಮಕ್ಕಳ ಬಗೆಗೆ ಗಮನವಿರಲಿ. ಸುಖದ ವಿಚಾರದಲ್ಲಿ ಈ ವಾರ ಅದೃಷ್ಟದಿಂದಲೇ ನಿಮ್ಮ ಸಂಪನ್ನತೆ ದೊರಕುತ್ತದೆ. ಆದರೆ ನಿಮ್ಮ ವಿರುದ್ಧ ಕತ್ತಿ ಮಸೆಯುವ ವಿರೋಧಿಗಳು ಮಕ್ಕಳ ಮೂಲಕ ಕೆಟ್ಟ ಹೆಸರು ತರಲು ಎಲ್ಲ ರೀತಿಯ ಪ್ರಯತ್ನ ನಡೆಸಬಹುದಾಗಿದೆ, ಎಚ್ಚರವಿರಲಿ. ರಾಜಕೀಯದಲ್ಲಿ ಅದರಲ್ಲೂ ಹೊಸದೇ ಆದ ಸ್ಥಾನಮಾನ ಪಡೆಯುವಲ್ಲಿ ರವಿ ಗ್ರಹದ ದಿವ್ಯ ಬೆಂಬಲವಿದೆ. ಶ್ರೀ ನರಸಿಂಹನನ್ನು ಆರಾಧಿಸಿ.
ಶುಭ ಸಂಖ್ಯೆ: 6 ಶುಭ ದಿಕ್ಕು: ವಾಯವ್ಯ

ವೃಷಭ: ಪ್ರಮೋಷನ್‌ ವಿಳಂಬವಾಗಬಹುದು!

ದೋಷಮಯನಾದ ಕುಜನು ಮನಸ್ಸಿನ ಶಾಂತಿಯನ್ನು ಹಾಳು ಮಾಡಬಹುದು. ಕೆಟ್ಟ ಹೆಸರು ತರುವ ಯಾವುದೇ ರೀತಿಯ ಅತಿರೇಕಗಳಿಗೆ ಹೆಜ್ಜೆ ಇರಿಸದಿರಿ. ಹೀಗೆ ಎಚ್ಚರದ ಹೆಜ್ಜೆ ಇರಿಸುವಿರಾದರೆ ನಿಮ್ಮ ಬೌದ್ಧಿಕ ಕ್ರಿಯಾಶೀಲತೆಯಿಂದ ಅನೇಕ ರೀತಿಯ ಯಶಸ್ಸು ಸಂಪಾದಿಸುವಿರಿ. ಕೆಲಸದ ಸ್ಥಳದಲ್ಲಿ ಒತ್ತಡ ಇದ್ದೇ ಇದೆ. ನಿಶ್ಚಿತವಾದ ಪ್ರಮೋಷನ್‌ ಸಿಗಬೇಕಾದದ್ದು ತುಸು ವಿಳಂಬವಾಗುವಂತೆ ಮುಂದೂಡಲ್ಪಡುವ ಸಾಧ್ಯತೆಗಳು ಜಾಸ್ತಿಯಾಗಿದೆ. ಭೂಮಿಯ ವಿಷಯದಲ್ಲಿ ಮಹತ್ವದ ಬೆಳವಣಿಗೆ ಇದೆ. ಶಿವನನ್ನು ಆರಾಧಿಸಿ, ಗೆಲುವಿದೆ.
ಶುಭ ಸಂಖ್ಯೆ : 8 ಶುಭ ದಿಕ್ಕು: ನೈಋತ್ಯ

ಮಿಥುನ: ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳಿಲ್ಲ

ಆರೋಗ್ಯದ ಬಗೆಗೆ ಎಚ್ಚರ ಇರಲಿ. ಹಣಕಾಸಿನ ವಿಚಾರ ಸಮಸ್ಯೆ ತರಲಾರದು. ಮಕ್ಕಳ ವಿಷಯದಲಲಿ ತುಸು ಕಿರಿಕಿರಿ ಇರಬಹುದಾಗಿದೆ. ತಾಯಿ ರಾಜರಾಜೇಶ್ವರಿಯನ್ನು ಸ್ತುತಿಸಿ ಈ ದುಗಡಗಳಿಗೆ ತಡೆ ತನ್ನಿ. ನಿಮ್ಮ ಮನೆಯ ಜೀರ್ಣೋದ್ಧಾರ ಅಥವಾ ಏನೇ ಮರು ನಿರ್ಮಾಣದ ವಿಷಯಗಳ ಬಗ್ಗೆ ಯೋಚನೆ ಇಟ್ಟುಕೊಂಡಿದ್ದರೆ ಸೂಕ್ತವಾದ ಯೋಜನೆಗಳನ್ನು ನಿಖರವಾಗಿ ರೂಪಿಸಿಕೊಂಡು ಮುಂದಡಿ ಇಡಿ. ಸಿನಿಮಾ ತಯಾರಿಕೆ ಅಥವಾ ಡಿಸ್ಟ್ರಿಬ್ಯುಷನ್‌ ವಿಷಯಗಳಲ್ಲಿ ತೊಡಗಿಸಿಕೊಂಡವರಿಗೆ ಸರಳವಾದ ಹೆಜ್ಜೆಗಳಿಂದಲೇ ಲಾಭವಿದೆ. ಮಹಾಲಕ್ಷ್ಮೀಯನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ಕಟಕ: ಆರ್ಥಿಕ ವಿಚಾರದಲ್ಲಿ ಎಚ್ಚರಿಕೆ ಇರಲಿ

ಚಂದ್ರನು ತತ್ತರಿಸಿದ ಸಂದರ್ಭ ಇದಾಗಿದೆ. ನಿರಂತರವಾದ ಸಂಘರ್ಷ ಶನೈಶ್ವರನ ಜತೆಯಲ್ಲಿ ಕೊಂಡಿಕೂಡಿಸಿಕೊಂಡ ಚಂದ್ರನಿಂದಾಗಿ ಆರೋಗ್ಯ, ಲವಲವಿಕೆ, ಉತ್ಸಾಹಗಳೆಲ್ಲ ಕೈಗೂಡುವ ಸಾಧ್ಯತೆಗಳು ಅಧಿಕ. ಇಂದ್ರಿಯ ನಿಗ್ರಹ ಶಕ್ತಿ ಪ್ರದಾಯಕ ಮಾರುತಿಯನ್ನು ಆರಾಧಿಸಿ. ಆರ್ಥಿಕ ವಿಚಾರಗಳಲ್ಲಿ ಎಚ್ಚರ ಬೇಕೇಬೇಕು. ಕೊಡುವ ಯಾ ಪಡೆಯುವ ಹಣದ ವಿಚಾರ ಬಿಕ್ಕಟ್ಟುಗಳನ್ನು ಸೃಷ್ಟಿಸುವ ದಿನಗಳು ಇವು, ಜಾಗೃತವಾಗಿರಿ. ಬಾಳ ಸಂಗಾತಿಯ ವಿಚಾರದಲ್ಲಿ ಶಾಂತತೆಯಿಂದ ಇರಿ, ಜಗಳ ಬೇಡ. ರಾಮರಕ್ಷಾ ಸ್ತ್ರೋತ್ರ ಓದಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ಈಶಾನ್ಯ

ಸಿಂಹ: ನೀವಂದುಕೊಂಡಿದ್ದನ್ನು ಸಾಧಿಸಬಹುದು

ಗಣಪತಿಯ ಆಶೀರ್ವಾದವನ್ನು ಹೊಂದಿದ್ದೀರಿ. ನಿರ್ವಿಘ್ನವಾಗಿ ಕೆಲಸ ಕಾರ್ಯಗಳನ್ನು ನೆರವೇರಿಸುವ ಸೌಭಾಗ್ಯ ನಿಮ್ಮದಾಗಿದೆ. ಸೂರ್ಯನು ಶನೈಶ್ವರನ ಹಿಡಿತದಲ್ಲಿ ಬಂಧಿ ಎಂಬುದು ಕಾರಣವಾಗಿ, ಕೆಲವು ಸಲ ನಿಮ್ಮ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳು ಇವೆ. ತಾರುಣ್ಯದ ಬಿಸಿ ರಕ್ತದ ಜನ ಬೇಕಾಬಿಟ್ಟಿಯಾಗಿ ಹೆಜ್ಜೆ ಇಡಲು ಮುಂದಾಗದಿರಿ. ವಿವಾಹದ ಬಗೆಗಾಗಿನ ದಾರಿ, ದಾಂಪತ್ಯದ ದಾರಿ ಚೆಲ್ಲಾಪಿಲ್ಲಿ ಆದೀತು. ಕೆಲಸದ ಸ್ಥಳದಲ್ಲಿ ಪ್ರಮೋಷನ್‌ ಅಥವಾ ಕೆಲಸದ ಬದಲಾವಣೆಯಿಂದಾಗಿ ಸಂಬಳ ಏರಿಕೆಯಾಗಲು ಉತ್ತಮ ಅವಕಾಶಗಳಿವೆ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪೂರ್ವ

ಕನ್ಯಾ: ಶಾರದಾಂಬೆಯ ಬೆಂಬಲ ನಿಮಗಿದೆ

ಮಾತಿನ ಮೇಲೆ ಹಿಡಿತವಿರಲಿ. ಅನಾವಶ್ಯಕವಾದ ಘರ್ಷಣೆಗೆ ಅವಕಾಶ ಮಾಡಿಕೊಳ್ಳದಿರಿ. ಜಗನ್ಮಾತೆ ಶ್ರೀ ಶೃಂಗೇರಿಯ ಶಾರದಾಂಬೆಯ ಅಭಯ ಹಸ್ತ ನಿಮ್ಮ ಪಾಲಿಗಿದೆ. ಬಿಸಿಲಿನ ದಾರಿಯಿದ್ದರೂ ನಿಮ್ಮ ಮಕ್ಕಳಿಂದ ಬಿಸಿಲಿಗೂ ತಂಪು ಒದಗುವ ಸೌಕರ್ಯ ನಿಮಗೆ ಒದಗಿ ಬರುವ ಬಹು ಒಳಿತಿನ ಸಂದರ್ಭವಾಗಿದೆ ಇದು. ಮಹಾಕಾಳಿಯನ್ನು ಆರಾಧಿಸಿ. ಕಾರಣವಿರದೆ ಎದ್ದೇಳುವ ತಳಮಳ, ಬೇಸರ, ದಿಗಿಲುಗಳೆಲ್ಲ ಕರಿಗಿ ಮನದಲ್ಲಿ ನೆಲೆ ನಿಲ್ಲುವ ಶಾಂತಿ ಸಮಾಧಾನ ನಿಮ್ಮ ಅದೃಷ್ಟವಾಗಿದೆ. ಕಾಳಿಕಾಳನ್ನು ಸ್ತುತಿಸಿ, ಒಳಿತಿದೆ.
ಶುಭ ಸಂಖ್ಯೆ : 1 ಶುಭ ದಿಕ್ಕು: ದಕ್ಷಿಣ

ತುಲಾ: ತೊಳಲಾಟ ತಾಕಲಾಟಗಳ ವಾರ

ಕೇತು ಗ್ರಸ್ತ ರಾಶಿಯಲ್ಲಿ ಅಸಂಖ್ಯ ತೊಳಲಾಟಗಳನ್ನು ಸೃಷ್ಟಿಸುವ ತಾಕಲಾಟಗಳಿವೆ. ಕೆಲಸದ ಸ್ಥಳದಲ್ಲಿ ಹಲವು ರೀತಿಯ ಬಿಕ್ಕಟ್ಟುಗಳು ನಿಮ್ಮ ವರ್ತಮಾನವಾಗಿ ಎದ್ದೇಳುತ್ತವೆ. ಆದರೂ ಭಾಗ್ಯದಾಯಕ ಬುಧನು ಕೆಲಸದ ಸ್ಥಳದಲ್ಲಿ ನಿಮಗಾಗಿ ಸಹಾಯ ಹಸ್ತ ಚಾಚಿ ಒತ್ತಡಗಳ ನಡುವೆಯೂ ಮಿಂಚಿ ಮೇಲಾಧಿಕಾರಿಗಳ ಪ್ರಶಂಸೆಗೆ ನೀವು ಪ್ರಾಪ್ತರಾಗುತ್ತೀರಿ. ಸಾಲದ ಸುಳಿಯಲ್ಲಿ ಪರಿತಪಿಸುವ ವರ್ತಮಾನವನ್ನು ನಿರ್ಮಿಸಿಕೊಳ್ಳದಿರಿ. ಕಾರಣವಿರದೇ ವ್ಯಾಜ್ಯಗಳಲ್ಲಿ ಸಿಲುಕಿಹಾಕಿಕೊಳ್ಳುವ ಸಾಧ್ಯತೆ ಅಧಿಕ. ಶನೈಶ್ವರ, ಚಂದ್ರ ಪೀಡಾ ನಿವಾರಣಾ ಸ್ತೋತ್ರ ಓದಿದರೆ ಕ್ಷೇಮ.
ಶುಭ ಸಂಖ್ಯೆ : 3 ಶುಭ ದಿಕ್ಕು: ಆಗ್ನೇಯ

ವೃಶ್ಚಿಕ: ಷಣ್ಮುಖನನ್ನು ಆರಾಧಿಸಿದರೆ ಒಳಿತು

ದಾಂಪತ್ಯದ ವಿಚಾರಗಳಲ್ಲಿ ಎಚ್ಚರಿಕೆಯ ನಡೆ ಇರಲಿ. ಶಂಖಪಾಲ ಎನ್ನು ವಿಶೇಷ ಸರ್ಪದ ನೆರವಿನಿಂದ ಹಲವು ನಿಗೂಢ ಶಕ್ತಿಗಳನ್ನು ಸಂಪಾದಿಸಿಕೊಳ್ಳುವಿರಿ. ಆದರೆ ಈ ನಿಗೂಢ ಶಕ್ತಿಯ ನೆರವು ನಿಮ್ಮ ಆಧ್ಯಾತ್ಮಿಕ ಕ್ರಿಯಾಶೀಲತೆ ಹಾಗೂ ಚಿಂತನಗಳನ್ನು ಸಂವರ್ಧಿಸುವ ನೆಲೆಯಲ್ಲಿ ಸಹಾಯಕ್ಕೆ ಬರಬಹುದೇ ಹೊರತೂ ಲೌಖಿಕ ಸಂಗತಿಗಳಲ್ಲಿ ವಿಶೇಷ ಬೆಂಬಲಕ್ಕೆ ಒದಗಲಾರದು. ಹಲವು ಯಶಸ್ಸುಗಳಿಗಾಗಿನ ವಿಚಾರದಲ್ಲಿ ಕಾಲದ ನೆರವಿದೆ ಸದ್ಯ. ನಿಮ್ಮ ಆರಾಧ್ಯ ದೈವವನ್ನೂ, ಷಣ್ಮುಖ ದೇವರನ್ನೂ ಸ್ತುತಿಸಿ, ಒಳಿತಿನ ದಾರಿ ತೆರೆಯಲಿದೆ.
ಶುಭ ಸಂಖ್ಯೆ : 9 ಶುಭ ದಿಕ್ಕು: ವಾಯ್ಯವ

ಧನಸ್ಸು: ಶರಣಾಗತಿ ಒಂದೇ ಒಳಿತಿಗೆ ದಾರಿ

ಸಾಡೇಸಾತಿ ತೊಂದರೆಯಿಂದ ನೀವು ಹೊರ ಬಂದಿದ್ದೀರಿ. ಆದರೆ ಸಮಸ್ಯಾತ್ಮಕವಾದ ರಾಹುವು ನಿಮ್ಮ ಪುಣ್ಯದ ಬಲವನ್ನು ಹೊಸೆದು ಚೆಲ್ಲುತ್ತಿದ್ದಾನೆ. ನಿರೀಕ್ಷಿತವಾದ, ಗುರುತುರ ಯಶಸ್ಸಿನ ದಾರಿಯಲ್ಲಿ ಕೆಂಡದ ಮಳೆದಸುರಿಯಲು ಇದೀಗ ನಿಮ್ಮ ಕನಸು ಬಾಡಬಹುದಾದ ದುಸ್ತರವಾದ ಸ್ಥಿತಿ ಇನ್ನೂ ಚಾಲನೆಯಲ್ಲಿದೆ. ಪ್ರಬಲದವಾದ ನಾರಾಯಣಾಸ್ತ್ರವನ್ನು ಪಾಂಡವರ ವಿರುದ್ಧ ಪ್ರಯೋಗಿಸಿದಾಗ ನಾರಾಯಣ ಧ್ಯಾನವೇ ಅವರನ್ನು ಅಪಾಯದಿಂದ ಪಾರು ಮಾಡಿತಂತೆ. ನೀವೂ ನಾರಾಯಣನನ್ನು ಸ್ತುತಿಸಿ, ಗೆಲ್ಲಿ. ಶರಣಾಗತಿ ಒಂದೇ ಒಳಿತಿಗೆ ದಾರಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ಜ್ಯೋತಿಷ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ.

ಮಕರ: ಶಿವ ಶಿವ ಎಂದರೆ ಭಯವಿಲ್ಲ…

ಸಮುದ್ರ ತೀರದಲ್ಲಿ ಅಥವಾ ಬೆಟ್ಟ ಗುಡ್ಡಗಳಲ್ಲಿರುವ ಪಾವನಮಯ ಶಿವ ಕ್ಷೇತ್ರಗಳ ದೊರೆಯಾದ ಶಿವನನ್ನು ಸ್ತುತಿಸಿ, ತಾಪಸ್ಸಯದಾಯಕನಾದ ಶನೈಶ್ವರನನ್ನು ಒಲಿಸಿಕೊಳ್ಳಿ. ಆರ್ಥಿಕ ಸಿದ್ಧಿಗೆ ಸ್ವತಃ ರಾಶ್ಯಾಧಿಪತಿಯಾದ ಶನೈಶ್ವರನೇ ದಾರಿ ನಿರ್ಮಿಸುವನಾದರೂ ಖರ್ಚಿನ ದಾರಿಗೆ ಅಡಿಗಲ್ಲು ಇಡುವ ಸೂರ್ಯ ನಿಮ್ಮ ಪರಮ ವಿರೋಧಿಯಾಗಿ ಕಾರ್ಯ ನಿರ್ವಹಿಸುತ್ತಾನೆ. ಸೂರ್ಯ ಪೀಡಾ ನಿವಾರಣಾ ಸ್ತ್ರೋತ್ರ ಓದಿ. ಗೋದಿ ಕಾಳುಗಳನ್ನು ಹೂ ಗಿಡದ ತಳದಲ್ಲಿ, ಯಾರೂ ತುಳಿಯದ ಜಾಗೆಯಲ್ಲಿ ಚೆಲ್ಲಿ, ಇದರಿಂದ ಒಳಿತಿದೆ.
ಶುಭ ಸಂಖ್ಯೆ : 2 ಶುಭ ದಿಕ್ಕು: ಆಗ್ನೇಯ

ಕುಂಭ: ಮೃದು ಮಾತಿನಿಂದ ಮಾರು ಗೆಲ್ಲಿ!

ಸಾಡೇಸಾತಿ ಶನಿ ಕಾಟದ ದಟ್ಟ ಕಾರ್ಮೋಡದ ದಿನಗಳು. ಮನದ ಶಾಂತಿಯನ್ನು ಅಲ್ಲೋಲ ಕಲ್ಲೋಲಗೊಳಿಸುವ ಚಂದ್ರ ಬಾಧಕನಾಗಿದ್ದಾನೆ. ಶತ್ರುಗಳ ಕಸುವನ್ನು, ಶಕ್ತಿಯನ್ನು ಸಂವರ್ಧಿಸಿ ನಿಮ್ಮನ್ನು ದುರ್ಬಲವಾಗಿಸುವ ಅತಿರೇಕಗಳಿಗೆ ಕೈ ಹಾಕುತ್ತಾನೆ. ಅದರೆ ಪ್ರಬಲವಾದ ಕಾರ್ಕೋಟಕ ಶಕ್ತಿಯು ಶ್ರೀ ಹರಿಯ ರೂಪದಲ್ಲಿ ನಿಮ್ಮನ್ನು ಕಾಪಾಡುವ ಸಂಜೀವಿನಿಯೂ ಆಗಿರುತ್ತದೆ. ಐಟಿ, ಬಿಟಿ, ಟೆಕ್ಕಿಗಳು ಮಾತಿನ ಮೇಲಿನ ನಿಯಂತ್ರಣ ಸೂಕ್ತವಾಗಿ ಸಾಧಿಸಿ, ಪರಿಣಾಮಕಾರಿಯಾದ ಮಾತುಗಳನ್ನು ಮೃದುವಾಗಿ ಆಡಿದರೆ ಹಲವನ್ನು ಗೆಲ್ಲುವಿರಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ಪೂರ್ವಾ

ಮೀನ: ನಿಮಗೀಗ ಮಾತೇ ಮಾಣಿಕ್ಯ

ಬುಧನೇ ಸಂರಕ್ಷಕ ಎಂಬುದನ್ನು ಅರಿತಿರಿ. ಸಾಡೇಸಾತಿ ಕಾಟದಿಂದ ಮನಸ್ಸು ರೋಸಿ ಹೋಗಿ ಇನ್ನಿಲ್ಲದ ತಾಪತ್ರಯಗಳಿಗೆ ದಾರಿ ಮಾಡಿಕೊಳ್ಳದಂತೆ ವಿವೇಕ ಚಾತುರ್ಯ, ಬುದ್ಧಿವಂತಿಕೆ, ತಾಳ್ಮೆಯಿಂದ ಸನ್ನಿವೇಶಗಳನ್ನು ಗೆಲ್ಲಿ. ಬುಧನು ಈ ವಿಚಾರದಲ್ಲಿ ನಿಮಗೆ ಸಹಾಯಕ. ಭಗವಾನ್‌ ಮಹಾವಿಷ್ಣುವನ್ನು ಆರಾಧಿಸಿ. ಅನಂತನೂ, ಶುಭಾಂಗನೂ ಆದ ಮಹಾವಿಷ್ಣುವು ಭಗವತಿಯಾದ ಶ್ರೀ ಲಲಿತೆಯನ್ನು ನಿಮ್ಮ ಸೌಭಾಗ್ಯಕ್ಕಾಗಿ ಪ್ರೇರೇಪಿಸುತ್ತಾನೆ. ಅರ್ಥಿಕ ವಿಚಾರವನ್ನೂ, ನಾಲಿಗೆಯ ಮೇಲಿನ ಹಿಡಿತವನ್ನೂ ಸೂಕ್ತವಾಗಿ ನಿಯಂತ್ರಿಸಿ.
ಶುಭ ಸಂಖ್ಯೆ :5 ಶುಭ ದಿಕ್ಕು: ನೈಋತ್ಯ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ : Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version